Don't Miss!
- News
ಫೆಬ್ರವರಿ 2023ರ ಮಾಸಭವಿಷ್ಯ: ಸಂಕ್ರಮಣದ ನಂತರದ ಫೆಬ್ರವರಿ ತಿಂಗಳಿನಲ್ಲಿ ಯಾವೆಲ್ಲ ರಾಶಿಗಳಿಗೆ ಶುಭವಾಗಲಿದೆ?
- Sports
ಆಕ್ಯುಪ್ರೆಶರ್ ಚಿಕಿತ್ಸೆ ಪಡೆಯುತ್ತಿರುವ ಚಿತ್ರವನ್ನು ಹಂಚಿಕೊಂಡ ಶ್ರೇಯಸ್ ಅಯ್ಯರ್
- Technology
ಅತಿ ಕಡಿಮೆ ಬೆಲೆಯಲ್ಲಿ ಹೊಸ ಸ್ಮಾರ್ಟ್ವಾಚ್ ಪರಿಚಯಿಸಿದ ಫೈರ್ಬೋಲ್ಟ್ !
- Lifestyle
ನಿಮ್ಮ ಗಂಡ 'ಅಮ್ಮನ ಮಗ'ವಾಗಿರುವುದರಿಂದ ತುಂಬಾನೇ ಸಮಸ್ಯೆ ಆಗುತ್ತಿದೆಯೇ?
- Finance
ಆಧಾರ್ ಕಾರ್ಡ್ ಸುರಕ್ಷತೆಗಾಗಿ ಯುಐಡಿಎಐ ನೂತನ ನಿಯಮ ತಿಳಿಯಿರಿ!
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಅಲೆದಿಲ್ಲಾ, ನಿರ್ಮಾಪಕರ ಕಾಲಿಗೆ ಬಿದ್ದು ಪಾತ್ರ ಸಂಪಾದಿಸಿದವರು ನಾವು'
ಅದೊಂದು ಸಮಯವಿತ್ತು....ಸಿನಿಮಾದಲ್ಲಿ ಅವಕಾಶ ಬೇಕು ಅಂದ್ರೆ ತಿಂಗಳುಗಳ ಕಾಲ, ವರ್ಷಗಳ ಕಾಲ ನಿರ್ದೇಶಕ-ನಿರ್ಮಾಪಕರ ಹಿಂದೆ ಅಲೆದಾಡಿ, ಕಷ್ಟಪಟ್ಟು ಒಂದು ಸಣ್ಣ ಪಾತ್ರ ಗಿಟ್ಟಿಸಿಕೊಳ್ಳಬೇಕಿತ್ತು.
Recommended Video
ಹೀಗೆ ಕಷ್ಟಪಟ್ಟು ಅವಕಾಶಗಳನ್ನು ಪಡೆದುಕೊಂಡು ಬೆಳೆದ ಬಹಳ ಜನರು ಕನ್ನಡ ಚಿತ್ರರಂಗದಲ್ಲಿದ್ದಾರೆ. ಈ ಪೈಕಿ ನಟ ಜಗ್ಗೇಶ್, ದೇವರಾಜ್, ಅವಿನಾಶ್ ಸಹ ಒಬ್ಬರು ಎನ್ನುವುದರಲ್ಲಿ ಎರಡನೇ ಮಾತಿಲ್ಲ. ತಮ್ಮ ಹಳೆಯ ದಿನಗಳ ಕುರಿತು, ತಾವು ಪಾತ್ರಕ್ಕಾಗಿ, ಸಿನಿಮಾಗಾಗಿ ಅಲೆದಾಡಿದ ದಿನಗಳ ಕುರಿತು ಜಗ್ಗೇಶ್ ಅನೇಕ ಸಲ ಹೇಳಿದ್ದಾರೆ. ಇದೀಗ, ದೇವರಾಜ್ ಅವರ ಹುಟ್ಟುಹಬ್ಬದ ದಿನ ತಮ್ಮ ಸಹಕಲಾವಿದನಿಗೆ ಶುಭಕೋರಿದ್ದಾರೆ ಜಗ್ಗೇಶ್. ಮುಂದೆ ಓದಿ...

