ಪರಿಸರ ದ್ರೋಹಿಗಳ ವಿರುದ್ದ ಸಮರ ಸಾರಿದ ನವರಸ ನಾಯಕ

By Pavithra

Recommended Video

ಜಗ್ಗೇಶ್ ಇಷ್ಟು ಗರಂ ಆಗೋದಕ್ಕೆ ಏನ್ ಕಾರಣ..!!? | Filmibeat Kannada

ನವರಸ ನಾಯಕ ಜಗ್ಗೇಶ್ ಸುಮಾರು 30 ವರ್ಷದಿಂದ ಮಲ್ಲೇಶ್ವರಂ ನಿವಾಸಿಯಾಗಿದ್ದಾರೆ. ಕಳೆದ ಮೂವತ್ತು ವರ್ಷದಿಂದಲೂ ತಮ್ಮ ಮನೆಯ ಸುತ್ತಾ ಮುತ್ತ ಮಕ್ಕಳಂತೆ ಸಾಕಷ್ಟು ಮರಗಳನ್ನ ಬೆಳೆಸಿ ಪೋಷಣೆ ಮಾಡುತ್ತಾ ಬಂದಿದ್ದಾರೆ. ತಾವೇ ಪ್ರತಿ ಮರಗಳಿಗೂ ನೀರು ಪೂರೈಸುತ್ತಾ ಬೆಳಸಿಕೊಂಡು ಬಂದಿದ್ದಾರೆ.

ಆದರೆ ಇಂದು ರಾಜ್ಯ ಕಾರ್ಯಕಾರಿಣಿ ಸಭೆ ಮುಗಿಸಿಕೊಂಡ ಮನೆಯ ಬಳಿ ಬಂದ ಜಗ್ಗೇಶ್ ಅವರಿಗೆ ಶಾಕ್ ಕಾದಿತ್ತು. ಮನೆಯ ಆವರಣಕ್ಕೆ ಸಮಸ್ಯೆ ಆಗುತ್ತದೆ ಎನ್ನುವ ನಿಟ್ಟಿನಲ್ಲಿ ತಮ್ಮ ಮನೆಯ ಸುತ್ತಾ ಮುತ್ತ ನಿವಾಸಿಗಳು ಸೊಂಪಾಗಿ ಬೆಳೆದಿದ್ದ ಮರವನ್ನು ಕಡಿಸಿ ಹಾಕಿದ್ದಾರೆ. ಇದರಿಂದ ಬೇಸರವಾದ ನವರಸ ನಾಯಕ ಪರಿಸರಕ್ಕೆ ಆದ ಅನ್ಯಾಯವನ್ನು ಫೇಸ್ ಬುಲ್ ಲೈವ್ ಮಾಡುವ ಮೂಲಕ ಜನರಿಗೆ ತಲಪಿಸಿದ್ದಾರೆ.

Jaggesh expresses anger over cutting trees near his house

ಈ ಹಿಂದೆಯೂ ಇದೇ ರೀತಿಯಲ್ಲಿ ಮರಗಳನ್ನ ಕಡಿಯಲು ಬಂದಾಗ ಜಗ್ಗೇಶ್ ಅವರೇ ಖುದ್ದಾಗಿ ಶಾಸಕರನ್ನು ಭೇಟಿ ಮಾಡಿ ಮರಗಳನ್ನು ಸಂರಕ್ಷಿಸಿಕೊಂಡಿದ್ದರು. ಆದರೆ ಈ ಬಾರಿ ಜಗ್ಗೇಶ್ ಅವರು ಇಲ್ಲದ ಸಮಯ ನೋಡಿ ಮರಗಳನ್ನು ಕಡಿದು ಹಾಕಿದ್ದಾರೆ. ಮನೆಯ ಸುತ್ತಾ ಬೆಳೆದಿರುವ ಮರವನ್ನು ಕಡಿಯಲು ಅನುಮತಿ ನೀಡಿರುವವರು ಯಾರು? ಮರ ಕಡಿಯುವಂತೆ ಪತ್ರ ಬರೆದವರು ಯಾರು? ಎನ್ನುವುದನ್ನು ತಿಳಿಯುವವರೆಗೂ ಹೋರಾಟ ಮಾಡುವುದಾಗಿ ಜಗ್ಗೇಶ್ ಎಚ್ಚರಿಕೆ ಕೊಟ್ಟಿದ್ದಾರೆ.

Jaggesh expresses anger over cutting trees near his house

ಜಗ್ಗೇಶ್ ಅವರ ಜೊತೆಯಲ್ಲಿ ಸಾರ್ವಜನಿಕರು ಕೈ ಜೋಡಿಸುವಂತೆ ಮನವಿ ಮಾಡಿದ್ದು ಯಾರು ಹೋರಾಟಕ್ಕೆ ಮುಂದಾಗಲಿಲ್ಲ ಎಂದರೆ ತಾವೊಬ್ಬರೇ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ. ಮರಗಳನ್ನು ಕಡಿದಿರುವುದು ಜಗ್ಗೇಶ್ ಅವರ ಮನಸ್ಸಿಗೆ ನೋವನ್ನು ಉಂಟು ಮಾಡಿದೆ. ಮರಗಳಲ್ಲಿ ವಾಸವಿದ್ದ ನೂರಾರು ಹಕ್ಕಿ, ಪಕ್ಷಿಗಳು ವಾಸಸ್ಥಾನವನ್ನು ಕಳೆದುಕೊಂಡಿರುವುದು ನವರಸ ನಾಯಕನಿಗೆ ಮರುಕ ಉಂಟು ಮಾಡಿದೆ.

More from Filmibeat

English summary
Actor Jaggesh expresses anger over cutting trees near his house. Jaggesh told the people about the tree cut down through facebook live .
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X