Don't Miss!
- Sports
Ranji Trophy: ಕರ್ನಾಟಕ ಮಾರಕ ದಾಳಿಗೆ ತತ್ತರಿಸಿದ ಉತ್ತರಾಖಂಡ: 116 ರನ್ಗಳಿಗೆ ಆಲೌಟ್
- News
Breaking; ಸಹೋದರನ ವಿರುದ್ಧ ಅಭ್ಯರ್ಥಿ ಘೋಷಿಸಿದ ರೆಡ್ಡಿ!
- Lifestyle
ಫೆ.1ಕ್ಕೆ ಜಯ ಏಕಾದಶಿ: ಈ ರೀತಿ ಮಾಡಿದರೆ ದಾರಿದ್ರ್ಯ ಹೋಗಿ ಸಂಪತ್ತು ವೃದ್ಧಿಸುವುದು
- Automobiles
ಭಾರತದಲ್ಲಿ ಮೊದಲ ಬಾರಿಗೆ 2.5 ಕೋಟಿ ಕಾರುಗಳ ಮಾರಾಟ ಮೈಲಿಗಲ್ಲು ಸಾಧಿಸಿದ ಜನಪ್ರಿಯ ಕಂಪನಿ
- Finance
Economic Survey: ಶೇ.6-6.8 ಜಿಡಿಪಿ ಬೆಳವಣಿಗೆ, 3 ವರ್ಷದಲ್ಲೇ ಮಂದಗತಿ
- Technology
ಬಿಎಸ್ಎನ್ಎಲ್ನ ಈ ಪೋಸ್ಟ್ಪೇಯ್ಡ್ ಪ್ಲ್ಯಾನ್ ಬೆಲೆ ಅಗ್ಗ; ಆದ್ರೆ, ರೀಚಾರ್ಜ್ ಕಷ್ಟ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಕೆ ಮಂಜು ಯಾರು ಗೊತ್ತಿಲ್ಲ, ಕೆಲವರಿಗೆ ನಾನು ಖಳನಾಯಕ ಆಗಿದ್ದೇನೆ' - ಸಚಿವ ಸುಧಾಕರ್
ಚಿತ್ರಮಂದಿರಗಳಲ್ಲಿ ಮತ್ತೆ 50 ಪರ್ಸೆಂಟ್ ಆದೇಶ ಹೊರಡಿಸಿದ್ದಕ್ಕೆ ಚಿತ್ರರಂಗದ ಹಲವರು ವಿರೋಧ ವ್ಯಕ್ತಪಡಿಸಿದ್ದರು. ನಿರ್ಮಾಪಕ ಕೆ ಮಂಜು ಮಾತನಾಡಿ ''ಸಚಿವ ಸುಧಾಕರ್ ಅವರಿಗೆ ಖಾತೆ ಬದಲಾಯಿಸಿ, ಬೇರೆ ಯಾರಿಗಾದರೂ ಖಾತೆಯ ಜವಾಬ್ದಾರಿ ಕೊಡಿ'' ಎಂದು ಆಗ್ರಹಿಸಿದ್ದರು.
ಕೆ ಮಂಜು ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಡಾ ಸುಧಾಕರ್ ''ಕೆ ಮಂಜು ಯಾರು ಎಂದೇ ಗೊತ್ತಿಲ್ಲ, ಕೆಲವರಿಗೆ ನಾನು ಖಳನಾಯಕ ಆಗಿ ಕಾಣುತ್ತಿದ್ದೇನೆ'' ಎಂದಿದ್ದಾರೆ
ಚಿತ್ರರಂಗದ
ಮನವಿಗೆ
ಮನ್ನಣೆ:
ಚಿತ್ರಮಂದಿರದ
ಮೇಲೆ
ಹೇರಿದ್ದ
ನಿರ್ಬಂಧ
ಸಡಿಲಿಕೆ
''ಕೆ ಮಂಜು ಯಾರು ಎನ್ನುವುದು ನನಗೆ ಗೊತ್ತಿಲ್ಲ. ಕೆಲವರ ಪಾಲಿಗೆ ನಾನು ಖಳನಾಯಕನಾಗಿ ಕಾಣಿಸುತ್ತಿದ್ದೇನೆ. ಆದರೆ, ಬಹಳಷ್ಟು ಜನರಿಗೆ ಒಬ್ಬ ನಾನು ಆರೋಗ್ಯ ಸಚಿವನಾಗಿ ಏನು ಮಾಡಬೇಕು ಅದನ್ನು ಅಂತಃಕರಣದಿಂದ ಮಾಡುತ್ತಿದ್ದೇನೆ. ಹಾಗಾಗಿ, ಇಂತಹದಕ್ಕೆಲ್ಲಾ ನಾನು ತಲೆಕೆಡಿಸಿಕೊಳ್ಳುವುದಿಲ್ಲ'' ಎಂದು ಹೇಳಿದ್ದಾರೆ.
ಪ್ರತಿ ಬಾರಿ ಮಾತನಾಡಬೇಕಾದರೂ 'ಜನರ ಆರೋಗ್ಯ ಮುಖ್ಯ' ಎಂದು ಒತ್ತಿ ಒತ್ತಿ ಹೇಳುತ್ತಿದ್ದ ಸುಧಾಕರ್ ಅವರು, ಥಿಯೇಟರ್ಗಳ ವಿಚಾರದಲ್ಲಿ ಹೆಚ್ಚುವರಿಯಾಗಿ ಕಾಲಾವಕಾಶ ಕೊಟ್ಟಿದ್ದೇಕೆ ಎಂಬ ಪ್ರಶ್ನೆಯನ್ನು ಮಾಧ್ಯಮದವರು ಕೇಳಿದರು.
ಇದಕ್ಕೆ ಉತ್ತರಿಸಿದ ಸಚಿವ ಸುಧಾಕರ್ ''ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಆಗಿರುತ್ತದೆ, ಹಣ ಹಿಂತಿರುಗಿಸಲು ಸಾಧ್ಯವಿಲ್ಲ ಎಂಬ ಬೇಡಿಕೆಯನ್ನು ಸಿಎಂ ಮುಂದೆ ಇಟ್ಟಿದ್ದರು. ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಸಿಎಂ ಈ ನಿರ್ಧಾರ ಪ್ರಕಟಿಸಿದ್ದಾರೆ'' ಎಂದು ಸ್ಪಷ್ಟನೆ ನೀಡಿದ್ದಾರೆ.
Recommended Video
ಇದಕ್ಕೂ ಮುಂಚೆ ಮಾಧ್ಯಮಗಳ ಜೊತೆ ಮಾತನಾಡಿದ್ದ ನಿರ್ಮಾಪಕ ಕೆ ಮಂಜು ''60-70 ಕೋಟಿ ಬಂಡವಾಳ ಹಾಕಿ ಸಿನಿಮಾ ಮಾಡಿರ್ತಾರೆ. 1ನೇ ತಾರೀಖು ಸಿನಿಮಾ ರಿಲೀಸ್ ಆಗುತ್ತೆ, 2ನೇ ತಾರೀಖು 50 ಪರ್ಸೆಂಟ್ ಅಂದ್ರೆ ಹೇಗೆ? ಏಕಾ ಏಕಿ ಈ ನಿರ್ಧಾರ ಏಕೆ? ಪದೇ ಪದೇ ಚಿತ್ರರಂಗ ಮತ್ತು ಜಿಮ್ ಟಾರ್ಗೆಟ್ ಮಾಡುವುದು ಏಕೆ?'' ಎಂದು ಪ್ರಶ್ನಿಸಿದ್ದರು.