Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಮ್ಯಾ ಬೇಡ ಅಂದಿದ್ದು ಹರಿಪ್ರಿಯಾ ಪಾಲಾಯ್ತು.!
ಲಕ್ಕಿ ಸ್ಟಾರ್ ರಮ್ಯಾ ಮತ್ತು ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಕಾಣಿಸಿಕೊಂಡಿರುವ 'ದಿಲ್ KA ರಾಜ' ಸಿನಿಮಾದ ಶೂಟಿಂಗ್ ಅರ್ಧಕ್ಕೆ ನಿಂತಿರುವ ವಿಚಾರ ನಿಮಗೆ ಗೊತ್ತೇ ಇದೆ. ರಮ್ಯಾ ಅವರ ಅನುಪಸ್ಥಿತಿಯಿಂದ ಈ ಸಿನಿಮಾದ ಶೂಟಿಂಗ್ ಮುಂದಕ್ಕೆ ಹೋಗದೇ ನಿಂತ ನೀರಾಗಿದೆ.
ಈ ಮೊದಲು ನಿರ್ದೇಶಕ ವಿಜಯ್ ಪ್ರಸಾದ್ ಅವರ 'ನೀರ್ ದೋಸೆ' ಸಿನಿಮಾದ ಕಥೆ ಕೂಡ ರಮ್ಯಾ ಅವರಿಂದಾಗಿ ಹೀಗೆ ಅರ್ಧಕ್ಕೆ ನಿಂತಿತ್ತು. ತದನಂತರ ಅವರ ಜಾಗಕ್ಕೆ 'ಉಗ್ರಂ' ಚಿತ್ರದ ಖ್ಯಾತಿಯ ನಟಿ ಹರಿಪ್ರಿಯಾ ಅವರನ್ನು ಕರೆತಂದು ಇದೀಗ ಶೂಟಿಂಗ್ ಕಂಪ್ಲೀಟ್ ಮಾಡಿದ್ದು ಹಳೇ ವಿಷಯ.['ದಿಲ್ ಕಾ ರಾಜಾ'ನಿಗೆ ಮರುಜನ್ಮ ಕೊಡ್ತಾರಾ ರಮ್ಯಾ?]
ಅಂದಹಾಗೆ ಈಗ 'ದಿಲ್ KA ರಾಜ' ಚಿತ್ರತಂಡ ಕೂಡ 'ನೀರ್ ದೋಸೆ' ಚಿತ್ರತಂಡ ಮಾಡಿದ ಕೆಲಸವನ್ನು ಮಾಡುತ್ತಿದೆ. ಹೌದು 'ದಿಲ್ KA ರಾಜಾ' ಚಿತ್ರಕ್ಕೆ ರಮ್ಯಾ ಅವರ ಜಾಗಕ್ಕೆ 'ನೀರ್ ದೋಸೆ' ಬೆಡಗಿ ಹರಿಪ್ರಿಯಾ ಅವರನ್ನು ಕರೆತರಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.[ಸಿಗರೇಟ್ ಸೇದಿ ಆರೋಗ್ಯ ಕೆಡಿಸಿಕೊಂಡ 'ನೀರ್ ದೋಸೆ' ಬೆಡಗಿ]
ಇದಕ್ಕೆ ರಮ್ಯಾ ಅವರೂ ಒಪ್ಪಿಕೊಂಡಿದ್ದಾರಂತೆ, ಇತ್ತೀಚೆಗೆ 'ದಿಲ್ KA ರಾಜಾ' ಚಿತ್ರದ ನಿರ್ದೇಶಕ ಸೋಮನಾಥ್ ಪಾಟೀಲ್ ಅವರು ರಮ್ಯಾ ಅವರನ್ನು ಸಂಪರ್ಕಿಸಿ ಬೇರೊಬ್ಬ ನಾಯಕಿಯನ್ನು ಹಾಕಿಕೊಂಡು ಸಿನಿಮಾ ಮುಂದುವರಿಸುವುದಾಗಿ ಹೇಳಿದ್ದು, ಅದಕ್ಕೆ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರು ಹಸಿರು ನಿಶಾನೆ ತೋರಿದ್ದಾರಂತೆ.[ಮತ್ತೆ ಬಂದ್ರು ರಮ್ಯಾ ನಿಟ್ಟುಸಿರು ಬಿಟ್ಟ 'ದಿಲ್ KA ರಾಜಾ']
ಸದ್ಯಕ್ಕೆ ರಮ್ಯಾ ಅವರಿಗೆ ಸಿನಿಮಾಗಳಲ್ಲಿ ನಟಿಸುವ ಮನಸ್ಸಿಲ್ಲ ಅನ್ನೋದು ಒಂದು ಕಡೆಯಾದರೆ, ಇನ್ನೊಂದೆಡೆ ರಾಜಕೀಯ ಕೆಲಸಗಳಿಂದಾಗಿ ಬಿಡುವು ಮಾಡಿಕೊಳ್ಳಲಾಗುತ್ತಿಲ್ಲ ಎಂದು ಅರ್ಧದಲ್ಲಿ ನಿಂತಿರುವ ಚಿತ್ರಕ್ಕೆ ಬೇರೆ ನಾಯಕಿಯನ್ನು ಕರೆತರಲು ರಮ್ಯಾ ಸೂಚನೆ ನೀಡಿದ್ದಾರೆ.
ಇನ್ನು ಹರಿಪ್ರಿಯಾ ಅವರು ಪ್ರಜ್ವಲ್ ದೇವರಾಜ್ ಅವರ ಜೊತೆ ಇದಕ್ಕೂ ಮೊದಲು 'ಸಾಗರ್' ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದರು.ಇದೀಗ ಮತ್ತೆ 'ದಿಲ್ KA ರಾಜಾ' ಚಿತ್ರದಲ್ಲಿ ಒಂದಾಗುತ್ತಿದ್ದಾರೆ.[ಕೂದಲೆಳೆಯ ಅಂತರದಲ್ಲಿ ಪಾರಾದ ನಟಿ ಹರಿಪ್ರಿಯಾ]
ಅಂತೂ ಇಂತೂ 'ನೀರ್ ದೋಸೆ'ಯನ್ನು ಯಶಸ್ವಿಯಾಗಿ ಮುಗಿಸಿಕೊಟ್ಟ ಹರಿಪ್ರಿಯಾ ಅವರು ಇದೀಗ 'ದಿಲ್ KA ರಾಜಾ' ಸಿನಿಮಾವನ್ನು ಮುಗಿಸಿಕೊಡಲಿದ್ದಾರಂತೆ, ಒಟ್ನಲ್ಲಿ ಹೇಳಬೇಕೆಂದರೆ, ಸದ್ಯಕ್ಕೆ ಗಾಂಧಿನಗರದಲ್ಲಿ ಹರಿಪ್ರಿಯಾ ಅವರು ಎಲ್ಲರ ಆಪತ್ಕಾಲದ ಬಂಧು ಆಗಿದ್ದಾರೆ.