ಮಗಳ ಜೊತೆ ಓಂ ಪ್ರಕಾಶ್ ಹೊಸ 'ಕಟ್ಟೆ' ಪುರಾಣ
ಓಂಪ್ರಕಾಶ್ ರಾವ್ ಮತ್ತೊಂದು ಹೊಸ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಈ ಬಾರಿ ಅವರು ತಮ್ಮ ಮಗಳು ಶ್ರಾವ್ಯಾ ನಾಯಕಿಯಾಗಿರುವ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವುದು ಗೊತ್ತೇ ಇದೆ. ಚಿತ್ರದಲ್ಲಿ ಇಬ್ಬರು ನಾಯಕರು ನಾಗಶೇಖರ್ ಮತ್ತು ಚಂದನ್.
'ಚಂದ್ರಲೇಖ' ಯಶಸ್ಸಿನ ಬಳಿಕ ಓಂಪ್ರಕಾಶ್ ರಾವ್ ನಿರ್ದೇಶಿಸುತ್ತಿರುವ ಮತ್ತೊಂದು ರೀಮೇಕ್ ಚಿತ್ರ ಇದಾಗಿದೆ. ಇದು ತಮಿಳಿನ 'ಕೇಡಿ ಬಿಲ್ಲಾ ಕಿಲಾಡಿ ರಂಗ' ಚಿತ್ರದ ಕನ್ನಡ ಆವೃತ್ತಿ. ಇನ್ನು ಈ ಚಿತ್ರವನ್ನು ಕನ್ನಡದಲ್ಲಿ ಉಮೇಶ್ ರೆಡ್ಡಿ ನಿರ್ಮಿಸುತ್ತಿದ್ದಾರೆ. [ಮಗಳು ಶ್ರಾವ್ಯಾ ಜತೆ 'ಕಟ್ಟೆ' ಮೇಲೆ ಓಂ ಪ್ರಕಾಶ್ ರಾವ್]

ಅಣಜಿ ನಾಗರಾಜ್ ಅರ್ಪಿಸುವ ರೇಣುಕ ಮೂವಿ ಮೆಕರ್ಸ್ ಅಡಿಯಲ್ಲಿ ಉಮೇಶ್ ರೆಡ್ಡಿ ಎ ಎಂ ಅವರು ನಿರ್ಮಿಸುತ್ತಿರುವ 'ಕಟ್ಟೆ' ಸಿನಿಮಾಕ್ಕೆ ಎಂ ಎಸ್ ರಮೇಶ್ ಅವರ ಸಂಭಾಷಣೆ ಇದೆ, ಲಕ್ಷ್ಮಣ್ ರೆಡ್ಡಿ ಅವರ ಸಂಕಲನ, ಕಲೈ ಹಾಗೂ ತ್ರಿಭುವಣ್ ಅವರ ನೃತ್ಯ ನಿರ್ದೇಶನವಿದೆ.

ಎರಡನೇ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ಪ್ರಾರಂಭವಾಗಲಿದೆ. ಪಾತ್ರವರ್ಗದಲ್ಲಿ ನಾಗಶೇಖರ್, ರೂಕ್ಸಾ, ಓಂ ಪ್ರಕಾಶ್ ರಾವ್, ಶ್ರೀನಿವಾಸಮೂರ್ತಿ, ಅವಿನಾಶ್, ಸತ್ಯಜಿತ್, ಲಕ್ಷ್ಮಣ್ ಹಾಗೂ ಇನ್ನಿತರರು ತಾರಾಗಣದಲ್ಲಿ ಇದ್ದಾರೆ. (ಫಿಲ್ಮಿಬೀಟ್ ಕನ್ನಡ)


Click it and Unblock the Notifications











