ಚಾಮರಾಜಪೇಟೆ ರುದ್ರಭೂಮಿಯಲ್ಲಿ 'ಮಸಣ' ಶುರು
ಫ್ಯಾಮಿಲಿ, ಸೆಂಟಿಮೆಂಟ್ ಚಿತ್ರಗಳು ಇತ್ತೀಚೆಗೆ ತುಂಬಾ ವಿರಳವಾಗಿದ್ದು ಭಯೋತ್ಪಾದನೆ, ರೌಡಿಸಮ್ ಚಿತ್ರಗಳನ್ನೇ ಜನ ಹೆಚ್ಚಾಗಿ ಇಷ್ಟ ಪಡುತ್ತಿದ್ದಾರೆ. ಅಂಥದ್ದೇ ಚಿತ್ರವೊಂದು ಮೊನ್ನೆ ಸೆಟ್ಟೇರಿದೆ. ಯುವ ನಿರ್ದೇಶಕ ಮಂಜುನಾಥ್ ಕಡೂರ್ ಕಥೆ, ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ 'ಮಸಣ' ಚಿತ್ರದ ಮುಹೂರ್ತ ಇತ್ತೀಚೆಗೆ ನಡೆಯಿತು.
ಚಿತ್ರದ ಹೆಸರೇ ಮಸಣವಾದ್ದರಿಂದ ಚಾಮರಾಜಪೇಟೆ ರುದ್ರಭೂಮಿಯಲ್ಲಿ ಚಿತ್ರದ ಮುಹೂರ್ತ ನಡೆಸಲಾಯಿತು. ಪ್ರಶಾಂತವಾಗಿದ್ದ ಹಳ್ಳಿಯೊಂದಕ್ಕೆ ಟೆರರಿಸ್ಟ್ ಗಳು ಬಂದು ಅಲ್ಲಿನ ಮುಗ್ಧ ಜನರನ್ನು ಬಳಸಿಕೊಂಡು ದುಷ್ಕೃತ್ಯಗಳನ್ನು ನಡೆಸುತ್ತಾರೆ. [ಸ್ಮಶಾಣದಲ್ಲಿ ಪುಸ್ತಕ ಬಿಡುಗಡೆ]

ಕೆ.ಎಸ್.ತಮ್ಮಯ್ಯ, ಶ್ರೀನಿವಾಸ್ ಸಹ ನಿರ್ಮಾಪಕರಾಗಿರುವ ಈ ಚಿತ್ರದಲ್ಲಿ ಕುಮಾರ್ ನಿತಿನ್ ಗೌಡ, ಸೋಮೇಶ್ ಸ್ವಾಮಿ, ಲಕ್ಷ್ಮಿ, ದಿವ್ಯಾ, ಮಾದೇಶ್, ತಮ್ಮಯ್ಯ, ಪರಮೇಶ್, ಹೇಮಂತ್ ಗೌಡ, ಆನಂದ್ ಇನ್ನೂ ಮುಂತಾದವರು ತಾರಾಬಳಗವಿದೆ. (ಒನ್ಇಂಡಿಯಾ ಕನ್ನಡ)
More from Filmibeat
English summary
A new Kannada movie titled as 'Masana' (Means Burial Ground). As for the title the movie shooting starts at Chamarajpet burial ground. The movie is directed by Manjunath Kadur.


Click it and Unblock the Notifications











