Don't Miss!
- News ಮಳೆ.. ಮಳೆ.. ಗುಡುಗು ಸಹಿತ ಭರ್ಜರಿ ಮಳೆಗೆ ತತ್ತರಿಸಿದ ಕರ್ನಾಟಕ!
- Automobiles ಪೆಟ್ರೋಲ್ಗೆ ಹೆಚ್ಚು ಹಣ ಖರ್ಚು ಮಾಡುತ್ತಿದ್ದೀರಾ?.. ಇಲ್ಲಿವೆ ಉತ್ತಮ ಎಲೆಕ್ಟ್ರಿಕ್ ಸ್ಕೂಟರ್ಗಳು, ಜಾಸ್ತಿ ಓಡ
- Finance Bengaluru Traffic Police: ಬೆಂಗಳೂರಿನ ಈ ರಸ್ತೆ ಸಂಚಾರ ಮಾರ್ಗ ಬದಲಾವಣೆ, ವಿವರ
- Technology Samsung: ಭಾರತದಲ್ಲಿ ಹೊಸ ವೇರಿಯಂಟ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ F15 5G! ಬೆಲೆ ಎಷ್ಟು?
- Sports RCB: 'ಗೋ ಗ್ರೀನ್' ಭಾಗವಾಗಿ 3 ಕೆರೆಗಳ ಅಭಿವೃದ್ಧಿಪಡಿಸಿದ ಆರ್ಸಿಬಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'RRR' ಬಳಿಕ ಆಸ್ಕರ್ ಮೇಲೆ ಕಣ್ಣಿಟ್ಟ 'ಕಾಂತಾರ' ಸಿಗುತ್ತದೆಯೇ ಎಂಟ್ರಿ?
'ಕಾಂತಾರ' ಸಿನಿಮಾ ಬಹುದೊಡ್ಡ ಹಿಟ್ ಎನಿಸಿಕೊಂಡಿದೆ ಮಾತ್ರವಲ್ಲ ಹಲವು ಸಿನಿಮಾ ವಿಮರ್ಶಕರಿಂದಲೂ ಭೇಷ್ ಎನಿಸಿಕೊಂಡಿದೆ. ಹಲವು ದಾಖಲೆಗಳನ್ನು ಬರೆದಿರುವ 'ಕಾಂತಾರ' ಸಿನಿಮಾ ಈಗ ಮತ್ತೊಂದು ದಾಖಲೆ ಬರೆಯಲು ಸಜ್ಜಾಗಿದೆ.
'ಕಾಂತಾರ' ಸಿನಿಮಾವು ಆಸ್ಕರ್ ಮೇಲೆ ಕಣ್ಣಿಟ್ಟಿದ್ದು, ಆಸ್ಕರ್ ರೇಸ್ ಅನ್ನು ಶೀಘ್ರವೇ ಪ್ರಾರಂಭಿಸಲಿದೆ. 'RRR' ಹಾಗೂ ಬಾಲಿವುಡ್ನ 'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾಗಳು ಈಗಾಗಲೇ ಆಸ್ಕರ್ ಕ್ಯಾಂಪೇನ್ ಪ್ರಾರಂಭೀಸಿದ್ದು ಈಗ ಈ ಪಟ್ಟಿಗೆ 'ಕಾಂತಾರ' ಸಹ ಸೇರಿಕೊಂಡಿದೆ.
'ಕಾಂತಾರ' ಸಿನಿಮಾದ ನಿರ್ಮಾಪಕ ವಿಜಯ್ ಕಿರಗಂದೂರು ಈ ಬಗ್ಗೆ ಇಂಗ್ಲೀಷ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, 'ಕಾಂತಾರ' ಸಿನಿಮಾದ ಆಸ್ಕರ್ ನಾಮಿನೇಷನ್ಗಾಗಿ ನಾವು ಅಪ್ಲಿಕೇಶನ್ ಸಲ್ಲಿಸಿದ್ದೇವೆ ಎಂದಿದ್ದಾರೆ. ನಮ್ಮ ಸಿನಿಮಾಕ್ಕೆ ನಾಮಿನೇಶನ್ ದೊರಕಿಸಿಕೊಡಲು ಕಾತರರಾಗಿದ್ದೇವೆ, ನಾಮಿನೇಶನ್ಸ್ ಇನ್ನಷ್ಟೆ ಘೋಷನೆ ಆಗಬೇಕಿದೆ. ನಾವು ಕುತೂಹಲದಿಂದ ಕಾಯುತ್ತಿದ್ದೇವೆ'' ಎಂದಿದ್ದಾರೆ ವಿಜಯ್ ಕಿರಗಂದೂರು.
ಈ ಬಾರಿಯ ಆಸ್ಕರ್ಗೆ ಭಾರತದಿಂದ ಕೆಲವು ಉತ್ತಮ ಸಿನಿಮಾಗಳು ನಾಮಿನೇಶನ್ಸ್ಗೆ ಯತ್ನಿಸುತ್ತಿವೆ. ಭಾರತದಿಂದ ಅಧಿಕೃತವಾಗಿ ಗುಜರಾತಿ ಸಿನಿಮಾ 'ಚೆಲ್ಲಾ ಶೋ' ಅನ್ನು ಆಸ್ಕರ್ಗೆ ಕಳಿಸಲಾಗಿದೆ. ಈಗಾಗಲೇ ಹಲವು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡಿರುವ RRR ಸಿನಿಮಾ ಸಹ ಆಸ್ಕರ್ಗಾಗಿ ಗಟ್ಟಿಯಾಗಿ ಯತ್ನಿಸುತ್ತಿದ್ದು, ಕ್ಯಾಂಪೇನ್ ಅನ್ನು ಪ್ರಾರಂಭಿಸಿದೆ.
ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ ಮಾಡಿ ಆಲಿಯಾ ಭಟ್ ನಟಿಸಿರುವ ಹಿಂದಿ ಸಿನಿಮಾ 'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾ ಸಹ ಆಸ್ಕರ್ಗೆ ಯತ್ನಿಸುತ್ತಿದ್ದು, ಆ ಸಿನಿಮಾ ಸಹ ಸಿನಿಮಾವನ್ನು ಸಬ್ಮಿಶನ್ಗೆ ಕಳಿಸಿದೆ. ಇದೀಗ 'ಕಾಂತಾರ' ಸಹ ರೇಸ್ನಲ್ಲಿ ಯಾವ ಸಿನಿಮಾಕ್ಕೆ ನಾಮಿನೇಶನ್ ದೊರಕುತ್ತದೆ. ಯಾವ ಸಿನಿಮಾ ಗೆಲ್ಲುತ್ತದೆ ಎಂಬುದು ಕುತೂಹಲ ಕೆರಳಿಸಿದೆ.