Don't Miss!
- Lifestyle ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
- News ಲೋಕಸಭಾ ಚುನಾವಣೆ 2024: ಈ ಆರು ಜಿಲ್ಲೆಗಳಲ್ಲಿ ಬಹುತೇಕ ಶೂನ್ಯ ಮತದಾನ; ಕಾರಣವೇನು?
- Sports LSG vs CSK IPL 2024: ಮತ್ತೊಮ್ಮೆ ಧೋನಿ, ಜಡೇಜಾ ಅಬ್ಬರ; ಲಕ್ನೋ ತಂಡಕ್ಕೆ ಸವಾಲಿನ ಗುರಿ ನೀಡಿದ ಸಿಎಸ್ಕೆ
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಿತ್ರರಂಗಕ್ಕೇ ಗುಡ್ ಬೈ ಹೇಳುತ್ತೇನೆ ಎಂದ ಶಿವಣ್ಣ
ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರ ಬಹುನಿರೀಕ್ಷಿತ ಚಿತ್ರ 'ಭಜರಂಗಿ' ಇದೇ ಡಿಸೆಂಬರ್ 12ರಂದು ತೆರೆಗೆ ಅಪ್ಪಳಿಸುತ್ತಿದೆ. ಈ ಚಿತ್ರಕ್ಕೆ ಪ್ರಾದೇಶಿಕ ಸೆನ್ಸಾರ್ ಮಂಡಳಿ 'ಎ' ಸರ್ಟಿಫಿಕೇಟ್ ನೀಡಿರುವುದು ಶಿವಣ್ಣ ಅವರಿಗೆ ಅಸಮಾಧಾನ ತಂದಿದೆ.
ಚಿತ್ರದಲ್ಲಿ ಕೆಲವೊಂದು ಆಕ್ಷೇಪಾರ್ಹ ಸನ್ನಿವೇಶಗಳಿವೆ ಎಂಬ ಕಾರಣಕ್ಕೆ ಸೆನ್ಸಾರ್ ಮಂಡಲಿ ಎ ಸರ್ಟಿಫಿಕೇಟ್ ನೀಡಿದೆ. ಈ ಚಿತ್ರ ಔಟ್ ಅಂಡ್ ಔಟ್ ಮನರಂಜನಾ ಚಿತ್ರವಾಗಿದ್ದು ಯು/ಎ ಸರ್ಟಿಫಿಕೇಟ್ ನೀಡಬಹುದಿತ್ತು. ಆದರೆ ಎ ಸರ್ಟಿಫಿಕೇಟ್ ಕೊಟ್ಟಿರುವುದು ಚಿತ್ರತಂಡಕ್ಕೂ ಕೊಂಚ ಅಸಮಾಧಾನ ತಂದಿದೆ.
ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿರುವ ಶಿವಣ್ಣ, "ಈ ಆಕ್ಷನ್ ಪ್ರಧಾನ ಚಿತ್ರಕ್ಕೆ 'ಎ'ಗೆ ಬದಲಾಗಿ 'ಯು/ಎ' ಸರ್ಟಿಫಿಕೇಟ್ ನೀಡಬಹುದಾಗಿತ್ತು. ಈಗ ಎ ಪ್ರಮಾಣಪತ್ರ ಕೊಟ್ಟಿರುವುದು ಮನೆಮಂದಿಯಲ್ಲಾ ಬರಲು ಹಿಂದೇಟು ಹಾಕುತ್ತಾರೆ. ಸೆನ್ಸಾರ್ ಮಂಡಲಿ ಸದಸ್ಯರ ವಿರುದ್ಧ ತಮಗೆ ಅಸಮಾಧಾನವಿದೆ" ಎಂದಿದ್ದಾರೆ. ಇಷ್ಟಕ್ಕೂ ಶಿವಣ್ಣ ಚಿತ್ರರಂಗಕ್ಕೆ ಗುಡ್ ಬೈ ಹೇಳುತ್ತೇನೆ ಎಂದಿದ್ಯಾಕೆ?...ಮುಂದೆ ಓದಿ.
ಇದು ಔಟ್ ಅಂಡ್ ಔಟ್ ಎಂಟರ್ ಟೈನರ್
ಭಜರಂಗಿ ಚಿತ್ರ ಪಕ್ಕಾ ಎಂಟರ್ ಟೈನ್ ಮೆಂಟ್ ನಿಂದ ಕೂಡಿದೆ. ತಮ್ಮ ಚಿತ್ರದಲ್ಲಿ ಕೆಲವೊಂದು ಹಿಂಸಾತ್ಮಕ ಸನ್ನಿವೇಶಗಳಿವೆ ನಿಜ. ಆದರೆ ಇಂದು ಬರುತ್ತಿರುವ ಟಿವಿ ಕಾರ್ಯಕ್ರಮಗಳಲ್ಲಿನ ಸೆಕ್ಸ್, ಹಿಂಸಾತ್ಮಕ ಸನ್ನಿವೇಶಗಳಿಗೆ ಹೋಲಿಸಿದರೆ ಭಜರಂಗಿ ಚಿತ್ರದ ಸನ್ನಿವೇಶಗಳು ಏನೇನು ಅಲ್ಲ.
