Don't Miss!
- Finance Bengaluru Suburban Rail Project: ದೊಡ್ಡಜಾಲದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ರೈಲು ಸಂಪರ್ಕ, ವಿವರ
- Automobiles Maruti: ಜಪಾನ್ನಲ್ಲಿ ಗರಿಷ್ಟ ಗುಣಮಟ್ಟದ ಸ್ವಿಫ್ಟ್ ಕಾರು! ಭಾರತಕ್ಕೆ ಮಾತ್ರ ಕಳಪೆ ಗುಣಮಟ್ಟ ಏಕೆ?
- News ನಂಬರ್ ಪ್ಲೇಟ್ ವಿಚಾರದಲ್ಲಿ ವಾಹನ ಮಾಲೀಕರೇ ಈ ತಪ್ಪು ಮಾಡಬೇಡಿ!
- Technology Jio: ಅಗ್ಗದ ಜಿಯೋ ಸಿನಿಮಾ ಪ್ರೀಮಿಯಂ ಚಂದಾದಾರಿಕೆ ಘೋಷಣೆ! 29 ರೂ.ಗಳಿಂದ ಪ್ರಾರಂಭ..
- Lifestyle ಖುಲಾಯಿಸಿತು ಅದೃಷ್ಟ: ಫ್ಯಾಂಟಸಿ ಗೇಮ್ನಲ್ಲಿ ₹1.5 ಕೋಟಿ ಗೆದ್ದ ಮೆಕ್ಯಾನಿಕ್..!
- Sports IPL 2024: ಸಿಕ್ಸ್ ಹೊಡೆದು ತಪ್ಪಾಯ್ತು ಎಂದಿದ್ದೇಕೆ ರಿಷಬ್ ಪಂತ್ ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಅಮ್ಮ'ದಿಂದ ಹಿಂದೆ ಸರಿದ ಮಲಯಾಳ ನಟ ದಿಲೀಪ್
ಮಲಯಾಳಂ ಖ್ಯಾತ ನಟ ದಿಲೀಪ್ ಅವರು ಮಲಯಾಳಂ ಕಲಾವಿದರ ಸಂಘಕ್ಕೆ ಸೇರಿಸಿಕೊಂಡ ಬೆನ್ನಲ್ಲೆ ನಾಲ್ವರು ಪ್ರಮುಖ ನಟಿಯರು 'ಅಮ್ಮ' (AMMA- Association of Malayalam Movie Artistes) ಸಂಘಟನೆಯಿಂದ ಹೊರ ಬಂದಿದ್ದಾರೆ.
ಬಹುಭಾಷಾ ನಟಿಯನ್ನ ಅಪಹರಿಸಿ, ದೌರ್ಜನ್ಯವೆಸಗಿರುವ ಪ್ರಕರಣದಲ್ಲಿ ದಿಲೀಪ್ ಆರೋಪಿಯಾಗಿದ್ದು, ಇನ್ನು ದೋಷ ಮುಕ್ತವಾಗಿಲ್ಲ. ಈ ನಡುವೆ 'ಅಮ್ಮ' ಸಂಘಕ್ಕೆ ಮತ್ತೆ ಸೇರಿಸಿಕೊಂಡಿದ್ದಕ್ಕೆ ನಟಿಯರು ಆಕ್ರೋಶಗೊಂಡಿದ್ದರು.
ನಟಿಯ ಅಪಹರಣ ಪ್ರಕರಣ: ಮಲಯಾಳಂ ಇಂಡಸ್ಟ್ರಿ ಮತ್ತೆ ಅಲ್ಲೋಲ-ಕಲ್ಲೋಲ
ಇದೀಗ, ದಿಲೀಪ್ ಅವರೇ ಅಮ್ಮ ಸಂಘದಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ. ತಮ್ಮ ಮೇಲಿನ ಆರೋಪಗಳಿಂದ ದೋಷಮುಕ್ತನಾದ ನಂತರವೇ ನಾನು ಸಂಘಕ್ಕೆ ಬರುತ್ತೇನೆ, ಅಲ್ಲಿಯವರೆಗೂ ಅಲ್ಲಿಂದ ದೂರವೇ ಇರುತ್ತೇನೆ ತಿಳಿಸಿದ್ದಾರೆ.
ಈ ಬಗ್ಗೆ ಅಮ್ಮ ಸಂಘಕ್ಕೆ ಪತ್ರ ಬರೆದಿರುವ ದಿಲೀಪ್ ''ನನ್ನನ್ನು ಸಂಘಟನೆಗೆ ಸೇರಿಸಿಕೊಂಡಿದ್ದಕ್ಕೆ ಧನ್ಯವಾದ. ಆದ್ರೆ, ನಾನು ಎದುರಿಸುತ್ತಿರುವ ಆರೋಪದಿಂದ ನಾನಿ ನಿರಪರಾಧಿ ಎಂದು ಪ್ರೂವ್ ಆಗಲಿ. ಅಲ್ಲಿಯವರೆಗೂ ಯಾವುದೇ ಸಂಘಟನೆಯಲ್ಲಿ ಇರಲು ನಾನು ಇಷ್ಟಪಡುವುದಿಲ್ಲ. ನನ್ನಿಂದ ಕಲಾವಿದರ ಸಂಘಕ್ಕೆ ಕಪ್ಪುಚುಕ್ಕೆ ಬರುವುದು ಬೇಡ. ಹೊಸದಾಗಿ ಆಯ್ಕೆಯಾಗಿರುವ ಸದಸ್ಯರಿಗೆ ಹೃದಯಪೂರ್ವಕ ಧನ್ಯವಾದಗಳು'' ಎಂದು ತಿಳಿಸಿದ್ದಾರೆ.
2017, ಫೆಬ್ರವರಿಯಲ್ಲಿ ಬಹುಭಾಷಾ ನಟಿಯ ಅಪಹರಣ ಮತ್ತು ದೌರ್ಜನ್ಯ ಪ್ರಕರಣ ಸಿನಿ ಜಗತ್ತಿನಲ್ಲಿ ಬಹುದೊಡ್ಡ ವಿವಾದ ಹುಟ್ಟುಹಾಕಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಲಯಾಳಂನ ಖ್ಯಾತ ನಟ ದಿಲೀಪ್ ಅವರನ್ನ ಆರೋಪಿಯನ್ನಾಗಿಸಿ ಬಂಧಿಸಲಾಗಿತ್ತು. ಹಲವು ತಿಂಗಳು ನಟ ದಿಲೀಪ್ ಸೆರೆಮನೆ ವಾಸ ಕೂಡ ಅನುಭವಿಸಿದ್ದರು.