ಗೆಳೆಯನಿಗೆ ಶುಭಕೋರಿದ ಜಗ್ಗೇಶ್
ಹಿರಿಯ ನಟ ದೇವರಾಜ್ ಅವರಿಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಜಗ್ಗೇಶ್ ಮತ್ತಿ ದೇವರಾಜ್ ಒಟ್ಟಿಗಿರುವ ಫೋಟೋ ಹಂಚಿಕೊಂಡಿರುವ ಜಗ್ಗೇಶ್ ಫ್ಯಾನ್ಸ್ ಕ್ಲಬ್ ಖಾತೆ ಡೈನಾಮಿಕ್ ಸ್ಟಾರ್ಗೆ ಜನುಮದಿನಕ್ಕೆ ವಿಶ್ ಮಾಡಿದೆ. ಇದಕ್ಕೆ ಕಾಮೆಂಟ್ ಮಾಡಿರುವ ಜಗ್ಗೇಶ್ ''ಓಂಕಾರದಿಂದ ಜೊತೆಯಲ್ಲಿ ಕೆ.ವಿ.ರಾಜು ರವರ ಗರಡಿಯಲ್ಲಿ ಬೆಳೆದವರು..!! ಶುಭಮಸ್ತು.........'' ಎಂದಿದ್ದಾರೆ.
'ಕಲಾವಿದರನ್ನು
ಚಪ್ಪಾಳೆಗಾಗಿ
2
ಗಂಟೆ
ಬಳಸಿ
ಆನಂದಿಸಿ
ಮರೆತುಬಿಡಿ'-
ಜಗ್ಗೇಶ್

ಕಾಲಿಗೆ ಬಿದ್ದು ಪಾತ್ರ ಸಂಪಾದಿಸಿದವರು
''ಕಷ್ಟ ಪಟ್ಟು ಒಂದೊಂದು ಪಾತ್ರಕ್ಕೂ ಅಲೆದರು... ಸಿಕ್ಕಾಗ ತಮ್ಮ ಟ್ಯಾಲೆಂಟನ್ನು ಅಡವಿಟ್ಟು..ಪರದೆ ಮೇಲೆ ಮಿಂಚಿದರು... ಜಗ್ಗೇಶ್, ದೇವರಾಜ್ , ಅವಿನಾಶ್ ಇನ್ನೂ ಅನೇಕ ಪ್ರತಿಭಾವಂತರು ಬೆಳೆದು ಬಂದ ದಾರಿ ಇಂದಿನ ಪೀಳಿಗೆಗೆ ಮಾದರಿಯಾಗಲಿ'' ಎಂದು ವ್ಯಕ್ತಿಯೊಬ್ಬ ಜಗ್ಗೇಶ್-ದೇವರಾಜ್ ಒಟ್ಟಿಗೆ ಇರುವ ಫೋಟೋಗೆ ಕಾಮೆಂಟ್ ಮಾಡಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ಜಗ್ಗೇಶ್ ''ಅಲೆದಿಲ್ಲಾ, ನಿರ್ಮಾಪಕರ ಕಾಲಿಗೆ ಬಿದ್ದು ಪಾತ್ರ ಸಂಪಾದಿಸಿದವರು ನಾವು'' ಎಂದು ಕಷ್ಟದ ದಿನ ನೆನಪಿಸಿಕೊಂಡಿದ್ದಾರೆ.

ಪ್ರೀತಿಗಾಗಿ ಬದುಕಿದ ತಲೆಮಾರು
''ತಿನ್ನಲು ಅನ್ನವಿಲ್ಲದಿದ್ದರು ಮುಖದಲ್ಲಿ ನಗು ಮಾಸುತ್ತಿರಲಿಲ್ಲಾ! ಗೆದ್ದಮೇಲೆ ಯಶಸ್ಸು ತಲೆಗೆ ಏರಲಿಲ್ಲಾ! ಸ್ವಾಭಿಮಾನಕ್ಕೆ ಪಡೆದದ್ದು ಏನು ಬೇಕಾದರು ಬಿಸಾಕಿ ಗೌರವದಿಂದ ಬದುಕಿದವರು! ಬದುಕನ್ನ ಪ್ರೀತಿಸಿ ಬೆಳೆದವರು! ಪ್ರೀತಿಗಾಗಿ ಬದುಕಿದ ತಲೆಮಾರು! ಸ್ವಲ್ಪ ಸಿಟ್ಟು ಜಾಸ್ತಿ.!'' ಎಂದು ಹೆಮ್ಮೆಯ ಮಾತುಗಳನ್ನಾಡಿದ್ದಾರೆ.
ಪಂಡರೀಬಾಯಿ
ಜನ್ಮದಿನದ
ಸವಿನೆನಪು:
'ಕಲಬೆರಕೆ
ಚಿನ್ನಗಳ
ಮುಂದೆ
24
ಕ್ಯಾರೆಟ್
ಚಿನ್ನ
ಮಂಕಾಗಿದೆ'
ಎಂದ
ಜಗ್ಗೇಶ್

ರಾಬರ್ಟ್ ಚಿತ್ರತಂಡದಿಂದ ಶುಭಾಶಯ
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಚಿತ್ರತಂಡ ಡೈನಾಮಿಕ್ ಹೀರೋ ದೇವರಾಜ್ ಹುಟ್ಟುಹಬ್ಬಕ್ಕೆ ಶುಭಕೋರಿದೆ. ನಟ ದರ್ಶನ್ ಸಹ ದೇವರಾಜ್ ಅವರಿಗೆ ಶುಭಕೋರಿದ್ದಾರೆ.