ಸುದೀಪ್ ಸಂಸ್ಕಾರಕ್ಕೆ ಶರಣು ಎಂದ ಕನ್ನಡ ಪರ ಹೋರಾಟಗಾರರು

ಡಬ್ಬಿಂಗ್ ಬೇಡವೇ ಬೇಡ ಎನ್ನುವ ಕಾಲವೊಂದಿತ್ತು. ಬಳಿಕ ಡಬ್ಬಿಂಗ್ ಬೇಕೋ, ಬೇಡ್ವೋ ಎಂಬ ಚರ್ಚೆ ಶುರು ಆಯ್ತು. ಡಬ್ಬಿಂಗ್ ಬಂದ್ರೆ ಕನ್ನಡ ಸಂಸ್ಕೃತಿ ಹಾಳಾಗುತ್ತೆ ಅಂತ ಅನೇಕರು ದನಿ ಎತ್ತಿದರು. ಡಬ್ಬಿಂಗ್ ನಿಂದ ಕನ್ನಡಕ್ಕೆ ಒಳಿತಾಗುತ್ತೆ ಅಂತ ಕೆಲವರು ವಾದ ಕೂಡ ಮಾಡಿದರು.

ಡಬ್ಬಿಂಗ್ ಪರ-ವಿರೋಧದ ಕುರಿತಾದ ಚರ್ಚೆ ಏನೇ ಇದ್ದರೂ, ಸದ್ಯ ಕನ್ನಡದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮಾತ್ರ ಡಬ್ಬಿಂಗ್ ಪರ ನಿಂತಿದ್ದಾರೆ. ಇತ್ತೀಚೆಗಷ್ಟೇ ಅವರು ನಟಿಸಿದ್ದ ತೆಲುಗು ಚಿತ್ರ 'ಸೈರಾ ನರಸಿಂಹ ರೆಡ್ಡಿ' ಕನ್ನಡದಲ್ಲಿ ಡಬ್ ಆಗಿ ತೆರೆಗೆ ಬಂದಿತ್ತು.

ವಿಶೇಷ ಅಂದ್ರೆ, ಕನ್ನಡಕ್ಕೆ ಡಬ್ ಆದ 'ಸೈರಾ ನರಸಿಂಹ ರೆಡ್ಡಿ' ಚಿತ್ರದಲ್ಲಿ ಸುದೀಪ್ ತಮ್ಮ ಪಾತ್ರಕ್ಕೆ ತಾವೇ ಡಬ್ ಮಾಡಿದ್ದರು. ಸುದೀಪ್ ರವರ ಈ ನಡೆಯನ್ನ ಅಭಿನಂದಿಸಲು ಕನ್ನಡ ಪರ ಹೋರಾಟಗಾರರು, ಕನ್ನಡ ಸಂಘಟನೆಗಳ ಪ್ರಮುಖರು ಕಿಚ್ಚನ ಮನೆಗೆ ಹೋಗಿದ್ದರು.

Kannada Activists lauds Kiccha Sudeep for supporting Dubbing

ಆಗ ಸುದೀಪ್ ಎಲ್ಲರಿಗೂ 'ಮಂಕುತಿಮ್ಮನ ಕಗ್ಗ' ಮತ್ತು ''ಪ್ರೀತಿಯಿಂದ ಕಿಚ್ಚ ಸುದೀಪ್'' ಎಂದು ಪ್ರಿಂಟ್ ಆಗಿರುವ ಲೇಖನಿಯನ್ನ ಉಡುಗೊರೆಯಾಗಿ ನೀಡಿ ಕಳುಹಿಸಿದ್ದಾರೆ. ಸುದೀಪ್ ರವರ ಈ ಸಂಸ್ಕಾರ-ಅಭಿರುಚಿಗೆ ಕಂಡು ಕನ್ನಡ ಪರ ಹೋರಾಟಗಾರರು ಶರಣಾಗಿದ್ದಾರೆ. ಅಂದ್ಹಾಗೆ ಸುದೀಪ್ ರವರ ಈ ನಡೆಗೆ ನೀವೇನಂತೀರಿ.?

More from Filmibeat

English summary
Kannada Activists lauds Kiccha Sudeep for supporting Dubbing.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X