Don't Miss!
- News ಕ್ವಿಟ್ ಎನ್ಡಿಎ ಮತ್ತು ಸೇವ್ ಇಂಡಿಯಾ: ಪ್ರೊ. ಮಹೇಶ್ಚಂದ್ರಗುರು
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Lifestyle ನೀವು ಸಹ ಈ ಶರ್ಬತ್ನ ರುಚಿ ಸವಿದಿದ್ದೀರಾ..? ಮರೆಯಾಯ್ತು ಈ ಹಳೆಯ ನೆನಪು
- Sports LSG vs CSK IPL 2024: ಲಕ್ನೋ vs ಚೆನ್ನೈ ಮಹಾಕದನ; ಟಾಸ್ ವರದಿ, ಆಡುವ 11ರ ಬಳಗ
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟ ಅನಿಲ್ ಕುಮಾರ್ ಸಾವಿಗೆ ಯಾರು ಕಾರಣ?
ಆದರೆ ಅವರ ತಂದೆ ಬಲರಾಮ್ ಅವರು ಹೇಳುವುದೇನೆಂದರೆ, ತನ್ನ ಮಗನ ಸಾವಿಗೆ ರಸ್ತೆಯಲ್ಲಿ ಬಿದ್ದಿದ್ದ ಕೇಬಲ್ ವೈರ್ ಕಾರಣ ಎನ್ನುತ್ತಾರೆ. ಈ ಕೇಬಲ್ ವೈರ್ ಚಕ್ರಕ್ಕೆ ಸಿಲುಕಿ ದ್ವಿಚಕ್ರ ವಾಹನ ಮರಕ್ಕೆ ಡಿಕ್ಕಿ ಹೊಡೆದಿದೆ. ಹೊಡೆದ ರಭಸಕ್ಕೆ ಅನಿಲ್ ತೀವ್ರವಾಗಿ ಗಾಯಗೊಂಡಿದ್ದಾನೆ. ಆಸ್ಪತ್ರೆ ಸೇರಿಸಿದರೂ ಜೀವ ಉಳಿಸಲು ಸಾಧ್ಯವಾಗಿಲ್ಲ.
ಸುಮಾರು ರು.28 ಲಕ್ಷ ಬೆಲೆ ಬಾಳುವ ಬಿಎಂಡಬ್ಲ್ಯು ಬೈಕ್ ಚಾಲನೆ ಮಾಡಬೇಕಾದರೆ ವಿಶೇಷ ಹೆಲ್ಮೆಟ್, ಶೂಸ್ ಹಾಗೂ ಜಾಕೆಟ್ ನೀಡಲಾಗಿರುತ್ತದೆ. ಆದರೆ ಅನಿಲ್ ಇದ್ಯಾವುದನ್ನೂ ಧರಿಸಿರಲಿಲ್ಲ ಎನ್ನಲಾಗಿದೆ. ಅಂದಹಾಗೆ ಅನಿಲ್ ಅವರು 'ಶಿವಾನಿ' ಎಂಬ ಚಿತ್ರದಲ್ಲಿ ಅಭಿನಯಿಸಿದ್ದರು.
ಮಂಗಳವಾರ (ಅ.1) ತಡರಾತ್ರಿ ಕೆ.ಆರ್.ಪುರಂನಿಂದ ಹಿಂತಿರುಗುತ್ತಿರಬೇಕಾದರೆ ಮಲ್ಲೇಶ್ವರಂ 17 ಕ್ರಾಸ್ ಬಳಿ ಅಪಘಾತಕ್ಕೀಡಾಗಿದ್ದಾರೆ. ನವರತ್ನ ಅಪಾರ್ಟ್ ಮೆಂಟ್ ಬಳಿ ಫುಟ್ ಪಾತ್ ಗೆ ಹೊಡೆದು ಮರಕ್ಕೆ ಅಪ್ಪಳಿಸಿದೆ ಬೈಕ್. ಮಲ್ಲೇಶ್ವರಂ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶ್ರೀಮಂತ ಕುಟುಂಬದ ಹಿನ್ನೆಲೆ ಹೊಂದಿದ್ದ ಈ ನಟ ಸ್ಯಾಂಡಲ್ ವುಡ್ ನಲ್ಲಿ ಬೆಳೆಯುವ ಕನಸು ಕಂಡಿದ್ದ. ಆದರೆ ತಂದೆತಾಯಿ ಇಷ್ಟೆಲ್ಲಾ ಬೆಲೆ ಬಾಳುವ ವಾಹನ ಕೊಡಿಸಿದ್ದೇ ತಪ್ಪಾಯಿತಾ? ಅತಿವೇಗವೇ ಸಾವಿಗೆ ಕಾರಣವಾ? ಸುರಕ್ಷತಾ ಸಾಧನಗಳನ್ನು ಬಳಸದೆ ಇದ್ದದ್ದು ಕಾರಣವೇ? ಈ ರೀತಿಯ ಪ್ರಶ್ನೆಗಳು ಸದ್ಯಕ್ಕೆ ಪ್ರಜ್ಞಾವಂತರನ್ನು ಕಾಡುತ್ತಿವೆ.