Don't Miss!
- Technology Tecno: ಬಹುನಿರೀಕ್ಷಿತ ಟೆಕ್ನೋ ಪೋವಾ 6 ಪ್ರೊ ಲಾಂಚ್! 12GB RAM.. 6000mAh ಬ್ಯಾಟರಿ.. ಬೆಲೆ ಎಷ್ಟು?
- News ಬಿಜೆಪಿ 400 ಸ್ಥಾನ ಪಡೆಯಲು ಹರಸಾಹಸ ಪಡುತ್ತಿರುವುದ್ಯಾಕೆ.?-ಯತೀಂದ ಸಿದ್ದರಾಮಯ್ಯ ಹೇಳಿದ್ದೇನು?
- Sports CSK vs RCB: ದಾಖಲೆಯ ಪುಟ ಸೇರಿದ ಉದ್ಘಾಟನಾ ಪಂದ್ಯ: 16.8 ಕೋಟಿ ಜನರಿಂದ ವೀಕ್ಷಣೆ
- Finance ಮೃತರ ಖಾತೆಯಲ್ಲಿರುವ ಹಣವನ್ನು ಕುಟುಂಬಸ್ಥರು ಡ್ರಾ ಮಾಡಬಹುದಾ, ಬ್ಯಾಂಕ್ ನಿಯಮಾವಳಿ ಏನು ಹೇಳುತ್ತೆ?
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Lifestyle ಬಾಯಲ್ಲಿ ನೀರು ತರಿಸುವ ಮಾವಿನ ಕಾಯಿ ಚಟ್ನಿ..! 5 ನಿಮಿಷದಲ್ಲಿ ರೆಡಿ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮುತ್ತಣ್ಣನ ಮಗಳ ಮದುವೆಗೆ ಕುಮಾರನಿಗಿಲ್ಲ ಆಹ್ವಾನ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಜೇಷ್ಠ ಪುತ್ರಿ ನಿರುಪಮಾ ಅವರ ಮದುವೆ ಆಗಸ್ಟ್ 31 ರಂದು ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಬಹಳ ವೈಭವದಿಂದ ಜರುಗಿತ್ತು ಎಂದು ನಿಮಗೆಲ್ಲಾ ತಿಳಿದೇ ಇದೆ.
ಇಷ್ಟೊಂದು ಅದ್ಧೂರಿಯಾಗಿ ನೆರವೇರಿದ ಡಾ.ನಿರುಪಮಾ ಹಾಗು ಡಾ.ದಿಲೀಪ್ ಮದುವೆಯಲ್ಲಿ ಇಡೀ ಚಿತ್ರರಂಗದ ಗಣ್ಯರು ಸೇರಿದಂತೆ ರಾಜಕೀಯ ನಾಯಕರುಗಳು ಕೂಡ ಹಾಜರಿದ್ದು, ನೂತನ ವಧುವರರಿಗೆ ಆಶೀರ್ವದಿಸಿದ್ದರು.[ಮದುವೆಯಲ್ಲಿ ಜನ ಜಾತ್ರೆ : ಶಿವಣ್ಣ ಕುಟುಂಬಕ್ಕೆ ಸಿಗದ ಊಟ.!]
ಇದೀಗ ವಿಷ್ಯಾ ಏನಪ್ಪಾ ಅಂದ್ರೆ ಆಮಂತ್ರಣ ಪತ್ರಿಕೆ ಕೊಟ್ಟವರಲ್ಲಿ ಕೆಲವರು ಬಂದಿದ್ದರು, ಕೆಲವರು ಬಂದಿರಲಿಲ್ಲ. ಆದ್ರೆ ಧಾರೆ ಎರೆದು ಕೊಡಬೇಕಿದ್ದ ಸೋದರ ಮಾವನೇ ಮದುವೆಗೆ ಬಂದಿರಲಿಲ್ಲ.[ಶಿವಣ್ಣ ಮಗಳ ಮದುವೆಗೆ 'ಇವರೆಲ್ಲಾ' ಬರ್ಲಿಲ್ಲ, ಯಾಕೆ?]
ಹೌದು ಮದುಮಗಳು ನಿರುಪಮಾ ಅವರ ಸೋದರ ಮಾವನಾದ ಕುಮಾರ್ ಬಂಗಾರಪ್ಪನವರಿಗೆ ಈ ಅದ್ದೂರಿ ಮದುವೆಗೆ ಆಹ್ವಾನವಿರಲಿಲ್ಲವಂತೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಗೀತಾ ಶಿವರಾಜ್ ಕುಮಾರ್ ಅವರ ಸೋದರ ಕುಮಾರ್ ಬಂಗಾರಪ್ಪ "ನನಗೆ ಸೋದರ ಸೊಸೆಯ ಮದುವೆಯ ಆಮಂತ್ರಣ ಪತ್ರಿಕೆ ನೀಡಲಿಲ್ಲ, ಆದರೆ ಆಮಂತ್ರಣ ಪತ್ರಿಕೆ ನೀಡಲಾಗಿದೆ ಎಂದು ಹೇಳಿರುವ ಮಾಹಿತಿ ನಿಜವಲ್ಲ' ಎಂದು ನುಡಿದಿದ್ದಾರೆ.[ಚಿತ್ರಗಳು: ದೊಡ್ಮನೆ ಮೊಮ್ಮಗಳ ಮದುವೆಯ ಅದ್ಧೂರಿ ಕ್ಷಣಗಳು]
ಇಲ್ಲಿಯವರೆಗೂ ಕಂಡಿರದಂತಹ ಅದ್ದೂರಿ ಮದುವೆಗೆ ಇಡೀ ಚಿತ್ರರಂಗ ಹಾಗೂ ಶಿವಣ್ಣ ಅವರ ಅಭಿಮಾನಿಗಳು ಸಾಕ್ಷಿಯಾಗಿದ್ದರು. ಆದರೆ ವಿಷಾದದ ಸಂಗತಿ ಏನಪ್ಪಾ ಅಂದ್ರೆ ಮದುವೆಗೆ ಆಗಮಿಸಬೇಕಿದ್ದ ಸೋದರ ಮಾವನೇ ಆಗಮಿಸದೇ ಇದ್ದದ್ದರಿಂದ ಮದುವೆ ಸಂಭ್ರಮದಲ್ಲಿ ಕುಮಾರ್ ಬಂಗಾರಪ್ಪನವರ ಗೈರು ಹಾಜರಿ ಎದ್ದು ಕಾಣುತ್ತಿತ್ತು.