Don't Miss!
- Sports CSK vs LSG IPL 2024: ರುತುರಾಜ್ ಭರ್ಜರಿ ಶತಕ, ದುಬೆ ಸ್ಫೋಟಕ ಬ್ಯಾಟಿಂಗ್; ಲಕ್ನೋಗೆ ಬೃಹತ್ ಗುರಿ ನೀಡಿದ ಚೆನ್ನೈ
- News Narendra Modi: ಕರ್ನಾಟಕಕ್ಕೆ ಏಪ್ರಿಲ್ 29, 29ಕ್ಕೆ ಪ್ರಧಾನಿ ಮೋದಿ ಆಗಮನ
- Lifestyle UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅರೆರೆ.! ಜಗ್ಗೇಶ್ ಮತ್ತೆ ಮದುವೆ ಆದ್ರಾ ಏನ್ ಕತೆ
ನಿರ್ದೇಶಕ ವಿಜಯ್ ಪ್ರಸಾದ್ ಅವರು ಅಂತೂ ಇಂತೂ 'ನೀರ್ ದೋಸೆ' ಹುಯ್ಯೋದನ್ನ ಮುಗಿಸಿ ಬಿಟ್ರು. ಇನ್ನೇನಿದ್ದರೂ ಪ್ರೇಕ್ಷಕರಿಗೆ ಬಾಳೆ ಎಲೆ ಹಾಕಿ ಬಡಿಸಲು ಮಾತ್ರ ಬಾಕಿ ಉಳಿದಿರುವುದು.
ನವರಸ ನಾಯಕ ಜಗ್ಗೇಶ್, ನಟಿ ಹರಿಪ್ರಿಯಾ, ಹಿರಿಯ ನಟ ದತ್ತಣ್ಣ ಮತ್ತು ಸುಮನಾ ರಂಗನಾಥ್ ಮುಂತಾದವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ 'ನೀರ್ ದೋಸೆ' ಸಿನಿಮಾ ಶೂಟಿಂಗ್ ಕಂಪ್ಲೀಟ್ ಮಾಡಿದೆ.[ಚಿತ್ರಗಳು: 'ನೀರ್ ದೋಸೆ' ಹುಯಿದು ಸುಸ್ತಾದ ವಿಜಯ್ ಪ್ರಸಾದ್]
ಸುಮಾರು 2 ವರ್ಷಗಳ ಹಿಂದೆ ಸೆಟ್ಟೇರಿದ್ದ 'ನೀರ್ ದೋಸೆ' ಹಲವಾರು ರಗಳೆಗಳನ್ನು ಹಿಮ್ಮೆಟ್ಟಿ ಅಂತೂ ಶೂಟಿಂಗ್ ಮುಗಿಸಿದೆ. ಬಹಳ ದಿನಗಳಿಂದ ಬೆಂಗಳೂರಿನ ಸುತ್ತಮುತ್ತ ಶೂಟಿಂಗ್ ನಡೆಸುತ್ತಿದ್ದ ನಿರ್ದೇಶಕ ವಿಜಯ್ ಪ್ರಸಾದ್ ಅವರು ಕೊನೆಗೂ 'ನೀರ್ ದೋಸೆ' ಚಿತ್ರದ ಶೂಟಿಂಗ್ ಯಶಸ್ವಿಯಾಗಿ ಮುಗಿಸುವಲ್ಲಿ ಸಫಲರಾಗಿದ್ದಾರೆ.
