ಕನ್ನಡ ಚಿತ್ರಕ್ಕೆ ಕೈ ಎತ್ತಿದ ನಟಿ ಸಂಯುಕ್ತ ಬಗ್ಗೆ ಫೇಸ್ ಬುಕ್ ನಲ್ಲಿ ಲೇವಡಿ
ಕಾಲಿವುಡ್ ನಲ್ಲಿ ನಟ ಪ್ರಭುದೇವ ಜೊತೆ ಹೆಜ್ಜೆ ಹಾಕುವ ಚಾನ್ಸ್ ಸಿಕ್ತು ಎಂಬ ಕಾರಣಕ್ಕೆ ಈಗಾಗಲೇ ಪಡೆದುಕೊಂಡಿದ್ದ ಅಡ್ವಾನ್ಸ್ ಹಣವನ್ನು ವಾಪಸ್ ಮಾಡಿ ಕನ್ನಡದ 'ವಾಸು... ನಾನ್ ಪಕ್ಕಾ ಕಮರ್ಶಿಯಲ್' ಸಿನಿಮಾ ಮಾಡಲ್ಲ ಎಂದು ಕೈಎತ್ತಿರುವ ನಟಿ ಸಂಯುಕ್ತ ಇದೀಗ ಸಾಮಾಜಿಕ ಜಾಲತಾಣಗಳ ಟ್ರೋಲ್ ಪೇಜ್ ಗಳಿಗೆ ಆಹಾರವಾಗಿದ್ದಾರೆ.['ಕಿರಿಕ್' ಹುಡುಗಿ ಔಟ್, ಸಂಯುಕ್ತ ಜಾಗಕ್ಕೆ ಬಂದಳು ಹೊಸ ಚೆಲುವೆ!]
ತಮಿಳು ಸಿನಿಮಾ ಆಸೆಗಾಗಿ ಕನ್ನಡ ಚಿತ್ರ ಕೈಬಿಟ್ಟ ನಟಿ ಸಂಯುಕ್ತ ಹೆಗಡೆ ಬಗ್ಗೆ ಫೇಸ್ ಬುಕ್ ನಲ್ಲಿ ಗೇಲಿ ಮಾಡಲಾಗುತ್ತಿದೆ. ಅಂತಹ ಕೆಲವು ಟ್ರೋಲ್ ಗಳು ಇಲ್ಲಿವೆ ನೋಡಿ....

ತಮಿಳಿನವರು ಒಪ್ಪಿಕೊಳ್ತಾರಾ ಅನ್ನೋದೇ ಡೌಟು.!
ಕಾಲಿವುಡ್ ನಲ್ಲಿ ನಟಿ ಸಂಯುಕ್ತ ನೆಲೆಯೂರುತ್ತಾರಾ ಎನ್ನುವ ಅನುಮಾನ ಎಲ್ಲರಲ್ಲೂ ಕಾಡುತ್ತಿದೆ.[ಗಾಂಚಲಿ ಬಿಡಿ, ಕನ್ನಡ ಸಿನಿಮಾ ಮಾಡಿ: 'ಕಿರಿಕ್' ಹುಡುಗಿಗೆ ಕನ್ನಡಿಗರ ವಾರ್ನಿಂಗ್!]

ಏನ್ ನಿನ್ ಪ್ರಾಬ್ಲಂ.?
'ತಿಥಿ' ಸಿನಿಮಾದ ಗಡ್ಡಪ್ಪನಿಗೂ ನಟಿ ಸಂಯುಕ್ತ ಪ್ರಾಬ್ಲಂ ಏನು ಅಂತ ಅರ್ಥ ಆಗುತ್ತಿಲ್ಲ.[ಟಿವಿಯಲ್ಲಿ ಬಂದಿದೆಲ್ಲಾ ನಿಜ ಅಲ್ಲ ಎಂದ 'ಕಿರಿಕ್' ನಟಿ ಸಂಯುಕ್ತ ಹೆಗಡೆ.!]

ಲೆವೆಲ್ಲು.. ಸ್ಕೋಪು...
'ಎ' ಚಿತ್ರದಲ್ಲಿನ ಉಪೇಂದ್ರ, ಸಂಯುಕ್ತಗೆ ಕ್ಲಾಸ್ ತಗೊಂಡ್ರೆ ಹೀಗೆ ಆಗುತ್ತೆ.! [ತಮಿಳು ಸಿನಿಮಾ ಆಸೆಗೆ ಕನ್ನಡ ಚಿತ್ರಕ್ಕೆ ಕೈ ಕೊಡಲು ರೆಡಿ ಇದ್ರಾ ಕನ್ನಡತಿ ಸಂಯುಕ್ತ.?]

ತಿರುಬೋಕಿ ಜೀವನ.!
ಸುಮ್ನೆ ಇರಲಾರದೆ ಇರುವೆ ಬಿಟ್ಟುಕೊಳ್ಳುವುದು ಅಂದ್ರೆ ಇದೇ.! [ಕ್ಯಾತೆ ತೆಗೆದು ವಿವಾದ ಮೈಮೇಲೆ ಎಳ್ಕೊಂಡ 'ಕಿರಿಕ್' ಹುಡುಗಿ ಸಂಯುಕ್ತ]

ಅನುಷ್ಕಾ ಶೆಟ್ಟಿಯನ್ನ ನೋಡಿ ಕಲಿಯಲಿ...
ಉತ್ತಮ ಸ್ಕ್ರಿಪ್ಟ್ ಸಿಕ್ಕರೆ ಕನ್ನಡ ಸಿನಿಮಾ ಮಾಡುತ್ತೇನೆ ಅಂತ ಅನುಷ್ಕಾ ಶೆಟ್ಟಿ ಹೇಳಿದ್ದಾರೆ. ಅಂಥದ್ರಲ್ಲಿ, ಕನ್ನಡ ಚಿತ್ರಕ್ಕೆ ಕೈ ಕೊಟ್ಟು ಹೋಗಿರುವ ಸಂಯುಕ್ತ ಬಗ್ಗೆ ಏನು ಹೇಳಬೇಕು.?

ನಿರ್ಧಾರಕ್ಕೆ ಬೆಲೆ ಕೊಡಿ
ಸಂಯುಕ್ತ ರವರ ನಿರ್ಧಾರಕ್ಕೆ ಬೆಲೆ ಕೊಡಬೇಕು ಎಂಬುದು ಕೆಲವರ ಅಭಿಪ್ರಾಯ ಕೂಡ ಹೌದು.


Click it and Unblock the Notifications











