Don't Miss!
- Lifestyle ಸೌರಮಂಡಲದಲ್ಲಿದೆ 9ನೇ ಗ್ರಹ..! ಯಾವುದದು..? ಎಲ್ಲಿದೆ..?
- News Lok Sabha Election 2024: ಈ 6 ಜಿಲ್ಲೆಗಳಲ್ಲಿ 0% ಮತದಾನ-ಎಲ್ಲಿ ಹಾಗೂ ಕಾರಣ ಏನು?
- Automobiles ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮೇರು ನಟ ಅನಂತ್ ನಾಗ್ ಹುಟ್ಟುಹಬ್ಬ ಸಂಭ್ರಮ
ಹೆಚ್ಚಿನ ಓದಿಗೆ ಮುಂಬೈಗೆ ಪ್ರಯಾಣ ಬೆಳೆಸಿದ ಅನಂತ್ ನಾಗ್, ಮರಾಠಿ ರಂಗಭೂಮಿಯಲ್ಲಿ ಎಂಟು ವರ್ಷಗಳ ಕಾಲ ನಟಸಿದವರು. 'ಶ್ಯಾಂ ಬೆನೆಗಲ್' ಅವರ 'ಅಂಕುರ್' ಚಿತ್ರದಿಂದ ಚಿತ್ರರಂಗಕ್ಕೆ ಬಂದ ಅನಂತ್ ನಾಗ್, ನಂತರ 'ನಿಶಾಂತ್', 'ಕಲಿಯುಗ್', 'ಗೆಹ್ರಾಯಿ', 'ಭೂಮಿಕಾ', 'ಮಂಗಳಸೂತ್ರ್'. 'ಯುವ', 'ಕೊಂಡುರಾ', 'ಉತ್ಸವ್' ಹೀಗೆ ಹಲವಾರು ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ. ಕೆಲವು ಪಾತ್ರಗಳಿಗೆ ಅನಂತ್ ನಾಗ್ ಬಿಟ್ಟರೆ ಬೇರೊಬ್ಬರು ಸಾಧ್ಯವೇ ಇಲ್ಲ ಎಂಬ ಮಾತು ಎಲ್ಲೆಡೆ ಜನಜನಿತ.
1973ರಲ್ಲಿ ಪಿವಿ ನಂಜರಾಜ ಅರಸ್ ಅವರ 'ಸಂಕಲ್ಪ' ಚಿತ್ರದ ಮೂಲಕ ಅನಂತ ನಾಗ್ ಕನ್ನಡ ಚಿತ್ರರಂಗದಲ್ಲಿ ನಟಿಸಲು ಪ್ರಾರಂಭಿಸಿದರು. 1975ರಲ್ಲಿ ಮೂಡಿಬಂದ ಜಿ.ವಿ. ಅಯ್ಯರ್ ನಿರ್ದೇಶನದ 'ಹಂಸಗೀತೆ' ಚಿತ್ರದ ಮೂಲಕ ಅನಂತ್ ಕನ್ನಡದ ಅಮೂಲ್ಯ ಆಸ್ತಿಯಾಗಿ ಉಳಿದುಕೊಂಡರು. ನಂತರ ಬಂದ ದೊರೈ ಭಗವಾನ್ ನಿರ್ದೇಶನದ 'ಬಯಲುದಾರಿ' ಚಿತ್ರ ಅನಂತ್ ನಾಗ್ ಅವರನ್ನು ಕನ್ನಡದ ಮೇರು ನಟರನ್ನಾಗಿ ಮಾಡಿತು.
ಅಲ್ಲಿಂದ ಮುಂದೆ ಅನಂತ್ ನಾಗ್ ಎನ್ನುವ ಹೆಸರು ಕರ್ನಾಟಕದ ಮನೆಮನೆಗಳಲ್ಲೂ, ಕನ್ನಡಿದರ ಮನಮನದಲ್ಲೂ ಪ್ರತಿಷ್ಠಾಪನೆಗೊಂಡಿತು. ಯಾವುದೇ ಫ್ರೇಂಗೂ ನಿಲುಕದ ಅನಂತ್ ನಾಗ್ ಕಾಲ, ದೇಶ ಹಾಗೂ ಭಾಷೆಗಳನ್ನು ಮೀರಿದ ಕಲಾವಿದರಾಗಿ ಬೆಳೆದರು. 'ಸಂಕಲ್ಪ'ದಿಂದ ಪ್ರಾರಂಭವಾದ ಅವರ ಕನ್ನಡ ಚಿತ್ರಗಳ ಯಾತ್ರೆ ಇಂದಿಗೂ ಅಮೋಘವಾಗಿ ಮುಂದುವರಿದಿದೆ.
ಅನಂತ್ ಚಿತ್ರಗಳನ್ನು ಎಷ್ಟೆಂದು ಹೆಸರಿಸುವುದು, ಹೇಗೆಂದು ಹೇಳುವುದು? 'ಹಂಸಗೀತೆ', 'ಕನ್ನೇಶ್ವರ ರಾಮ', 'ಬರ', 'ಅವಸ್ಥೆ', 'ಉದ್ಭವ', 'ಮಿಂಚಿನ ಓಟ', 'ಆಕ್ಸಿಡೆಂಟ್', 'ಬೆಳದಿಂಗಳ ಬಾಲೆ', 'ಮತದಾನ', 'ಮೌನಿ', 'ಅನುರೂಪ', 'ರಾಮಾಪುರದ ರಾವಣ', 'ಸಿಂಹಾಸನ', 'ಅನ್ವೇಷಣೆ', 'ಮಾಲ್ಗುಡಿ ಡೇಸ್' ಮುಂತಾದ ಚಿತ್ರಗಳ ಜೊತೆಗೆ 'ನಾ ನಿನ್ನ ಬಿಡಲಾರೆ" ಯಂತಹ ವಿಭಿನ್ನ ಪಾತ್ರಗಳಿರುವ ಚಿತ್ರಗಳಿಗೂ ಅನಂತ್ ಜೀವ ತುಂಬಿದ್ದಾರೆ.
ಅನಂತ್
ನಾಗ್
ಹಾಗೂ
ಲಕ್ಷ್ಮೀ
ಜೋಡಿಯಂತೂ
ಕನ್ನಡದ
ಜನಪ್ರಿಯ
ಜೋಡಿಗಳಲ್ಲೊಂದು.
ಬೆಂಕಿಯ
ಬಲೆ',
'ಚಂದನದ
ಗೊಂಬೆ',
'ಇಬ್ಬನಿ
ಕರಗಿತು',
ಮುದುಡಿದ
ತಾವರೆ
ಅರಳಿತು',
'ಮಕ್ಕಳಿರಲವ್ವ
ಮನೆತುಂಬ',
'ನೋಡಿ
ಸ್ವಾಮಿ
ನಾವಿರೋದು
ಹೀಗೆ',
'ನಾ
ನಿನ್ನ
ಬಿಡಲಾರೆ',
'ಧೈರ್ಯಲಕ್ಷ್ಮಿ',
'ಬಿಡುಗಡೆಯ
ಬೇಡಿ'
ಮುಂತಾದ
ಚಿತ್ರಗಳಲ್ಲಿ
ಈ
ಜೋಡಿ
ಮಾಡಿದ
ಮೋಡಿಯನ್ನು
ಯಾರೂ
ಎಂದಿಗೂ
ಮರೆಯಲಾರರು.
ಮುಂದಿನ
ಪುಟ
ನೋಡಿ...