Don't Miss!
- News ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಉಳುವಿಗಾಗಿ ಸೆಣಸಾಟ: ಕಾಂಗ್ರೆಸ್ ಅವಕಾಶಕ್ಕಾಗಿ ಹೋರಾಟ
- Automobiles Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- Sports IPL 2024: ಮುಂಬೈ ಇಂಡಿಯನ್ಸ್ ವಿರುದ್ಧ ಶತಕ; ರೋಹಿತ್, ಕೊಹ್ಲಿಗೆ ಕ್ರೆಡಿಟ್ ನೀಡಿದ ಯಶಸ್ವಿ ಜೈಸ್ವಾಲ್!
- Technology Itel: ಭಾರತದಲ್ಲಿ ಐಟೆಲ್ S24 ಲಾಂಚ್! 108MP ಕ್ಯಾಮೆರಾ.. ಬೆಲೆ ಇಷ್ಟೇ
- Lifestyle ಪ್ರವಾಹಕ್ಕೆ ಕಾರಣವಾಗೋದು ಮಳೆಯಲ್ಲ ಬೇಸಿಗೆಯ ಬಿಸಿಲು..! ನಂಬಲು ಸಾಧ್ಯವಿಲ್ಲ ಅಂದ್ರೆ ಈ ವಿಡಿಯೋ ನೋಡಿ..!
- Finance ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 10 ಹಳದಿ ಅನಕೊಂಡ ಸಹಿತ ವ್ಯಕ್ತಿ ಬಂಧನ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನ್ನಡ ಚಿತ್ರಕ್ಕಾಗಿ ಕಾಲಿವುಡ್ ನಿಂದ ಬಂದ ಸಾಕ್ಷಿ ಅಗರ್ವಾಲ್
ಎರಡು ವರ್ಷಗಳ ಹಿಂದೆ ನವರಸ ನಾಯಕ ಜಗ್ಗೇಶ್ ಅಭಿನಯದ 'ಸಾಫ್ಟ್ ವೇರ್ ಗಂಡ' ಚಿತ್ರದಲ್ಲಿ ಅಭಿನಯಿಸಿದ್ದ ಕಾಲಿವುಡ್ ಬೆಡಗಿ ಸಾಕ್ಷಿ ಅಗರ್ವಾಲ್ ಇದೀಗ ಮತ್ತೆ ಸ್ಯಾಂಡಲ್ ವುಡ್ ಕಡೆ ಮುಖ ಮಾಡಿದ್ದಾರೆ. ಅದು '19/11' ಎಂಬ ಚಿತ್ರದ ಮೂಲಕ.
'19/11' ಚಿತ್ರದ 'ನಾಜೂಕು ನಲ್ಲೆ... ನಾ ನಡೆಯ ಬಲ್ಲೆ' ಹಾಡಿಗೆ ಸಾಕ್ಷಿ ಅಗರ್ವಾಲ್ ಹೆಜ್ಜೆ ಹಾಕಿದ್ದಾರೆ. ರಾಘವೇಂದ್ರ ಕಾಮತ್ ಸಾಹಿತ್ಯ ಇರುವ 'ನಾಜೂಕು ನಲ್ಲೆ...' ಹಾಡಿನ ಚಿತ್ರೀಕರಣ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಿರ್ಮಿಸಲಾಗಿದ್ದ ಅದ್ಧೂರಿ ಸೆಟ್ ನಲ್ಲಿ ನಡೆದಿದೆ.
ಸಾಕ್ಷಿ ಅಗರ್ವಾಲ್ ಸೊಂಟ ಬಳುಕಿಸಿರುವ ಈ ಹಾಡಿಗೆ ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶನ ಮಾಡಿದ್ದಾರೆ. ಅಭಿಲಾಶ್ ಮತ್ತು ಜೋಯಲ್ ಸಂಗೀತ ಸಂಯೋಜಿಸಿರುವ ಈ ಹಾಡಿಗೆ ಖ್ಯಾತ ಗಾಯಕಿ ವಸುಂಧರ ದಾಸ್ ದನಿಯಾಗಿದ್ದಾರೆ.
ಆರ್ಯನ್.ಎಂ.ಪ್ರತಾಪ್ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಈಗಾಗಲೇ ಶೇಕಡಾ ಐವತ್ತರಷ್ಟು ಚಿತ್ರೀಕರಣ ಮುಗಿದಿದೆ. ಮುಂದಿನ ಹಂತದ ಚಿತ್ರೀಕರಣ ಕುದುರೆಮುಖ, ಚಿಕ್ಕಮಗಳೂರು ಹಾಗೂ ಯೂರೋಪ್ನಲ್ಲಿ ನಡೆಯಲಿದೆ.
ಈ ಚಿತ್ರದಲ್ಲಿ ಒಟ್ಟು ಎಂಟು ಹಾಡುಗಳಿದ್ದು, ಅಭಿಲಾಶ್ & ಜೋಯಲ್, ಲಯ ಕೋಕಿಲ ಹಾಗೂ ಲಿಜೊ ಜಸ್ ಸಂಗೀತ ನೀಡಿದ್ದಾರೆ. ರಾಘವೇಂದ್ರ ಕಾಮತ್, ಎ.ಆರ್.ಬಾಬು, ಆರ್ಯನ್ ಪ್ರತಾಪ್ '19/11' ಚಿತ್ರದ ಹಾಡುಗಳನ್ನು ಬರೆದಿದ್ದು, ಆಶಾ ಬೋಸ್ಲೆ, ವಸುಂಧರಾ ದಾಸ್, ಶಂಕರ್ ಮಹದೇವನ್, ಚಿತ್ರಾ, ವಿಜಯ ರಾಘವೇಂದ್ರ, ಚೇತನ್ ನಾಯಕ್, ಜೋಯಲ್ ಡುಬ್ಬಾ ಮತ್ತು ಆರ್ಯನ್ ಪ್ರತಾಪ್ ಹಾಡಿದ್ದಾರೆ.
'19/11' ಚಿತ್ರದ ತಾರಾಬಳಗದಲ್ಲಿ ಪೂಜಾ ಲೋಕೇಶ್, ಸಾಕ್ಷಿ ಅಗರ್ವಾಲ್, ಕುಮಾರ್ ಗೋವಿಂದ್, ಲಯ ಕೋಕಿಲ, ಅಸ್ಮಯ್ ಶೆಟ್ಟಿ, ವಸಿಷ್ಟ, ಪಲ್ಲವಿ ನಾಯಕ್, ರಕ್ಷಕ್, ಟೆನ್ನಿಸ್ ಕೃಷ್ಣ, ಸಾಧುಕೋಕಿಲ, ಗಿರಿಜಾ ಲೋಕೇಶ್, ರವಿ ಕಾಳೆ, ಚಂದ್ರಶೇಖರ್, ಓಂ ತೇಜ್, ಮಂಜುನಾಥ್, ಸಂಜಯ್, ಮಾಸ್ಟರ್ ಅನುರಾಗ್ ಮುಂತಾದವರಿದ್ದಾರೆ.