Don't Miss!
- News ಚಿತ್ರದುರ್ಗ: ಬೆಂಕಿ ಹಚ್ಚಿಕೊಂಡು ಇಬ್ಬರು ಮಕ್ಕಳ ಜೊತೆ ತಾಯಿ ಆತ್ಮಹತ್ಯೆ
- Lifestyle ಕೊನೆಗೂ ಬೆಂಗಳೂರಿಗೆ ಮಳೆ ಭಾಗ್ಯ..! ಹವಾಮಾನ ಇಲಾಖೆ ಸೂಚಿಸಿದ ದಿನಾಂಕವಿದು..!
- Automobiles Self-Driving Car: ಭಾರತೀಯರು ಅಸಮಾನ್ಯರು... ಬೊಲೆರೋದಲ್ಲಿ ಭವಿಷ್ಯ ಬದಲಿಸುವ ತಂತ್ರಜ್ಞಾನ!
- Sports Viral look: IPL 2024 ಆರಂಭಕ್ಕೂ ಮುನ್ನ ಸಾಮಾಜಿಕ ತಾಣದಲ್ಲಿ ಸಂಚಲನ ಮೂಡಿಸಿರುವ ವಿರಾಟ್ ಕೊಹ್ಲಿ Trendy look
- Technology Lava: ಭಾರತದಲ್ಲಿ ಸುನಾಮಿ ಎಬ್ಬಿಸಲಿದೆ ಲಾವಾ O2! ನಿರೀಕ್ಷಿತ ಫೀಚರ್ಸ್ ಬಗ್ಗೆ ತಿಳಿಯಿರಿ
- Finance ಬೆಂಗಳೂರಿನ ಮೇಘನಾ ಫುಡ್ಸ್ ಹೋಟೆಲ್ ಮಳಿಗೆಗಳ ಮೇಲೆ ಐಟಿ ದಾಳಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸುದೀಪ್ ಸಂಸ್ಕಾರಕ್ಕೆ ಶರಣು ಎಂದ ಕನ್ನಡ ಪರ ಹೋರಾಟಗಾರರು
ಡಬ್ಬಿಂಗ್ ಬೇಡವೇ ಬೇಡ ಎನ್ನುವ ಕಾಲವೊಂದಿತ್ತು. ಬಳಿಕ ಡಬ್ಬಿಂಗ್ ಬೇಕೋ, ಬೇಡ್ವೋ ಎಂಬ ಚರ್ಚೆ ಶುರು ಆಯ್ತು. ಡಬ್ಬಿಂಗ್ ಬಂದ್ರೆ ಕನ್ನಡ ಸಂಸ್ಕೃತಿ ಹಾಳಾಗುತ್ತೆ ಅಂತ ಅನೇಕರು ದನಿ ಎತ್ತಿದರು. ಡಬ್ಬಿಂಗ್ ನಿಂದ ಕನ್ನಡಕ್ಕೆ ಒಳಿತಾಗುತ್ತೆ ಅಂತ ಕೆಲವರು ವಾದ ಕೂಡ ಮಾಡಿದರು.
ಡಬ್ಬಿಂಗ್ ಪರ-ವಿರೋಧದ ಕುರಿತಾದ ಚರ್ಚೆ ಏನೇ ಇದ್ದರೂ, ಸದ್ಯ ಕನ್ನಡದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮಾತ್ರ ಡಬ್ಬಿಂಗ್ ಪರ ನಿಂತಿದ್ದಾರೆ. ಇತ್ತೀಚೆಗಷ್ಟೇ ಅವರು ನಟಿಸಿದ್ದ ತೆಲುಗು ಚಿತ್ರ 'ಸೈರಾ ನರಸಿಂಹ ರೆಡ್ಡಿ' ಕನ್ನಡದಲ್ಲಿ ಡಬ್ ಆಗಿ ತೆರೆಗೆ ಬಂದಿತ್ತು.
ಅಂಬಿ ಬಯೋಪಿಕ್ ನಲ್ಲಿ ಸುದೀಪ್: ಕಿಚ್ಚ ಹೇಳಿದ್ದೇನು?
ವಿಶೇಷ ಅಂದ್ರೆ, ಕನ್ನಡಕ್ಕೆ ಡಬ್ ಆದ 'ಸೈರಾ ನರಸಿಂಹ ರೆಡ್ಡಿ' ಚಿತ್ರದಲ್ಲಿ ಸುದೀಪ್ ತಮ್ಮ ಪಾತ್ರಕ್ಕೆ ತಾವೇ ಡಬ್ ಮಾಡಿದ್ದರು. ಸುದೀಪ್ ರವರ ಈ ನಡೆಯನ್ನ ಅಭಿನಂದಿಸಲು ಕನ್ನಡ ಪರ ಹೋರಾಟಗಾರರು, ಕನ್ನಡ ಸಂಘಟನೆಗಳ ಪ್ರಮುಖರು ಕಿಚ್ಚನ ಮನೆಗೆ ಹೋಗಿದ್ದರು.
ಕೆಜಿಎಫ್, ಬಾಹುಬಲಿ ಗಳಿಕೆ ಬಗ್ಗೆ ಆಸಕ್ತಿಕರ ವಿಷಯ ಬಿಚ್ಚಿಟ್ಟ ಸುದೀಪ್
ಆಗ ಸುದೀಪ್ ಎಲ್ಲರಿಗೂ 'ಮಂಕುತಿಮ್ಮನ ಕಗ್ಗ' ಮತ್ತು ''ಪ್ರೀತಿಯಿಂದ ಕಿಚ್ಚ ಸುದೀಪ್'' ಎಂದು ಪ್ರಿಂಟ್ ಆಗಿರುವ ಲೇಖನಿಯನ್ನ ಉಡುಗೊರೆಯಾಗಿ ನೀಡಿ ಕಳುಹಿಸಿದ್ದಾರೆ. ಸುದೀಪ್ ರವರ ಈ ಸಂಸ್ಕಾರ-ಅಭಿರುಚಿಗೆ ಕಂಡು ಕನ್ನಡ ಪರ ಹೋರಾಟಗಾರರು ಶರಣಾಗಿದ್ದಾರೆ. ಅಂದ್ಹಾಗೆ ಸುದೀಪ್ ರವರ ಈ ನಡೆಗೆ ನೀವೇನಂತೀರಿ.?