ಇನ್ನು ಚಿತ್ರದ ಕೊನೆಯ ಹಂತದ ಶೂಟಿಂಗ್ ಮುಗಿಸಿರುವ ಇಡೀ ಚಿತ್ರತಂಡ ಶೂಟಿಂಗ್ ಸ್ಟಿಲ್ಸ್ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಕೊನೆ ಹಂತದಲ್ಲಿ ನಟ ಜಗ್ಗೇಶ್ ಮತ್ತು ಸುಮನಾ ರಂಗನಾಥ್ ಅವರ ಮದುವೆಯ ದೃಶ್ಯವನ್ನು ಶೂಟಿಂಗ್ ಮಾಡಲಾಗಿತ್ತು.[ಜಗ್ಗೇಶ್ ರ 'ನೀರ್ ದೋಸೆ' ಪಿಕ್ಚರ್ನ್ಯಾಗ ಡೈಲಾಗ್ ಹೆಂಗೆಲ್ಲಾ ಐತಿ ಗೊತ್ತೇನ್ರೀ?]
ಚಿತ್ರದ ಶೂಟಿಂಗ್ ಸ್ಟಿಲ್ಸ್ ಮತ್ತು ಜಗ್ಗೇಶ್ ಅವರ ಮನದಾಳದ ಮಾತುಗಳನ್ನು ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...
ಕ್ಲೈಮ್ಯಾಕ್ಸ್ ಸಾಂಗ್ ಆದ್ಮೇಲೆ ಪ್ಯಾಕಪ್
ಕೊನೆಯದಾಗಿ ಕಂಠೀರವ ಸ್ಟುಡಿಯೋದಲ್ಲಿ ಒಂದು ಕ್ಲೈಮ್ಯಾಕ್ಸ್ ಸಾಂಗ್ ಶೂಟ್ ಮಾಡಿದ ನಂತರ ಚಿತ್ರದ ಶೂಟಿಂಗ್ ಮುಗಿಸಲಾಯಿತು.[ಸಿಗರೇಟ್ ಸೇದಿ ಆರೋಗ್ಯ ಕೆಡಿಸಿಕೊಂಡ 'ನೀರ್ ದೋಸೆ' ಬೆಡಗಿ]
ಜಗ್ಗೇಶ್ ಮದುವೆ
ನವರಸ ನಾಯಕ ಜಗ್ಗೇಶ್ ಮತ್ತು ಸುಮನಾ ರಂಗನಾಥ್ ಅವರ ಮದುವೆ ದೃಶ್ಯದ ಚಿತ್ರೀಕರಣ ಮುಗಿಸಿ ಬಹು ದಿನಗಳ ಕಾಲ ಒಲೆಯ ಮೇಲಿದ್ದ 'ನೀರ್ ದೋಸೆ' ಕಾವಲಿಯನ್ನು ಕೆಳಗಿರಿಸಲಾಯಿತು.[ಚಿತ್ರಗಳು : 'ನೀರ್ ದೋಸೆ' ಸೆಟ್ ನಲ್ಲಿ ಮೋಜು-ಮಸ್ತಿ]
ಸ್ಮಶಾನದಲ್ಲಿ ಪ್ರಥಮ ರಾತ್ರಿ ಸನ್ನಿವೇಶ
ರುದ್ರಭೂಮಿಯಲ್ಲಿ ನವರಸ ನಾಯಕ ಜಗ್ಗೇಶ್ ಮತ್ತು ಸುಮನಾ ರಂಗನಾಥ್ ಅವರ ಪ್ರಥಮ ರಾತ್ರಿ ಸನ್ನಿವೇಶವನ್ನು ಚಿತ್ರೀಕರಿಸಲಾಗಿದೆ. ಸ್ಮಶಾನಪ್ರಿಯ 'ಸ್ಮಶಾನರುದ್ರಮುನಿ' ಸ್ವಾಮಿ ವಿಜಯ್ ಪ್ರಸಾದ್ ಎಂದು ಜಗ್ಗೇಶ್ ಅವರು ಟ್ವೀಟ್ ಮಾಡಿದ್ದಾರೆ.
