Don't Miss!
- Finance ಅಯೋಧ್ಯೆಯಲ್ಲಿ ಓಲಾ ಕ್ಯಾಬ್ ಸೇವೆ ಆರಂಭ
- News Priyanka Gandhi: ಚುನಾವಣೆಯಲ್ಲಿ ಸದ್ದು ಮಾಡುತ್ತಿದೆ ಮಂಗಳಸೂತ್ರ: ಮೋದಿಗೆ ಪ್ರಿಯಾಂಕಾ ತಿರುಗೇಟು
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗಾಡ್ ಫಾದರ್ ಗಾಲಿಕುರ್ಚಿ ಅಂಗವಿಕಲನಿಗೆ ದಾನ
ಬಹಳಷ್ಟು ವಿಕಲಚೇತನರು ಉಪಯೋಗಿಸುವ ವೀಲ್ಚೇರ್ಗಳಿಗೆ ಅದರ ಮೇಲೆ ಕುಳಿತವರೇ ತೋಳ್ಬಲ ಪ್ರಯೋಗಿಸಿ ಮುಂದೆ ಚಲಿಸುವಂತೆ ಮಾಡಬೇಕು. ಎಲ್ಲೆಡೆ ಹೆಚ್ಚು ಬಳಕೆಯಲ್ಲಿರುವ ವೀಲ್ಚೇರ್ಗಳು ಇಂಥವೇ.
ಮೋಟಾರು ಚಾಲಿತ ವೀಲ್ಚೇರ್ಗಳಿವೆಯಾದರೂ, ಅವು ಶ್ರೀಮಂತರಿಗೆ ಮಾತ್ರ ಖರೀದಿಸಲು ಸಾಧ್ಯ. ಅನೇಕರು ಅಂಥದ್ದನ್ನ ಇನ್ನೂ ಕಣ್ಣಿನಿಂದ ನೋಡಿ ಕೂಡಾ ಇಲ್ಲ. ಹಾಗಾಗಿ ಗಾಡ್ಫಾದರ್ನಲ್ಲಿ ಉಪ್ಪಿ ಉಪಯೋಗಿಸುವ ಆ ವೀಲ್ಛೇರ್ ಎಲ್ಲರ ಗಮನ ಸೆಳೆದಿತ್ತು. ವಿಕಲಚೇತನರಲ್ಲಿ ಕೆಲವರಾದರೂ ಅದರ ವಿಶೇಷತೆಯಿಂದಾಗಿ ಅದರ ಕಡೆ ಆಕರ್ಷಿತರಾಗಿದ್ದಿರಲಿಕ್ಕೆ ಸಾಕು.
ಕೆ. ಮಂಜು ಈಗೊಂದು ನಿರ್ಣಯಕ್ಕೆ ಬಂದಿದ್ದಾರೆ. ಅದೇನೆಂದರೆ ಗಾಡ್ಫಾದರ್ ಚಿತ್ರದಲ್ಲಿ ಉಪೇಂದ್ರ ತನ್ನ ಪಾತ್ರ ನಿರ್ವಹಣೆಗೆ ಬಳಸಿದ್ದ ಆ ಚೇರನ್ನು ಬಡ ವಿಕಲಚೇತನರೊಬ್ಬರಿಗೆ ದಾನ ಮಾಡುವುದು. ಇದೇ ಹದಿನೆಂಟನೇ ತಾರೀಖು ವಿಷ್ಣುವರ್ಧನ್ರ ಜನ್ಮದಿನಾಚರಣೆ.
ಮಂಜು ವಿಷ್ಣುವರ್ಧನ್ರ ಸಿನಿಮಾಗಳ ನಿರ್ಮಾಣ ಮಾಡುವ ಮೂಲಕವೇ ಕನ್ನಡ ಚಿತ್ರರಂಗದಲ್ಲಿ ನೆಲೆ ಕಂಡವರು. ವಿಷ್ಣುವರ್ಧನ್ ಬದುಕಿರುವ ತನಕವೂ ಅವರ ಹಿಂದೆ ಮುಂದೆ ಓಡಾಡುತ್ತಿದ್ದ ಬಂಟರಲ್ಲಿ ಮಂಜು ಕೂಡಾ ಒಬ್ಬರು. ಹೀಗಾಗಿ ವಿಷ್ಣುವರ್ಧನ್ ಜನ್ಮ ದಿನಾಚರಣೆಯಂದು ಅವರ ಸ್ಮಾರಕದ ಬಳಿ ಬರುವ ಯಾರೋ ಒಬ್ಬ ಅದೃಷ್ಟಶಾಲಿ ವಿಕಲಚೇತನ ಅಭಿಮಾನಿಗೆ ಈ ವೀಲ್ಚೇರನ್ನು ದಾನವಾಗಿ ಕೊಡುವುದು ಕೊಬ್ರಿ ಮಂಜು ಯೋಜನೆ.
ಅದೇ ದಿನ ಉಪೇಂದ್ರ ಹುಟ್ಟುಹಬ್ಬ ಕೂಡ ಹೌದಾಗಿರುವುದರಿಂದ ಈ ಇಬ್ಬರು ನಟರ ಹೆಸರಿನಲ್ಲಿ ಮಂಜು ಅವತ್ತು ಈ ಚೇರ್ ದಾನ ಮಾಡಲಿದ್ದಾರಂತೆ. ಮಾರಿದರೆ ಹತ್ತಿರತ್ತಿರ ಒಂದು ಲಕ್ಷಕ್ಕೆ ಮಾರಾಟವಾಗುತ್ತಿದ್ದ ಈ ಕುರ್ಚಿಯನ್ನು ಮಂಜು ಯಾರೋ ಒಬ್ಬ ವಿಕಲಚೇತನನಿಗೆ ವಿತರಿಸುತ್ತಿರುವುದು ಶ್ಲಾಘನೀಯ. [ಪರಭಾಷಾ ವಿರೋಧಿ ಮಂಜು ತಮಿಳು ಚಿತ್ರದ ಡಿಸ್ಟ್ರಿಬ್ಯೂಟರ್]