Don't Miss!
- Automobiles ಫ್ಯಾಮಿಲಿ ಕಾರಾಗಿ ಜನರ ಮನಗೆದ್ದ ಹ್ಯುಂಡೈ ಅಲ್ಕಾಜರ್ ಎಸ್ಯುವಿಯ ಮೇಲೆ ಭರ್ಜರಿ ಡಿಸ್ಕೌಂಟ್
- News Tirupati Darshan Ticket: ತಿರುಪತಿ ದರ್ಶನಕ್ಕೆ ವಿಶೇಷ ಟಿಕೆಟ್ ಬಿಡುಗಡೆ: ಪೂಜಾ ಸೇವೆಯಲ್ಲಿ ಬಾಗವಹಿಸಲು ದಿನಾಂಕ ಆಯ್ಕೆ ಮಾಡಿ...
- Finance ಕಬ್ಬನ್ ಪಾರ್ಕ್ನಲ್ಲಿ ಮರ ಅಪ್ಪಿಕೊಳ್ಳುವ ಕಾರ್ಯಕ್ರಮಕ್ಕೆ ತಲಾ 1,500 ರೂ. ಶುಲ್ಕವಿಟ್ಟ ಕಂಪನಿ!
- Technology Itel: ಐಟೆಲ್ ಸೂಪರ್ ಗುರು 4G ಫೋನ್ ಲಾಂಚ್! ಯುಪಿಐ ಬೆಂಬಲ
- Lifestyle ಸ್ವತಂತ್ರ ಭಾರತದ ಮೊದಲ ಮತದಾರನಿಲ್ಲದ ಮೊದಲ ಚುನಾವಣೆ ಇದು..! ಯಾರು ಈ ಮತದಾರ ಗೊತ್ತಾ?
- Sports IPL 2024: ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದರೂ ಹಾರ್ದಿಕ್ ಪಾಂಡ್ಯಗೆ ಭಾರೀ ಮೊತ್ತದ ದಂಡ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನ್ನಡದ ಮುದ್ದು ನಟಿ ನಿರ್ದೇಶಕಿ ಆದ್ರು.!
ನಟಿಯರು ನಿರ್ದೇಶಕಿಯರಾಗುವುದು ಅಪರೂಪ. ನಿರ್ದೇಶನ ಮಾಡುವ ಕನಸು ಹೊಂದಿದ್ದರು ತಮ್ಮ ಬ್ಯುಸಿ ನಟನೆಯಿಂದ ಆ ಕನಸನ್ನ ನನಸು ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದ್ರೆ, ಕನ್ನಡದ ಈ ಮುದ್ದು ನಟಿ ತಮ್ಮ ಬಹುದಿನದ ಆಸೆಯನ್ನ ಈಗ ಈಡೇರಿಸಿಕೊಳ್ಳುತ್ತಿದ್ದಾರೆ.
ನಾವು ಹೇಳ್ತಿರುವುದು ಐಶಾನಿ ಶೆಟ್ಟಿ ಬಗ್ಗೆ. ನೀನಾಸಂ ಸತೀಶ್ ಅಭಿನಯದ 'ರಾಕೆಟ್' ಚಿತ್ರದಲ್ಲಿ ನಾಯಕಿ ಆಗಿದ್ದ ಐಶಾನಿ ಶೆಟ್ಟಿ ನಂತರ ಭಟ್ಟರ 'ವಾಸ್ತುಪ್ರಕಾರ'ದಲ್ಲಿ ಮಿಂಚಿದ್ದರು. ಆಮೇಲೆ, ಅಲ್ಲೊಂದು ಇಲ್ಲೊಂದು ಸಿನಿಮಾದಲ್ಲಿ ಕಾಣಿಸಿಕೊಂಡರು. ಈ ಮಧ್ಯೆ ತಮ್ಮ ನಿರ್ದೇಶನದ ಕನಸನ್ನ ನನಸು ಮಾಡಿಕೊಳ್ಳುವ ಸಾಹಸಕ್ಕೆ ಕೈಹಾಕಿದ್ದಾರೆ.
ಹೌದು, ಐಶಾನಿ ಶೆಟ್ಟಿ ಕಿರುಚಿತ್ರವೊಂದನ್ನ ನಿರ್ದೇಶನ ಮಾಡುತ್ತಿದ್ದು, ಇದು ಮಹಿಳಾ ಪ್ರಧಾನ ಕಥೆಯಾಗಿದೆ. ಈ ಚಿತ್ರಕ್ಕೆ ಈಗ ನಾಯಕಿ ಆಗಿ ಹಿತಾ ಚಂದ್ರಶೇಖರ್ ಅವರನ್ನ ಆಯ್ಕೆ ಮಾಡಿಕೊಂಡಿದ್ದಾರೆ. ನೀನಾಸಂ ಸತೀಶ್ ಈ ಕಿರುಕುಚಿತ್ರಕ್ಕೆ ಬೆನ್ನಲುಬಾಗಿದ್ದಾರೆ. ಇನ್ನು ಚಿತ್ರಕ್ಕೆ 'ಕುಪ್ಪಿ' ಎಂದು ಟೈಟಲ್ ಕೂಡ ಫಿಕ್ಸ್ ಆಗಿದ್ದು, ಇದು ಕನಕಪುರದ ಒಂದು ಗ್ರಾಮದ ಹೆಸರಂತೆ.
ಅಂದ್ಹಾಗೆ, ಹಳ್ಳಿಯಲ್ಲಿರುವ ತಾರತಮ್ಯದ ಕುರಿತು ಈ ಕಿರುಚಿತ್ರವಾಗಿದ್ದು, ಮನೋಹರ್ ಜೋಶಿ ಛಾಯಗ್ರಾಹಕರಾಗಿ ಕೆಲಸ ನಿರ್ವಹಿಸಲಿದ್ದಾರೆ. ಇನ್ನು 'ಕಹಿ' ಮತ್ತು 'ಶ್ರೀನಿವಾಸ ಕಲ್ಯಾಣ' ಚಿತ್ರಗಳಿಗೆ ಸಂಗೀತ ನೀಡಿದ್ದ ಮಿಥುನ್ ಮುಕುಂದನ್ ಅವರು ಸಂಗೀತ ಒದಗಿಸಿಲಿದ್ದಾರೆ.