Don't Miss!
- Finance ಬೆಂಗಳೂರು-ತುಮಕೂರು ನಮ್ಮ ಮೆಟ್ರೋ ಯೋಜನೆ: ಬರಲಿವೆ 19 ಎತ್ತರದ ನಿಲ್ದಾಣಗಳು
- News ಬೆಳಗಾವಿಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪ: ಲಕ್ಷ್ಮಿ ಹೆಬ್ಬಾಳ್ಕರ್ಗೆ ಸಮನ್ಸ್ ಜಾರಿ
- Technology iPhone: ಆಪಲ್ ಅಂತಿಮವಾಗಿ ಐಫೋನ್ 12 ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿಯೇ ಬಿಟ್ಟಿತು! ಏನದು?
- Automobiles Tata Nexon: ಟಾಟಾ ನೆಕ್ಸಾನ್ ಹೊಸ ರೂಪಾಂತರಗಳು ಬಿಡುಗಡೆ, ರೂ.10 ಲಕ್ಷ ಬೆಲೆ.. ಆಕರ್ಷಕ ವೈಶಿಷ್ಟ್ಯಗಳು
- Sports Riyan Parag: 'ಗಾಯದಿಂದ ಮೂರು ದಿನ ಒದ್ದಾಡಿ ಹೋಗಿದ್ದೆ': ರಿಯಾನ್ ಪರಾಗ್
- Lifestyle ಗುಡ್ಫ್ರೈಡೆ ಆಚರಣೆ ಹುಟ್ಟಿದ್ದು ಹೇಗೆ? ಇದರ ಮಹತ್ವವೇನು ಗೊತ್ತಾ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವೇದಿಕೆ ಮೇಲೆ ಅಂಬಿಗೆ ಮುತ್ತು ಕೊಟ್ಟ ನಟಿ ಹರ್ಷಿಕಾ
ನಟ ಶಿವರಾಜ್ ಕುಮಾರ್ ಹಾಗೂ ಸುದೀಪ್ ನಟನೆಯ 'ದಿ ವಿಲನ್' ಸಿನಿಮಾದ ಅದ್ದೂರಿ ಆಡಿಯೋ ಕಾರ್ಯಕ್ರಮ ದುಬೈ ನಲ್ಲಿ ನಡೆದಿದೆ. ಕಳೆದ ಶುಕ್ರವಾರ ಸಿನಿಮಾದ ಕಾರ್ಯಕ್ರಮ ನಡೆದಿದ್ದು, ಸಖತ್ ಕಲರ್ ಫುಲ್ ಆಗಿ ಇತ್ತು. ಅಂದಹಾಗೆ, ಈ ಕಾರ್ಯಕ್ರಮ ಅನೇಕ ವಿಶೇಷತೆಗಳನ್ನು ಹೊಂದಿತ್ತು.
ನಟ ಸುದೀಪ್ ಅವರನ್ನು ಹೊರತು ಪಡಿಸಿ ಇಡೀ ಚಿತ್ರತಂಡ ಕಾರ್ಯಕ್ರಮದಲ್ಲಿ ಭಾಗಿಯಾಗಿತ್ತು. ನಟ ಶಿವರಾಜ್ ಕುಮಾರ್, ನಟಿ ಆಮಿ ಜಾಕ್ಸನ್, ನಿರ್ದೇಶಕ ಪ್ರೇಮ್, ನಿರ್ಮಾಪಕ ಸಿ ಆರ್ ಮನೋಹರ್ ಹಾಗೂ ಅರ್ಜುನ್ ಜನ್ಯ ಕಾರ್ಯಕ್ರಮದಲ್ಲಿ ಹಾಜರಿದ್ದರು.
ದುಬೈನಲ್ಲಿ ನಡೆದ 'ವಿಲನ್' ಆಡಿಯೋ ಲಾಂಚ್ ಗೆ ಸುದೀಪ್ ಹೋಗಿಲ್ಲ ಯಾಕೆ.?
ರೆಬಲ್ ಸ್ಟಾರ್ ಅಂಬರೀಶ್ ಈ ಕಾರ್ಯಕ್ರಮ ಮುಖ್ಯ ಅತಿಥಿಯಾಗಿದ್ದರು.ಈ ವೇಳೆ ವೇದಿಕೆ ಮೇಲೆ ಕುಣಿಯುತ್ತಿದ್ದ ಅವರಿಗೆ ಹರ್ಷಿಕಾ ಪೂಣಚ್ಛ ಪ್ರೀತಿಯಿಂದ ಮುತ್ತು ನೀಡಿದ್ದಾರೆ. ಮುಂದೆ ಓದಿ...
