Don't Miss!
- News Lok Sabha Election 2024 Phase 1 Polling LIVE: ಲೋಕಸಭಾ ಚುನಾವಣೆ 2024ರ ಮೊದಲ ಹಂತದ ಮತದಾನ!
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಠಾರಿವೀರ ಚಿತ್ರದಲ್ಲಿ ಹಿಂದು ದೇವತೆಗಳಿಗೆ ಅಪಮಾನ
'ಕಠಾರಿವೀರ ಸುರಸುಂದರಾಂಗಿ' ಚಿತ್ರದಲ್ಲಿ ಹಿಂದೂ ದೇವತೆಗಳನ್ನು ಅವಹೇಳನಕಾರಿಯಾಗಿ ಬಿಂಬಿಸಿ, ಪೌರಾಣಿಕ ಪಾತ್ರ ಹಾಗೂ ಸಂಭಾಷಣೆಗಳ ಮೂಲಕ ಹಿಂದೂ ದೇವತೆಗಳನ್ನುಅವಮಾನಿಸಲಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿ ತೀವ್ರವಾಗಿ ಖಂಡಿಸಿದೆ.
ಚಲನಚಿತ್ರದಲ್ಲಿ ಹಿಂದೂ ದೇವತೆಗಳನ್ನು ಪುರಾಣದ ಆಧಾರದಲ್ಲಿನ ಪಾತ್ರಗಳ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗೆ ಘಾಸಿಯುಂಟು ಮಾಡಿದೆ. ಇದರಲ್ಲಿ ಕೇವಲ ಪಾತ್ರಗಳಲ್ಲದೇ ಅನೇಕ ಸಂಭಾಷಣೆಗಳ ಮೂಲಕವೂ ದೇವತೆಗಳನ್ನು ಹೀನ ಮಟ್ಟದಲ್ಲಿ ವಿಡಂಬನೆ ಮಾಡಲಾಗಿದೆ ಎಂದು ಸಮಿತಿ ದೂರಿದೆ. ಹಿಂದೂ ಜನಜಾಗೃತಿ ಸಮಿತಿ ಪಟ್ಟಿ ಮಾಡಿರುವ ಚಿತ್ರದಲ್ಲಿನ ಕೆಲ ಅವಹೇಳನಕಾರಿ ಅಂಶಗಳು ಮುಂದಿನಂತಿವೆ.
1. 'ಶ್ರೀರಾಮ ಮತ್ತು ಶ್ರೀಕೃಷ್ಣನೇ ತಪ್ಪು ಮಾಡಿರುವಾಗ, ಅಲ್ಲದೇ ತಪ್ಪುಗಳನ್ನು ಮಾಡಿಸಿರುವಾಗ ಅವರಿಗೇಕೆ ಶಿಕ್ಷೆ ನೀಡಲಿಲ್ಲ. ಮನುಷ್ಯರಿಗೆ ಮಾತ್ರ ಶಿಕ್ಷೆನಾ' ಎಂಬಂತಹ ಹೇಳಿಕೆಗಳ ಮೂಲಕ ದೇವತೆಗಳೊಂದಿಗೆ ಹುಲು ಮಾನವನ ತುಲನೆ ಮಾಡಿ ಹಿಂದೂಗಳ ಧಾರ್ಮಿಕ ಭಾವನೆಗೆ ಅಳಿಸಲಾರದಂತಹ ಆಘಾತ ಮಾಡಲಾಗಿದೆ.
2. ಚಿತ್ರಗುಪ್ತನು ಪ್ರಾಣಿಮಾತ್ರರ ಪುಣ್ಯಪಾಪದ ಲೆಕ್ಕಾಚಾರವನ್ನಿಟ್ಟು ಅದರಂತೆ ಅವರಿಗೆ ಶಿಕ್ಷೆ ವಿಧಿಸುತ್ತಾನೆ. ಹೀಗಿರುವಾಗ ಇದರಲ್ಲಿ 'ಚಿತ್ರಗುಪ್ತ' ಹಾಗೂ ಸ್ತ್ರೀಯೊಬ್ಬಳು ನಡುವಿನ ಅಸಭ್ಯ ವರ್ತನೆ, ಚಿತ್ರಗುಪ್ತನು ಸ್ತ್ರೀಯೊಬ್ಬಳನ್ನು ನೋಡಿ ಕಣ್ಣು ಹೊಡೆಯುವುದು' ಇಂತಹ ರೀತಿಯಲ್ಲಿ ಅವರ ಸ್ಥಾನಕ್ಕೇ ಅವಹೇಳನ ಮಾಡಲಾಗಿದೆ.