Just In
Don't Miss!
- News
ಅರ್ನಬ್ ಗೋಸ್ವಾಮಿ ಚಾಟ್ ಲೀಕ್; ರಾಷ್ಟ್ರೀಯ ಭದ್ರತೆ ಪ್ರಶ್ನೆ ಎತ್ತಿದ ಕಾಂಗ್ರೆಸ್
- Finance
ಕಾನ್ ಸ್ಟೇಬಲ್ ಡೆಬಿಟ್ ಕಾರ್ಡ್ ನಿಂದ 40 ಸಾವಿರ ರು. ಎಗರಿಸಿದ ದುಷ್ಕರ್ಮಿ
- Lifestyle
ನೀವು ರಾತ್ರಿ ಭಾರೀ ಭೋಜನ ಮಾಡೋರಾದ್ರೆ ಈ ಸ್ಟೋರಿ ಓದಲೇಬೇಕು...!
- Automobiles
ಭಾರತದಲ್ಲಿ ಬಿಡುಗಡೆಯಾದ ಐದು ವರ್ಷಗಳಲ್ಲಿ ಹೊಸ ದಾಖಲೆಗೆ ಕಾರಣವಾದ ಹ್ಯುಂಡೈ ಕ್ರೆಟಾ
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Sports
ಐಪಿಎಲ್ 2021: ಬಿಡುಗಡೆಗೊಳಿಸಿದಕ್ಕೆ ಧನ್ಯವಾದ ಎಂದ ಪಾರ್ಥಿವ್ ಪಟೇಲ್
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನಟಿ ಜೂಹಿ ಚಾವ್ಲಾ ಮಗನ ಮಾನವೀಯತೆ ಗುಣಕ್ಕೆ ಭೇಷ್ ಎನ್ನಲೇಬೇಕು
ಬಾಲಿವುಡ್ ಚೆಲುವೆ ಜೂಹಿ ಚಾವ್ಲಾ ಅಂದ್ರೆ ಕನ್ನಡ ಚಿತ್ರರಸಿಕರಿಗೂ ಮರೆಯಲಾಗದ ಮುಖ. ರವಿಚಂದ್ರನ್ ಅವರ ಪ್ರೇಮಲೋಕ, ಕಿಂದರಿಜೋಗಿ, ಶಾಂತಿ ಕ್ರಾಂತಿ ಸಿನಿಮಾಗಳು ಥಟ್ ಅಂತ ನೆನಪಿಗೆ ಬರುತ್ತೆ. ಕನ್ನಡದಲ್ಲಿ ಮಾಡಿದ್ದು ಮೂರ್ನಾಲ್ಕೇ ಚಿತ್ರಗಳಾದರೂ ದಶಕಗಳ ಕಾಲ ಕನ್ನಡ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದುಕೊಂಡಿದ್ದಾರೆ.
ಉದ್ಯಮಿ ಜಯ್ ಮೆಹ್ತಾ ಅವರೊಂದಿಗೆ ವಿವಾಹವಾಗಿರುವ ಜೂಹಿ ಚಾವ್ಲಾ ಅವರಿಗೆ ಇಬ್ಬರು ಮಕ್ಕಳು. ಇದೀಗ, ಜೂಹಿ ಚಾವ್ಲಾ ಅವರ ಮಗ ಒಂದೊಳ್ಳೆ ಕೆಲಸ ಮಾಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ದಕ್ಷಿಣ ಬ್ರೆಜಿಲ್ ತಲುಪಿದ ಆಸ್ಟ್ರೇಲಿಯಾ ಕಾಳ್ಗಿಚ್ಚು
ಇತ್ತೀಚಿಗಷ್ಟೆ ಆಸ್ಟ್ರೇಲಿಯಾದಲ್ಲಿ ಕಾಳ್ಗಿಚ್ಚು ಸಂಭವಿಸಿ ಭಾರಿ ಪ್ರಮಾಣದ ನಷ್ಟವಾಗಿತ್ತು. ಅನೇಕ ಪ್ರಾಣಿ-ಪಕ್ಷಿಗಳು ಸಾವನ್ನಪ್ಪಿದ್ದವು. ಈ ಘಟನೆಯಿಂದ ಬೇಸರಗೊಂಡಿದ್ದ ಜೂಹಿ ಚಾವ್ಲಾ ಅವರ ಮಗ ಅರ್ಜುನ್ ತಮ್ಮ ಪಾಕೆಟ್ ಹಣವನ್ನು ಆಸ್ಟ್ರೇಲಿಯಾ ಅರಣ್ಯ ಪುನರ್ ಚೇತನಕ್ಕಾಗಿ ದೇಣಿಗೆ ನೀಡಿದ್ದಾರೆ.
ದಿನನಿತ್ಯದ ಖರ್ಚಿಗಾಗಿ ಸಂಗ್ರಹಿಸಿಕೊಂಡಿದ್ದ 300 ಪೌಂಡ್ (28,000 ರೂಪಾಯಿ) ಗಳನ್ನು ಆಸ್ಟ್ರೇಲಿಯಾಗೆ ದಾನವಾಗಿ ನೀಡಿದ್ದಾರೆ. ಈ ವಿಷಯವನ್ನು ಖುದ್ದು ಜೂಹಿ ಚಾವ್ಲಾ ಹೇಳಿಕೊಂಡಿದ್ದಾರೆ.
ಆಸ್ಟ್ರೇಲಿಯಾ; ಐದು ದಿನದಲ್ಲಿ 5 ಸಾವಿರ ಒಂಟೆಗಳ ಹತ್ಯೆ
ಲಂಡನ್ ಬೋರ್ಡಿಂಗ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಜುನ್, ತನ್ನ ಪಾಕೆಟ್ ಹಣವನ್ನು ಆಸ್ಟ್ರೇಲಿಯಾಗೆ ದಾನ ಮಾಡಿರುವುದಾಗಿ ತಾಯಿಯ ಬಳಿ ತಿಳಿಸಿದರಂತೆ. ಈ ಸುದ್ದಿ ಕೇಳಿ ನಿಜಕ್ಕೂ ಖುಷಿಯಾಯಿತು ಎಂದು ಜೂಹಿ ಹೇಳಿದ್ದಾರೆ.