Just In
- 5 hrs ago
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- 6 hrs ago
Bigg Boss Tamil 4: ಅತಿ ಹೆಚ್ಚು ಸಂಭಾವನೆ ಪಡೆದ ಸ್ಪರ್ಧಿಯೇ ವಿಜೇತ!
- 6 hrs ago
ಫೋಟೋಗಳು: ರಮೇಶ್ ಅರವಿಂದ್ ಮಗಳ ಮದುವೆ ಆರತಕ್ಷತೆಯಲ್ಲಿ ಸಿನಿ ತಾರೆಯರು; ಯಶ್, ಸುದೀಪ್ ಸಖತ್ ಡ್ಯಾನ್ಸ್
- 8 hrs ago
ಶಿವಮೊಗ್ಗದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್: 'ಬೆಸ್ಟ್ ವೀಕೆಂಡ್ ಎವರ್' ಎಂದ ನಟಿ
Don't Miss!
- Finance
Flipkart Big Saving Days: ಆಪಲ್, ಸ್ಯಾಮ್ಸಂಗ್ ಸೇರಿ ಹಲವು ಬ್ರ್ಯಾಂಡ್ ಗಳ ಆಫರ್
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Automobiles
ಅನಾವರಣವಾಯ್ತು 2021ರ ಎಪ್ರಿಲಿಯಾ ಆರ್ಎಸ್ವಿ4 ಬೈಕುಗಳು
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಿಗ್ಬಾಸ್ ಸ್ಪರ್ಧಿ ದಿವಾಕರ್ ವಿರುದ್ಧ ದೂರು ಕೊಡುತ್ತೇನೆಂದ ಅಹೋರಾತ್ರ?
ಆನ್ಲೈನ್ ರಮ್ಮಿ ವಿರುದ್ಧ ಸಮರ ಸಾರಿರುವ ಅಹೋರಾತ್ರ, ತಮ್ಮ ಫೇಸ್ಬುಕ್ನಲ್ಲಿ ರಮ್ಮಿ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿರುವ ಸುದೀಪ್ ವಿರುದ್ಧ, ರಮ್ಮಿ ಆಟದ ವಿರುದ್ಧ ಪೋಸ್ಟ್ಗಳನ್ನು ಹಾಕುತ್ತಲಿರುತ್ತಾರೆ.
ಇದಕ್ಕೆ ಪ್ರತಿರೋಧವಾಗಿ ಹಲವಾರು ಸುದೀಪ್ ಅಭಿಮಾನಿಗಳು ಅಹೋರಾತ್ರಗೆ ಕರೆ ಮಾಡಿ ಒರಟಾಗಿ ಮಾತನಾಡಿದ್ದರು. ಕೆಲವರು ಬೆದರಿಕೆಯನ್ನೂ ಹಾಕಿದ್ದರು. ಈ ಬಗ್ಗೆ ಅಹೋರಾತ್ರ ದೂರು ಸಹ ನೀಡಿದ್ದರು.
ಅಹೋರಾತ್ರ ಅವರಿಗೆ ಇದೇ ವಿಷಯವಾಗಿ ದಿನಾಕರ್ ಎಂಬಾತ ಕರೆ ಮಾಡಿದ್ದು, 'ದಿವಾಕರ್ ಬಿಗ್ಬಾಸ್ ಕಿಚ್ಚ' ಎಂಬ ಕಾಲರ್ ಐಡಿ ಪ್ರಕಟವಾಗಿದೆ. ಇದು ಬಿಗ್ಬಾಸ್ನಲ್ಲಿ ರನ್ನರ್ ಅಪ್ ಆಗಿದ್ದ ದಿವಾಕರ್ ಅವರದ್ದೇ ಕರೆ ಎನ್ನಲಾಗುತ್ತಿದೆ.

ಆನ್ಲೈನ್ ರಮ್ಮಿ ವಿಷಯವಾಗಿ ಕರೆ
ಆನ್ಲೈನ್ ರಮ್ಮಿ ವಿಷಯವಾಗಿ ಮಾತನಾಡಲೆಂದು ದಿವಾಕರ್ ಅಹೋರಾತ್ರ ಗೆ ಕರೆ ಮಾಡಿದ್ದಾರೆ. ಆದರೆ ರಮ್ಮಿ ಕುರಿತು ಮಾತು ಸೀಮಿತಗೊಳ್ಳದೆ ಪರಸ್ಪರ ನಿಂದನೆ ಕಡೆ ಮಾತುಗಳು ಹರಿದಿರುವುದು ಆಡಿಯೋ ಕ್ಲಿಪ್ ಕೇಳಿದರೆ ತಿಳಿದುಬರುತ್ತದೆ.

'ದೂರು ನೀಡುವುದು ಖಂಡಿತ'
ದಿವಾಕರ್ ಕರೆ ಮಾಡಿರುವ ಬಗ್ಗೆ ಫೇಸ್ಬುಕ್ ಪೋಸ್ಟ್ ಬರೆದಿರುವ ಅಹೋರಾತ್ರ, 'ನನ್ನನ್ನು ಪಾಕಿಸ್ತಾನಿ' ಎಂದ ಈತನ ಮೇಲೆ ದೂರು ನೀಡುವುದು ಖಂಡಿತ ಎಂದಿದ್ದಾರೆ.

ಪಾಕಿಸ್ತಾನದವರಾ? ಎಂದು ಕೇಳಿದ ದಿವಾಕರ್
ಅಹೋರಾತ್ರ ಜೊತೆ ಮಾತನಾಡುತ್ತಾ 'ನೀವು ಕರ್ನಾಟಕದವರಾ?' ಎಂದು ದಿವಾಕರ್ ಕೇಳುತ್ತಾರೆ. ಆಗ ಅದಕ್ಕೆ ಅಹೋರಾತ್ರಾ ಉತ್ತರಿಸುವುದಿಲ್ಲ, ಆಗ ದಿವಾಕರ್, ನೀವು ಭಾರತದವರಾ ಅಥವಾ ಪಾಕಿಸ್ತಾನದವರಾ? ಎಲ್ಲಿಯವರು ನೀವು? ಎನ್ನುತ್ತಾರೆ. ಇದಕ್ಕೆ ಅಹೋರಾತ್ರ ಸಿಟ್ಟಿಗೇಳುತ್ತಾರೆ.

ಬೆದರಿಕೆ ಹಾಕಿದರೇ ದಿವಾಕರ್
ದಿವಾಕರ್ ಮತ್ತು ತಮ್ಮ ನಡುವೆ ನಡೆದ ಮಾತುಕತೆಯನ್ನು ಅಹೋರಾತ್ರ ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ. ದಿವಾಕರ್ ಯಾವ ಬೆದರಿಕೆ ಹಾಕಿಲ್ಲವಾದರೂ, ಅಹೋರಾತ್ರ ಅವರನ್ನು ವ್ಯಂಗ್ಯ ಮಾಡುವ, ಹೀಗಳೆಯು ಪ್ರಯತ್ನ ಮಾಡಿದರು. ಅಹೋರಾತ್ರ ಸಹ ದಿವಾಕರ್ ಅವರನ್ನು ನಿಂದಿಸಿದರು, ವ್ಯಂಗ್ಯ ಮಾಡಿದ್ದಾರೆ.