ಡೌ ಮಾಡುತ್ತಿರುವ ಜಗ್ಗೇಶ್-ವಿಜಯ್
ಚಿತ್ರದ ಕಡೇ ಹಾಗೂ ಮುಕ್ತಾಯದ ಹಾಡಲ್ಲಿ ನಾಯಕಿಯರ ನೋಡಿ ಸುಯ್ ಟಪಕ್ ಅಂತ ಡೌ ಮಾಡುತ್ತಿರುವ ಮದುಮಗ ನವರಸ ನಾಯಕ ಜಗ್ಗೇಶ್ ಮತ್ತು ನಿರ್ದೇಶಕ ವಿಜಯ್ ಪ್ರಸಾದ್ ಅವರ ವರಸೆ ನೋಡಿ.
ಇಬ್ಬರು ಸುಂದರಿಯರ ನಡುವೆ ನವರಸ ನಾಯಕ
ಕ್ಲೈಮ್ಯಾಕ್ಸ್ ಸಾಂಗ್ ಶೂಟ್ ನ ಚಿಕ್ಕ ಗ್ಯಾಪ್ ನಲ್ಲಿ ನವರಸ ನಾಯಕ ಜಗ್ಗೇಶ್ ಅವರು ಇಬ್ಬರು ಬ್ಯೂಟಿಗಳಾದ ಸುಮನಾ ರಂಗನಾಥ್ ಮತ್ತು ಹರಿಪ್ರಿಯಾ ಅವರ ಜೊತೆ ಫೊಟೋ ಕ್ಲಿಕ್ಕಿಸಿಕೊಂಡಿದ್ದು ಹೀಗೆ.
ವಿಜಯ್ ಪ್ರಸಾದ್ ಮಸ್ತಿ
ಕಂಠೀರವ ಸ್ಟುಡಿಯೋದಲ್ಲಿ ನಡೆದ ಶೂಟಿಂಗ್ ಸಂದರ್ಭದಲ್ಲಿ ಸೆಟ್ ನಲ್ಲಿ ನಿರ್ದೇಶಕ ವಿಜಯ್ ಪ್ರಸಾದ್ ಮತ್ತು ನಟಿ ಸುಮನಾ ರಂಗನಾಥ್ ಅವರು ಮೋಜು-ಮಸ್ತಿ ಮಾಡಿದ್ದು ಹೀಗೆ.
ಮದುವೆ ಆಯ್ತು ಊಟ ಎಲ್ಲಿ
ಶೂಟಿಂಗ್ ನಡುವೆಯೂ ಚಿತ್ರತಂಡದವರು ಸೆಟ್ ನಲ್ಲಿ ಎಷ್ಟು ಎಂಜಾಯ್ ಮಾಡುತ್ತಾರೆ ಎಂಬುದಕ್ಕೆ ಈ ಫೊಟೋ ಸಾಕ್ಷಿ. 'ಮದುವೆ ಏನೋ ಆಯ್ತು ಊಟ ಎಲ್ಲಿ ಅಂತ ಕೇಳಿದಂತಿದೆ' ಇವರ ವರಸೆ.
#neerdose..ನೀರ್ದೋಸೆ ಚಿತ್ರದ ಚಿತ್ರೀಕರಣ ನಾಳೆ ಮುಕ್ತಾಯವಾಗುತ್ತೆ..ನಿರ್ದೇಶಕ ವಿಜಯ್ ಪ್ರಸಾದ್ ಬಗ್ಗೆ ಏನಾದರು ಹೇಳಬೇಕು ಅನ್ನಿಸಿತು..ಕಾರಣ...
Posted by Jaggesh Shivalingappa on Tuesday, March 1, 2016
ಜಗ್ಗೇಶ್ ದೀರ್ಘ ಸ್ಟೇಟಸ್
ಶೂಟಿಂಗ್ ಮುಗಿದ ಖುಷಿಯಲ್ಲಿ ನವರಸ ನಾಯಕ ಜಗ್ಗೇಶ್ ಅವರು ತಮ್ಮ ಮನದಾಳದ ಮಾತನ್ನು ದೀರ್ಘ ಸ್ಟೇಟಸ್ ಮೂಲಕ ಹೊರಗೆಡವಿದ್ದಾರೆ.