ಕಾರ್ಯಕ್ರಮದಲ್ಲಿ ಅಂಬರೀಶ್ ಅವರಿಗೆ ಟ್ರಿಬ್ಯೂಟ್
ದುಬೈ ನಲ್ಲಿ ನಡೆದ 'ದಿ ವಿಲನ್' ಕಾರ್ಯಕ್ರಮದಲ್ಲಿ ನಟ ಅಂಬರೀಶ್ ಮುಖ್ಯ ಅತಿಥಿಯಾಗಿದ್ದರು. ಕಾರ್ಯಕ್ರಮದಲ್ಲಿ ಅಂಬರೀಶ್ ಅವರಿಗೆ ಟ್ರಿಬ್ಯೂಟ್ ನೀಡಲಾಗಿತ್ತು. 'ಈ ಕನ್ನಡ ಮಣ್ಣನು ಮರಿಬೇಡ...' ಹಾಡು ಸೇರಿದಂತೆ ಅಂಬರೀಶ್ ಅವರ ಸೂಪರ್ ಹಿಟ್ ಹಾಡುಗಳಿಗೆ ಹರ್ಷಿಕಾ ಪೂಣಚ್ಛ ಹೆಜ್ಜೆ ಹಾಕಿದರು.
ಅಂಬಿಗೆ ಪ್ರೀತಿಯ ಚುಂಬನ
ಅಂಬರೀಶ್ ಹಾಡುಗಳಿಗೆ ನೃತ್ಯ ಮಾಡಿದ ನಟಿ ಹರ್ಷಿಕಾ ಪೂಣಚ್ಛ ಕೊನೆಗೆ ವೇದಿಕೆ ಮೇಲೆ ಬಂದ ಅಂಬಿ ಅವರಿಗೆ ಪ್ರೀತಿಯಿಂದ ತಬ್ಬಿಕೊಂಡು ಮುತ್ತು ಕೊಟ್ಟರು. ಅಂಬರೀಶ್ ಕೂಡ ತಮ್ಮ ಹಾಡುಗಳಿಗೆ ಕುಣಿದರು. ಅಂಬಿ ಕುಣಿತ ಕಂಡ ಅವರ ಅಭಿಮಾನಿಗಳು ಶಿಳ್ಳೆ ಚೆಪ್ಪಾಳೆ ಹೊಡೆದರು.
ದುಬೈ ನೆಲದಲ್ಲಿ ಹಾಡಿ ಕುಣಿದ 'ದಿ ವಿಲನ್'
ಶಿವಣ್ಣ ಜೊತೆ ಆಮಿ ಡ್ಯಾನ್ಸ್
ಶಿವರಾಜ್ ಕುಮಾರ್ ಹಾಗೂ ಆಮಿ ಜಾಕ್ಸನ್ ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಆಗಿದ್ದರು. ಇಬ್ಬರ ಡ್ಯಾನ್ಸ್ ನೋಡಿ ದುಬೈ ಕನ್ನಡಿಗರು ಖುಷಿ ಪಟ್ಟರು. 'ದಿ ವಿಲನ್' ಸಿನಿಮಾದ 'ನೋಡವಳಾಂದವ...' ಹಾಡಿಗೆ ಶಿವಣ್ಣ ಜೊತೆಗೆ ಆಮಿ ಜಾಕ್ಸನ್ ಕುಣಿದು ಕುಪ್ಪಳಿಸಿದರು.
ನಾಯಕಿಯರ ನೃತ್ಯ
ಕಾರ್ಯಕ್ರಮದ ಸುಂದರ ಸಂಜೆಯಲ್ಲಿ ಕನ್ನಡದ ಕೆಲ ನಟಿಯರ ನೃತ್ಯ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ನಟಿ ಭಾವನಾ ರಾವ್, ಕಾರುಣ್ಯ ರಾಮ್, ಸೋನು ಗೌಡ ಸೇರಿದಂತೆ ಕೆಲ ನಟಿಯರು ಕಾರ್ಯಕ್ರಮವನ್ನು ಹೆಚ್ಚು ಕಲರ್ ಫುಲ್ ಆಗುವಂತೆ ಮಾಡಿದರು.
ಸುದೀಪ್ ಬರಲಿಲ್ಲ ಯಾಕೆ?
ಒಂದು ನಿರಾಸೆಯ ಸಂಗತಿ ಎಂದರೆ ಈ ಕಾರ್ಯಕ್ರಮಕ್ಕೆ ಸುದೀಪ್ ಬರಲು ಸಾಧ್ಯ ಆಗಲಿಲ್ಲ. ಸುದೀಪ್ ನೇತೃತ್ವದಲ್ಲಿ ಸೆಪ್ಟಂಬರ್ 8, 9 ರಂದು ಕನ್ನಡ ಚಲನಚಿತ್ರ ಕಪ್ ಕ್ರಿಕೆಟ್ ಟೂರ್ನಮೆಂಟ್ ನಡೆಯುತ್ತಿದೆ. ಬಹುಶಃ ಈ ಟೂರ್ನಿಯ ಬ್ಯುಸಿಯಲ್ಲಿ ದುಬೈಗೆ ಹೋಗಲು ಸಾಧ್ಯವಾಗದೇ ಇರಬಹುದು. ಅಥವಾ 'ಪೈಲ್ವಾನ್', 'ಕೋಟಿಗೊಬ್ಬ-3' ಹಾಗೂ ತೆಲುಗಿನ 'ಸೈರಾ ನರಸಿಂಹ ರೆಡ್ಡಿ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಗಳ ಶೂಟಿಂಗ್ ಕಾರಣವಾಗಿರಬಹುದಾ.? ನಿಜವಾದ ಕಾರಣ ಗೊತ್ತಿಲ್ಲ.