ಬಸವಣ್ಣನವರ ವಚನಗಳಿಗೆ ಹೊಸ ರೂಪ ನೀಡುತ್ತಿರುವ ಅನೂಪ್ ಸೀಳಿನ್
ಕರ್ನಾಟಕ ತುಂಬ ಈಗ ಲಿಂಗಾಯಿತ ಮತ್ತು ವೀರಶೈವ ಪ್ರತ್ಯೇಕ ಧರ್ಮದ ಗಲಾಟೆ ಜೋರಾಗಿ ನಡೆಯುತ್ತಿದೆ. ಆದರೆ ಇಂತಹ ಸಂದರ್ಭದಲ್ಲಿ ಕನ್ನಡದ ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಬಸವಣ್ಣನವರ ವಚನಗಳನ್ನು ಇನಷ್ಟು ಜನರಿಗೆ ತಲುಪಿಸುವುದಕ್ಕೆ ಮುಂದಾಗಿದ್ದಾರೆ.
ತಮ್ಮ ಸಿನಿಮಾ ಸಂಗೀತದ ನಡುವೆ ಅನೂಪ್ "ಕಳಬೇಡ ಕೊಲಬೇಡ" ಎಂಬ ಮ್ಯೂಸಿಕ್ ಆಲ್ಬಂ ಮಾಡುವ ತಯಾರಿ ನಡೆಸಿದ್ದಾರೆ. ತಮ್ಮ ಸಂಗೀತದ ಜೊತೆಗೆ ಬಸವಣ್ಣ ರವರ ಅದ್ಬುತ ವಚನಗಳು ಬೇರೆಯೆ ಲೋಕಕ್ಕೆ ಕರೆದೊಯ್ಯುತ್ತದೆ. ಎಂಬುದು ಅನೂಪ್ ಅವರ ಅಭಿಪ್ರಾಯ.

ಕನ್ನಡದಲ್ಲಿ ಇದು ಹೊಸ ಪ್ರಯತ್ನವಾಗಿದ್ದು, 12ನೇ ಶತಮಾನದ ವಚನಗಳನ್ನು ಇಂದಿನ ಪೀಳಿಗೆಯ ಜನರಿಗೆ ತಲುಪಿಸುವ ಪ್ರಯತ್ನವನ್ನು ಮಾಡಿದ್ದಾರೆ. 'ಜೆ ಪಿ ಮ್ಯೂಸಿಕ್' ವತಿಯಿಂದ ಸದ್ಯದಲ್ಲೇ ಅನೂಪ್ ಅವರ "ಕಳಬೇಡ ಕೊಲಬೇಡ" ಆಲ್ಬಂ ಬಿಡುಗಡೆಯಾಗಲಿದೆ.
More from Filmibeat
English summary
Kannada music director Anoop Seelin new music album.


Click it and Unblock the Notifications











