ಶಿವಣ್ಣ ನಟನಾಗುವ ಬದಲು, ಕ್ರಿಕೆಟರ್ ಆಗ್ತಾರೆ ಅಂದುಕೊಂಡಿದ್ದೆ ಎಂದವರು ಯಾರು?
ಚಂದನವನದಲ್ಲಿ ಹ್ಯಾಟ್ರಿಕ್ ಹೀರೋ ಅಂತಾನೇ ಖ್ಯಾತಿ ಗಳಿಸಿರುವ ನಟ ಶಿವರಾಜ್ ಕುಮಾರ್ ಅವರು ನಟರಾಗುತ್ತಾರೆ ಅಂತ ನಾನು ಅಂದುಕೊಂಡಿರಲಿಲ್ಲ ಬದಲಾಗಿ ಅವರೊಬ್ಬ ಕ್ರಿಕೆಟರ್ ಆಗಬಹುದು ಅಂದುಕೊಂಡಿದ್ದೆ. ಎಂದು ನಿರ್ಮಾಪಕ-ಚಲನಚಿತ್ರ ಮಂಡಳಿ ಅಧ್ಯಕ್ಷ ಸಾರಾ ಗೋವಿಂದು ಅವರು ನುಡಿದಿದ್ದಾರೆ.
ನವೆಂಬರ್ 2 ರಂದು ಬೆಂಗಳೂರಿನ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಡೆದ ಕಿಲ್ಲಿಂಗ್ ವೀರಪ್ಪನ್ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಸಾರಾ ಗೋವಿಂದು ಅವರನ್ನು 'ಕಿಲ್ಲಿಂಗ್ ವೀರಪ್ಪನ್' ಚಿತ್ರತಂಡ ಅಭಿನಂದಿಸಿದರು.['ಕಿಲ್ಲಿಂಗ್ ವೀರಪ್ಪನ್' ಆಡಿಯೋ ಲಾಂಚ್ ಮಾಡಲಿರುವ ಪವರ್ ಸ್ಟಾರ್]
ಈ ಸಂದರ್ಭದಲ್ಲಿ ಮಾತನಾಡಿದ ಅವರು "ಶಿವಣ್ಣ ಅವರು ನಟರಾಗುವ ಬದಲು, ಕ್ರಿಕೆಟ್ ಆಟಗಾರರಾಗುತ್ತಾರೆ ಎಂದು ನಾನು ತಿಳಿದಿದ್ದೆ, ಅವರು ಸಣ್ಣ ಹುಡುಗನಾಗಿದ್ದಾಗ ಇಲ್ಲಿ ಕ್ರಿಕೆಟ್ ಆಡಲು ಚೆನ್ನೈನಿಂದ ಬೆಂಗಳೂರಿಗೆ ಬರುತ್ತಿದ್ದದ್ದು, ಇನ್ನೂ ನನಗೆ ನೆನಪಿದೆ'.
'ಬ್ಯಾಟ್ ಮತ್ತು ಬಾಲ್ ನ ಆಟ ಎಂದರೆ ಅವರಿಗೆ ಹುಚ್ಚು. ಅವರು ವಾಪಸ್ ಚೆನ್ನೈಗೆ ಹೋಗುವಾಗ ಮರೆಯದೆ ತೆಗೆದುಕೊಂಡು ಹೋಗುತ್ತಿದ್ದ ಒಂದೇ ಒಂದು ವಸ್ತು ಎಂದರೆ ಅದು ಕ್ರಿಕೆಟ್ ಸೆಟ್'. ಎಂದು ಸಾರಾ ಗೋವಿಂದು ಅವರು ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.[ನವೆಂಬರ್ 2 ರಂದು 'ಕಿಲ್ಲಿಂಗ್ ವೀರಪ್ಪನ್' ಆಡಿಯೋ ಲಾಂಚ್]
ನಿರ್ಮಾಪಕ-ಚಲನಚಿತ್ರ ಮಂಡಳಿ ಅಧ್ಯಕ್ಷ ಸಾರಾ ಗೋವಿಂದು ಅವರನ್ನು ಅಭಿನಂದಿಸಿದ ಶಿವಣ್ಣ ಅವರು, 'ಕನ್ನಡ ಸಿನಿಮಾಗಳನ್ನು ಚಲನಚಿತ್ರ ಮಂಡಳಿ ಉತ್ತೇಜಿಸಬೇಕು ಎಂಬುದಷ್ಟೇ ನನ್ನ ಅಭಿಲಾಷೆ' ಎಂದು ಹೇಳಿದ್ದಾರೆ.
ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಆಕ್ಷನ್-ಕಟ್ ಹೇಳಿರುವ 'ಕಿಲ್ಲಿಂಗ್ ವೀರಪ್ಪನ್' ಚಿತ್ರದ ಆಡಿಯೋ ಬಿಡುಗಡೆಯ ಅದ್ದೂರಿ ಕಾರ್ಯಕ್ರಮದಲ್ಲಿ ರಾಕಿಂಗ್ ಸ್ಟಾರ್ ಯಶ್, ನಟ-ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಸಂಚಾರಿ ವಿಜಯ್, ರಾಮ್ ಗೋಪಾಲ್ ವರ್ಮಾ, ಪುನೀತ್ ರಾಜ್ ಕುಮಾರ್, ಮತ್ತು ಲಹರಿವೇಲು ಮುಂತಾದ ಚಿತ್ರರಂಗದ ಖ್ಯಾತ ಗಣ್ಯರು ಪಾಲ್ಗೊಂಡಿದ್ದರು.


Click it and Unblock the Notifications













