Don't Miss!
- News 11 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ: ಡಾ. ಕೆ. ಸುಧಾಕರ್
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೆಸರು ಬದಲಾಯಿಸಿಕೊಳ್ಳುತ್ತಿದ್ದಾರೆ ರಶ್ಮಿಕಾ, ಹೆಸರಿಡುವ ಅವಕಾಶ ನಿಮಗೆ!
ದಕ್ಷಿಣ ಭಾರತ ಸಿನಿ ಉದ್ಯಮದಲ್ಲಿ ಹೆಸರು ಮಾಡುತ್ತಿರುವ ರಶ್ಮಿಕಾ ಮಂದಣ್ಣ ಗೆ ತಮ್ಮ ಹೆಸರಿನ ಮೇಲೆ ಬೇಸರವಾಗಿದೆಯೇ?
Recommended Video
ಈ ಅನುಮಾನಕ್ಕೆ ಕಾರಣವಾಗಿದೆ ಅವರ ಟ್ವಿಟ್ಟರ್ ಪೋಸ್ಟ್. ' ನಟಿ ರಶ್ಮಿಕಾ ಮಂದಣ್ಣ ಹೆಸರು ಬದಲಾಯಿಸಿಕೊಳ್ಳುತ್ತಿದ್ದಾರಂತೆ. ಹೆಸರಿಡುವ ಅವಕಾಶ ಅಭಿಮಾನಿಗಳಿಗೆ ಕೊಟ್ಟಿದ್ದಾರೆ!
ತಮ್ಮನ್ನು ಟ್ರೋಲ್ ಮಾಡುವವರಿಗೆ ತಿರುಗೇಟು ನೀಡಿದ ರಶ್ಮಿಕಾ ಮಂದಣ್ಣ
ಭಿನ್ನವಾದ ಅದರಲ್ಲಿಯೂ ಕೊಡಗಿನ ಪ್ರಾದೇಶಿಕತೆ ಸಾರುವ ಮಂದಣ್ಣ ಹೆಸರನ್ನು ಜೊತೆಯಾಗಿರಿಸಿಕೊಂಡು ಉಳಿದ ನಟಿಯರಿಗಿಂತಲೂ ಭಿನ್ನವಾಗಿ ಉಳಿದಿದ್ದ ರಶ್ಮಿಕಾ ಮಂದಣ್ಣ ಗೆ ಇದ್ದಕ್ಕಿದ್ದಂತೆ ಹೆಸರು ಬದಲಾಯಿಸಿಕೊಳ್ಳುವ ಖಯಾಲು ಬಂದಿದ್ದು ಏಕೆ?
ಸಾಮಾಜಿಕ ಜಾಲತಾಣದಲ್ಲಿ ರಶ್ಮಿಕಾ ಪ್ರಶ್ನೆ
ಅಸಲಿಗೆ ರಶ್ಮಿಕಾ ಮಂದಣ್ಣ ಅವರ ಹೆಸರು ಬದಲಾವಣೆ ಐಡಿಯಾ ಗಂಭೀರವಾದದ್ದೇನೂ ಅಲ್ಲ. ಲಾಕ್ಡೌನ್ ಸಮಯದಲ್ಲಿ ಮನೆಯಲ್ಲಿ ಕೂತಿರುವ ರಶ್ಮಿಕಾ ಮಂದಣ್ಣ, ತಮಾಷೆಗಾಗಿ ಹೀಗೊಂದು ಪ್ರಶ್ನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಯಾವ ಹೆಸರು ನನಗೆ ಸೂಕ್ತ: ರಶ್ಮಿಕಾ ಪ್ರಶ್ನೆ
'ಒಂದೊಮ್ಮೆ ನಾನು ಹೆಸರು ಬದಲಾಯಿಸಿಕೊಳ್ಳಬೇಕು ಎಂದಾದರೆ ಯಾವ ಹೆಸರು ಸೂಕ್ತ? ಎಂದು ಪ್ರಶ್ನಿಸಿದ್ದಾರೆ. ಈ ಬಾರಿಯಾದರೂ ತುಸು ಸೌಮ್ಯದಿಂದ ವರ್ತಿಸಿ ಎಂದು ಟ್ರೋಲ್ಗಳಿಗೆ ಮನವಿಯನ್ನೂ ಮಾಡಿದ್ದಾರೆ ರಶ್ಮಿಕಾ. ಆದರೆ ಈ ಪ್ರಶ್ನೆಯನ್ನು ಅವರು ಕೇಲವ ತಮಾಷೆಗಾಗಿ ಕೇಳಿದ್ದಾರೆ.
10 ಜನಪ್ರಿಯ ನಟಿಯರ ಪಟ್ಟಿಯಲ್ಲಿ ರಶ್ಮಿಕಾ: ನಂ.1 ಸ್ಥಾನದಲ್ಲಿ ನಟಿ ಸಮಂತಾ
ಟ್ರೋಲಿಗರಿಗೆ ಆಹಾರವಾದ ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ ಅನ್ನು ಹಲವಾರು ಬಾರಿ ಟ್ರೋಲಿಗರು ತಮ್ಮ ಗುರಿಯನ್ನಾಗಿಸಿಕೊಂಡಿದ್ದಾರೆ. ಕೆಲವೊಮ್ಮೆಯಂತೂ ಅವಾಚ್ಯ ಶಬ್ದಗಳನ್ನು ಬಳಸಿ ಟ್ರೋಲ್ ಮಾಡಿದ್ದೂ ಸಹ ಇದೆ. ಬಹುತೇಕ ಮೌನವಾಗಿರುವ ರಶ್ಮಿಕಾ ಈಗ ಸ್ವಲ್ಪವೇ ತಿರುಗಿ ಬಿದ್ದಿದ್ದಾರೆ.
ಟ್ರೋಲಿಗರಿಗೆ ತಿರುಗೇಟು ನೀಡಿದ ರಶ್ಮಿಕಾ
'ನೀವು ಎದುರಿಸುವುದೆಲ್ಲವನ್ನು ವಿಶಾಲ ಮನೋಭಾವದಿಂದ, ತೀಕ್ಷ್ಣ ದೃಷ್ಟಿ ಮತ್ತು ಗಟ್ಟಿಯಾದ ಹೃದಯದಿಂದ ಸ್ವೀಕರಿಸುತ್ತಾ ಬೆಳೆಯಬೇಕು' ಎಂದು ರಶ್ಮಿಕಾ ಹೇಳಿದ್ದಾರೆ. ಇದು ಟ್ರೋಲಿಗರನ್ನು ಉದ್ದೇಶಿಸಿಯೇ ಅವರು ಹೇಳಿರುವುದು ಎನ್ನಲಾಗಿದೆ.