Don't Miss!
- Lifestyle ನರಿ ಮತ್ತು ಕೋಳಿಗೂ ಮೂರ್ಖರ ದಿನಕ್ಕೂ ಇದೆ ನಂಟು..! ಏನದು.?
- News RBI: ಬ್ಯಾಂಕ್ ಕೆಲಸ ಮುಗಿದಿಲ್ವಾ? ಭಯ ಬೇಡ ಮಾರ್ಚ್ 30, 31ಕ್ಕೂ ಓಪನ್ ಇರುತ್ತೆ ಆರ್ಬಿಐ ಕಚೇರಿಗಳು!
- Automobiles ಶಿಯೋಮಿಯ ಈ ಎಲೆಕ್ಟ್ರಿಕ್ ಕಾರು ಸ್ಮಾರ್ಟ್ಫೋನ್ಗಳಂತೆ ಅಗ್ಗದ ಬೆಲೆ: ರೇಂಜ್ ಕೇಳಿದ್ರೆ ತಲೆ ತಿರುಗುತ್ತೆ!
- Technology ಈ Amoled ಡಿಸ್ಪ್ಲೇ ಫೋನ್ ಬೆಲೆಯಲ್ಲಿ ಭಾರೀ ಇಳಿಕೆ!..ಈ ಆಫರ್ಗೆ ನೀವು ಫಿದಾ ಆಗ್ತೀರಾ!
- Finance ಮೊದಲ ಬಾರಿಗೆ ಅಂಬಾನಿ ಅದಾನಿ ಸೇರಿ ವ್ಯಾಪಾರ ಒಪ್ಪಂದ, ಇಲ್ಲಿದೆ ಒಪ್ಪಂದ ವಿವರ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹುಚ್ಚ ವೆಂಕಟ್ ಗೆ 'ಎಕ್ಕಡ' ಚಿಹ್ನೆ ಸಿಕ್ಕಿದೆಯಂತೆ.! ಇದು ನಿಜಾನ.?
Recommended Video
ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ರಾಜರಾಜೇಶ್ವರಿ ನಗರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದಾರೆ. ಹಾಗಿದ್ರೆ, ಹುಚ್ಚ ವೆಂಕಟ್ ಗೆ ಮತ ಹಾಕಬೇಕು ಅಂದ್ರೆ ಯಾವ ಚಿಹ್ನೆಗೆ ವೋಟ್ ಮಾಡಬೇಕು ಎಂಬ ಕುತೂಹಲಕ್ಕೆ ಈಗ ಬ್ರೇಕ್ ಬಿದ್ದಿದೆ.
ಹೌದು, ಚುನಾವಣೆ ಆಯೋಗವೂ ಹುಚ್ಚ ವೆಂಕಟ್ ಅವರಿಗೆ ತಕ್ಕ ಚಿಹ್ನೆ ನೀಡಿದೆ ಎನ್ನಲಾಗಿದೆ. ವೆಂಕಟ್ ಅವರು ನೆಚ್ಚಿನ 'ಚಪ್ಪಲಿ' ಚಿಹ್ನೆ ನೀಡಿದೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಒಂದು ವೇಳೆ ಇದು ನಿಜವೇ ಆದ್ರೆ, ಇದೊಂದು ರೀತಿಯಲ್ಲಿ ಕಾಕತಾಳೀಯ ಎನ್ನಬಹುದು.
ಇನ್ನು ಇಷ್ಟು ದಿನ ಇತರರನ್ನ ಬೈಯಲು ನನ್ ಎಕ್ಕಡ ಎನ್ನುತ್ತಿದ್ದ ಹುಚ್ಚಾ ವೆಂಕಟ್ ಇಂದಿನಿಂದ 'ನನ್ ಎಕ್ಕಡ'ಕ್ಕೆ ವೋಟ್ ಹಾಕಿ ಎನ್ನಬೇಕಾಗುತ್ತೆ. ಇದು ಕೇವಲ ವದಂತಿ ಅಷ್ಟೇ, ಅಧಿಕೃತವಲ್ಲವೆನ್ನಲಾಗುತ್ತಿದೆ. ಕಾದು ನೋಡೋಣ.
ಹುಚ್ಚ ವೆಂಕಟ್ 'ಆಸ್ತಿ' ವಿವರ ನೋಡಿ ಹೇಳಿ ಈತ 'ಶ್ರೀಮಂತನಾ-ಬಡವನಾ.?
ಅಂದ್ಹಾಗೆ, ಹುಚ್ಚಾ ವೆಂಕಟ್ ಪಕ್ಷೇತರವಾಗಿ ಚುನಾವಣೆಗೆ ನಿಂತಿದ್ದಾರೆ. ಆದ್ರೆ, ಇವರು ಸ್ಪರ್ಧೆ ಮಾಡುತ್ತಿರುವ ಸಾಮಾನ್ಯವಾದ ವ್ಯಕ್ತಿಗಳ ಎದುರಲ್ಲ, ಹಾಲಿ ಶಾಸಕ ಕಾಂಗ್ರೆಸ್ನ ಮುನಿರತ್ನ ಮತ್ತು ಅಮೂಲ್ಯ ಅವರ ಮಾವ ರಾಮಚಂದ್ರಪ್ಪ ಅವರನ್ನ ಎದುರಿಸುತ್ತಿದ್ದಾರೆ.
ಹುಚ್ಚ ವೆಂಕಟ್ ಚುನಾವಣೆ ಪ್ರಣಾಳಿಕೆಯಲ್ಲಿ ಬಂಪರ್ ಕೊಡುಗೆಗಳು: ಊಹೆಗೂ ಮೀರಿದ್ದು.!
ಇಷ್ಟು ದಿನ ಸಿನಿಮಾ ವಿಚಾರಕ್ಕೆ ಸುದ್ದಿಯಾಗುತ್ತಿದ್ದ ವೆಂಕಟ್, ಈಗ ಚುನಾವಣ ಅಖಾಡಕ್ಕೆ ಇಳಿದು ಇಲ್ಲಿಯೂ ಅಬ್ಬರಿಸುವ ಸೂಚನೆ ನೀಡಿದ್ದಾರೆ. 'ನಾನು ಮತ ಕೇಳಲ್ಲ, ನನ್ ಮಗಂದ್ ನಾನು ಶಾಸಕನಾಗಬೇಕಂದ್ರೆ ವೋಟ್ ಹಾಕಿ' ಘರ್ಜಿಸಿದ್ದಾರೆ.