twitter
    For Quick Alerts
    ALLOW NOTIFICATIONS  
    For Daily Alerts

    ಶಾಸಕ ಮುನಿರತ್ನ ವಿರುದ್ಧ ರೊಚ್ಚಿಗೆದ್ದ ಹುಚ್ಚ ವೆಂಕಟ್

    By Bharath Kumar
    |

    ರಾಜರಾಜೇಶ್ವರಿ ಶಾಸಕ ಮುನಿರತ್ನ ವಿರುದ್ಧ ನಟ-ನಿರ್ದೇಶಕ ಹುಚ್ಚ ವೆಂಕಟ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಮತದಾರರನ್ನ ಸೆಳೆಯಲು 'ಕುಕ್ಕರ್' ಹಂಚುತ್ತಿದ್ದಾರೆ ಎಂದು ಫೈರಿಂಗ್ ಸ್ಟಾರ್ ಗರಂ ಆಗಿದ್ದಾರೆ.

    'ನನ್ನ ತಂಗಿ ಮನೆಗೂ ಕೊಟ್ಟು ತಮಗೆ ಮತ ಹಾಕಿ ಎಂದಿದ್ದಾರೆ. ಅಷ್ಟೇ ಅಲ್ಲದೇ 'ಕುಕ್ಕರ್ ಬಾಕ್ಸ್' ಮೇಲೆ ಬರೆದಿರುವ ಡೈಲಾಗ್ ಕಂಡು ಶಾಸಕರನ್ನ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

    ಈ ಸಂಬಂಧ ಇಂದು ಪ್ರೆಸ್‌ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಹುಚ್ಚ ವೆಂಕಟ್ ಕುಕ್ಕರ್ ಬಾಕ್ಸ್, ಸ್ಟೌವ್ ಹಾಗೂ ನೀರಿನ ಕ್ಯಾನ್ ಹಿಡಿದು ಆಗಮಿಸಿದ್ದರು. ತದ ನಂತರ ಮಾತನಾಡಿದ ಅವರು ''ರಾಜಕೀಯ ಇಂದು ಈ ಹಂತಕ್ಕೆ ಬಂದಿದೆ. ಜನರು ಇಂತಹ ಆಮಿಷಕ್ಕೆ ಒಳಗಾಗದೆ ಉತ್ತಮ ವ್ಯಕ್ತಿಯನ್ನು ಚುನಾವಣೆಯಲ್ಲಿ ಗೆಲ್ಲಿಸಬೇಕು‌'' ಎಂದು‌ ಜನರಿಗೆ ಸಲಹೆ ನೀಡಿದರು.

    ಹುಚ್ಚ ವೆಂಕಟ್ ಅವರೇ... ಇದೆಲ್ಲ ನಿಮಗೆ ಮರೆತು ಹೋಯ್ತಾ.?ಹುಚ್ಚ ವೆಂಕಟ್ ಅವರೇ... ಇದೆಲ್ಲ ನಿಮಗೆ ಮರೆತು ಹೋಯ್ತಾ.?

    Huccha Venkat alleged against MLA Munirathna

    ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಮುನಿರತ್ನ ''ಇದನ್ನ ನಾನು ಹಲವು ವರ್ಷಗಳಿಂದ ಮಾಡಿಕೊಂಡು ಬಂದಿದ್ದೇನೆ. ಬಡವರಿಗೆ, ಅಸಹಾಯಕರಿಗೆ, ನಿರ್ಗತಿಕರಿಗೆ ನೆರವಾಗಿದ್ದೇನೆ. ಇದಕ್ಕೂ ಚುನಾವಣೆಗೂ ಯಾವುದೇ ರೀತಿಯ ಸಂಬಂಧವಿಲ್ಲ. ಇದು ಒಳ್ಳೆಯ ಉದ್ದೇಶದಿಂದ ಮಾಡುತ್ತಿರುವ ಕೆಲಸ'' ಎಂದಿದ್ದಾರೆ.

    English summary
    Kannada Actor Huccha Venkat has alleged against Rajarajeshwari nagar constituency MLA Munirathna.
    Saturday, March 24, 2018, 17:05
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X