'ದಾಸ' ದರ್ಶನ್ ಗೆ ಕ್ಷಮೆ ಕೇಳಲ್ಲ: ಖಡಕ್ ಆಗಿ ನುಡಿದ ಸಂಜನಾ.!
'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ 'ದಾಸ' ದರ್ಶನ್ ಗೆ 'ಬಿಲ್ಡಪ್' ಎಂದು ಕರೆದ ಸಂಜನಾ ವಿರುದ್ಧ 'ಡಿ' ಬಾಯ್ಸ್ ಕೋಪಗೊಂಡಿದ್ದಾರೆ. ಆಡಿದ ಮಾತನ್ನ ವಾಪಸ್ ತಗೊಂಡು, ದರ್ಶನ್ ಗೆ ಕ್ಷಮೆ ಕೇಳಿದರೆ ಮಾತ್ರ ದಚ್ಚು ಅಭಿಮಾನಿಗಳ ಕೋಪ ಕಮ್ಮಿ ಆಗುತ್ತೆ.
ಇದೇ ವಾಸ್ತವ ಅಂತ ಗೊತ್ತಿದ್ದರೂ, ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರನ್ನ ನಟಿ ಸಂಜನಾ ಕ್ಷಮೆ ಕೇಳುವುದಿಲ್ಲವಂತೆ. ಹಾಗಂತ ದಿಗ್ವಿಜಯ ನ್ಯೂಸ್ ಜೊತೆ ಮಾತನಾಡುತ್ತಾ ನಟಿ ಸಂಜನಾ ಹೇಳಿದ್ದಾರೆ.

''ಸೋಷಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಮಾತನಾಡುವವರು ಥರ್ಡ್ ಕ್ಲಾಸ್ ಜನ. ಅಂಥವರ ಬಳಿ ನಾನು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ'' ಎಂದು ಖಡಕ್ ಆಗಿ ನುಡಿದಿದ್ದಾರೆ ಸಂಜನಾ.
''ನನಗೆ ದರ್ಶನ್ ಸಿಕ್ಕಾಗ ಅವರಿಗೆ ನಡೆದ ವಿಷಯವನ್ನು ಹೇಳುತ್ತೇನೆ. ಜೊತೆಗೆ ನನ್ನ ಅಭಿಪ್ರಾಯವನ್ನು ತಿಳಿಸುತ್ತೇನೆ. ಅಷ್ಟಕ್ಕೂ, ದರ್ಶನ್ ಇಂಥ ಮಾತುಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಟೀಕೆಗಳು ಮಿತಿ ಮೀರಿದರೆ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡುತ್ತೇನೆ'' ಎಂದು 'ಟ್ರೋಲ್' ಮಾಡುತ್ತಿರುವವರಿಗೆ ಎಚ್ಚರಿಕೆ ನೀಡಿದ್ದಾರೆ ಸಂಜನಾ.
ಅಂದ್ಹಾಗೆ, 'ಟ್ರೋಲ್'ಗಳ ಕಾಟ ತಾಳಲಾರದೆ ಸಂಜನಾ ಅದಾಗಲೇ ಫೇಸ್ ಬುಕ್ ನಿಂದ ಹೊರ ಬಂದಿದ್ದಾರೆ. ಸದ್ಯ ಸಂಜನಾರ ಫೇಸ್ ಬುಕ್ ಅಕೌಂಟ್ ಬ್ಲಾಕ್ ಆಗಿದೆ. (ಕೃಪೆ - ದಿಗ್ವಿಜಯ ನ್ಯೂಸ್)


Click it and Unblock the Notifications











