Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'19-20-21' ಟೀಸರ್ ಬಿಡುಗಡೆ: ಭರವಸೆ ಮೂಡಿಸಿದ ಮಂಸೋರೆಯ ಮತ್ತೊಂದು ಸಿನಿಮಾ
ರಾಷ್ಟ್ರಪ್ರಶಸ್ತಿ ವಿಜೇತ 'ನಾತಿಚರಾಮಿ', 'ಹರಿವು' ಸಿನಿಮಾಗಳ ಸೃಷ್ಟಿಕರ್ತ ಮಂಸೋರೆ, ಕನ್ನಡ ಚಿತ್ರರಂಗದಲ್ಲಿ ಪರ್ಯಾಯ ಸಿನಿಮಾಕರ್ಮಿಗಳಲ್ಲಿ ಒಬ್ಬರು. ಇವರ ನಿರ್ದೇಶನದ ಹೊಸ ಸಿನಿಮಾದ ಟೀಸರ್ ಇಂದು ಬಿಡುಗಡೆ ಆಗಿದೆ.
ನಿಜ ಘಟನೆಗಳನ್ನು ಆಧರಿಸಿದ '19-20-21' ಸಿನಿಮಾವನ್ನು ಮಂಸೋರೆ ನಿರ್ದೇಶನ ಮಾಡಿದ್ದು, ಚಿತ್ರೀಕರಣ ಹಂತದಲ್ಲಿಯೇ ನಿರೀಕ್ಷೆ ಹುಟ್ಟಿಸಿದ್ದ ಈ ಸಿನಿಮಾದ ಟೀಸರ್ ಇಂದು ಅಂದರೆ ಜನವರಿ 20 ರಂದು ಬಿಡುಗಡೆ ಆಗಿದೆ.
'ಆಕ್ಟ್-1978' ಸಿನಿಮಾ ಮೂಲಕ ಗಮನ ಸೆಳೆದಿದ್ದ ಮಂಸೋರೆ ಇದೀಗ ಮತ್ತೊಂದು 'ಜನ ಜಾಗೃತಿ' ಸಿನಿಮಾ ಮೂಲಕ ಪ್ರೇಕ್ಷಕರೆದುರು ಬರಲು ಸಜ್ಜಾಗಿದ್ದಾರೆ. ಸಿನಿಮಾದ ಟೀಸರ್ ಇಂದು ಬಿಡುಗಡೆ ಆಗಿದ್ದು, ಟೀಸರ್ ನೋಡಿದರೆ ಪೊಲೀಸ್ ದೌರ್ಜನ್ಯದ ವಿರುದ್ಧ ಎತ್ತಿದ ದನಿ ಈ ಸಿನಿಮಾ ಆಗಿರುವ ಸಾಧ್ಯತೆ ಕಂಡುಬರುತ್ತಿದೆ.
'ಆಕ್ಟ್ 1978' ಸಿನಿಮಾ ಮೂಲಕ ಸರ್ಕಾರಿ ಕಚೇರಿಗಳಲ್ಲಿನ ಭ್ರಷ್ಟಾಚಾರದ ವಿರುದ್ಧ ಮಾತನಾಡಿದ್ದ ಮಂಸೋರೆ, '19-20-21' ಸಿನಿಮಾ ಮೂಲಕ ಪೊಲೀಸ್ ಬ್ರುಟಾಲಿಟಿ ಬಗ್ಗೆ, ಸರ್ಕಾರದ ವಿರುದ್ಧ ಸಾಮಾನ್ಯರ ಹೋರಾಟದ ಬಗ್ಗೆ ಕತೆ ಹೇಳ ಹೊರಟಿದ್ದಾರೆ.
ಸಿನಿಮಾದ ಟೀಸರ್ ಅಷ್ಟೆ ಇದೀಗ ಬಿಡುಗಡೆ ಆಗಿದ್ದು, ಸಿನಿಮಾದ ಟ್ರೈಲರ್ ಜನವರಿ 27 ರಂದು ಬಿಡುಗಡೆ ಆಗಲಿದೆ. ಸಿನಿಮಾಕ್ಕೆ ಜನರಿಂದ, ಜನರಿಗಾಗಿ ಎಂಬ ಟ್ಯಾಗ್ಲೈನ್ ಸಹ ಇದ್ದು, ಗಣರಾಜ್ಯೋತ್ಸವದ ಮಾರನೇಯ ದಿನ ಸಿನಿಮಾದ ಟ್ರೈಲರ್ ಬಿಡುಗಡೆ ಆಗುತ್ತಿರುವುದು ವಿಶೇಷ.
ಮಂಸೋರೆ ನಿರ್ದೇಶನದ ಈ ಸಿನಿಮಾದಲ್ಲಿ ಶೃಂಗ ಬಿವಿ, ಎಂಡಿ ಪಲ್ಲವಿ, ಬಾಲಾಜಿ ಮನೋಹರ್, ರಾಜೇಶ್ ನಟರಂಗ, ಮಹದೇವ್ ಹಡಪದ್, ಪಿಡಿ ಸತೀಶ್, ವೆಂಕಟೇಶ್ ಪ್ರಸಾದ್ ಇನ್ನು ಹಲವರು ನಟಿಸಿದ್ದಾರೆ. ಮಂಸೋರೆಯ ನಂಬಿಕಸ್ತ ತಂತ್ರಜ್ಞರ ತಂಡವೇ ಮತ್ತೆ ಈ ಸಿನಿಮಾಕ್ಕಾಗಿ ಮತ್ತೆ ಒಂದಾಗಿದೆ.