ಚಿತ್ರದಲ್ಲಿ ಕೆಲವೊಂದು ರಕ್ತಪಾತ ಸನ್ನಿವೇಶಗಳಿವೆ
ಚಿತ್ರದಲ್ಲಿ ಕೆಲವೊಂದು ರಕ್ತಪಾತದ ಸನ್ನಿವೇಶಗಳಿರುವುದೇ ಸೆನ್ಸಾರ್ ಮಂಡಳಿ ಚಿತ್ರಕ್ಕೆ 'ಎ' ಸರ್ಟಿಫಿಕೇಟ್ ಕೊಡಲು ಕಾರಣ ಎನ್ನುತ್ತವೆ ಮೂಲಗಳು. ಶಿವಣ್ಣ ಅಭಿನಯದ ಕಡ್ಡಿಪುಡಿ ಚಿತ್ರಕ್ಕೂ ಎ ಸರ್ಟಿಫಿಕೇಟ್ ಸಿಕ್ಕಿತ್ತು.
ಚಿತ್ರರಂಗಕ್ಕೇ ಗುಡ್ ಬೈ ಹೇಳುತ್ತೇನೆ ಎಂದ ಶಿವಣ್ಣ
ಬೇಕಿದ್ದರೆ ಮಾಧ್ಯಮಗಳೇ 'ಭಜರಂಗಿ' ಚಿತ್ರ ನೋಡಿ ನಿರ್ಧರಿಸಲಿ. ಇಂದಿನ ಟಿವಿ ಧಾರಾವಾಹಿಗಳಿಗಿಂತಲೂ ತಮ್ಮ ಚಿತ್ರ ಸ್ವಚ್ಛವಾಗಿದೆ. ಒಂದು ವೇಳೆ ತಾನು ಮಾಡುತ್ತಿರುವ ಆರೋಪಗಳಲ್ಲಿ ಹುರುಳಿಲ್ಲ ಎಂದರೆ ಚಿತ್ರರಂಗಕ್ಕೇ ಗುಡ್ ಬೈ ಹೇಳುತ್ತೇನೆ ಎಂದಿದ್ದಾರೆ ಶಿವಣ್ಣ.
ಅರ್ಜುನ್ ಜನ್ಯ ಸಂಗೀತ, ಎ.ಹರ್ಷ ನಿರ್ದೇಶನ
ಫಿಲಂ ಎಂಟರ್ ಟೈನರ್ ಲಾಂಛನದಲ್ಲಿ ನಟರಾಜ್ ಗೌ ಹಾಗೂ ಮಂಜು(ಜಾಕ್) ಅವರು ನಿರ್ಮಿಸಿರುವ 'ಭಜರಂಗಿ' ಚಿತ್ರಕ್ಕೆ ಕಥೆ ಬರೆದಿರುವ ಎ.ಹರ್ಷ ನಿರ್ದೇಶನವನ್ನು ಮಾಡಿದ್ದಾರೆ. ನಂದ, ಶಕ್ತಿ ಅವರೊಡನೆ ಚಿತ್ರಕಥೆ ಬರೆದಿರುವ ಹರ್ಷ ಈ ಚಿತ್ರದ ನೃತ್ಯ ನಿರ್ದೇಶಕರೂ ಹೌದು. ಜೈಆನಂದ್ ಛಾಯಾಗ್ರಾಹಕರಾಗಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಯೋಗಾನಂದ್ ಮುದ್ದಾನ್ ಸಂಭಾಷಣೆ ಬರೆದಿದ್ದಾರೆ.
ಪಾತ್ರವರ್ಗದಲ್ಲಿ ಯಾರ್ಯಾರು ಇದ್ದಾರೆ?
ದೀಪು.ಎಸ್.ಕುಮಾರ್ ಅವರ ಸಂಕಲನ, ರವಿವರ್ಮ ಸಾಹಸ ನಿರ್ದೇಶನ, ರಮೇಶ್ ಅವರ ನಿರ್ಮಾಣ ನಿರ್ವಹಣೆಯಿರುವ ಈ ಚಿತ್ರದ ತಾರಾಬಳಗದಲ್ಲಿ ಶಿವರಾಜಕುಮಾರ್, ಐಂದ್ರಿತಾ ರೇ, ಊರ್ವಶಿ, ರುಕ್ಮಿಣಿ ವಿಜಯಕುಮಾರ್, ಬುಲೆಟ್ ಪ್ರಕಾಶ್, ಸಾಧುಕೋಕಿಲಾ, ತಬಲನಾಣಿ, ಹೊನ್ನವಳ್ಳಿ ಕೃಷ್ಣ, ಶಿವರಾಂ, ಎಂ.ಎಸ್.ಉಮೇಶ್, ಬಿರಾದಾರ್, ಚಿಕ್ಕಣ್ಣ, ಎಂ.ಎನ್.ಲಕ್ಷ್ಮೀದೇವಿ, ಶೃತಿ, ಸಿಲ್ಲಿಲಲ್ಲಿ ಆನಂದ್ ಹಾಗೂ ರಂಗಭೂಮಿ ಕಲಾವಿದರಾದ ಲೋಕಿ, ರಾಜಕುಮಾರ್, ಮಧು, ಚೇತನ್ ಮುಂತಾದವರಿದ್ದಾರೆ.