ವೀರಶೈವ ವೇದಿಕೆಯಿಂದ ಸಂಕೇತ್ ಕಾಶಿಗೆ ನಮನ
ಪ್ರಶಾಂತ್ ಕಲ್ಲೂರ್ ನೇತೃತ್ವದ ವೀರಶೈವ ಲಿಂಗಾಯತ ಯುವ ವೇದಿಕೆಯು ಭಾನುವಾರ ಬೆಂಗಳೂರು ನಗರದ ಕುಮಾರಕೃಪಾ ರಸ್ತೆಯಲ್ಲಿರುವ ಗಾಂಧಿ ಭವನದಲ್ಲಿ ಸಮಾಜದ ಕಲಾ ರತ್ನ ಲಿಂಗೈಕ್ಯ ಶ್ರೀ ಸಂಕೇತ್ ಕಾಶಿ ಅವರ ನುಡಿ ನಮನ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಪ್ರಶಾಂತ್ ಕಲ್ಲೂರ್, ಕಲಾವಿದರಾದ ಜಗದೀಶ್ ಮಲೆನಾಡು ಹಾಗೂ ಅವರ ಪತ್ನಿ, ಡಾ|| ಶ್ರೀ ಚಿಕ್ಕಹೆಜ್ಜಾಜಿ ಮಹದೇವ್, ರಾಜ್ಯ ಸರ್ಕಾರಿ ನೌಕರರ ಸಂಘದ ಖಜಾಂಚಿಗಳಾದ ಯೋಗಾನಂದ ಸೇರಿದಂತೆ ಹಲವರು ಲಿಂಗೈಕ್ಯ ಸಂಕೇತ್ ಕಾಶಿ ಅವರಿಗೆ ನುಡಿ ನಮನವನ್ನು ಸಲ್ಲಿಸಿದರು.

ಜಗದೀಶ್ ಮಲೆನಾಡು ಅವರು ಮಾತನಾಡುತ್ತಾ ಕಾಶಿ ಮತ್ತವರ ಒಡನಾಟ, ಕಳೆದ 10-12 ದಿನಗಳ ಹಿಂದೆ ಎಲ್ಲರೂ ಒಟ್ಟಾಗಿದ್ದ ಸಂದರ್ಭವನ್ನು ನೆನೆಯುತ್ತಾ ಭಾವುಕರಾದರು.

ಇನ್ನು ಡಾ|| ಚಿಕ್ಕಹೆಜ್ಜಾಜಿ ಮಹದೇವ್ ಅವರು ಸಂಸ್ಕಾರವಂತ ಎನ್ನುವಂತಹ ಚಿತ್ರದಲ್ಲಿ ಒಟ್ಟಿಗೆ ಅಭಿನಯಿಸಿದ ಕೆಲವು ಕ್ಷಣಗಳನ್ನು ಮೆಲುಕು ಹಾಕುತ್ತಾ ಚಿತ್ರರಂಗದಲ್ಲಿ ಪೋಷಕ ಪಾತ್ರಧಾರಿಗಳಿಗೆ ಇರುವಂತಹ ಕಷ್ಟವನ್ನು ವಿವರಿಸಿದರು. ಕಾರ್ಯಕ್ರಮದ ಅತಿಥಿಗಳು ಲಿಂಗೈಕ್ಯರಾದ ಕಾಶಿ ಅವರ ಆತ್ಮಕ್ಕೆ ಶಾಂತಿ ಕೋರಿದರು.


Click it and Unblock the Notifications











