Don't Miss!
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ರೋಹಿತ್ ಬಳಗದ ಅಭ್ಯಾಸಕ್ಕೆ ಭಾನುವಾರ ರಜೆ ನೀಡಿದ ಕೋಚ್ ದ್ರಾವಿಡ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'RRR' ಬಳಿಕ ಆಸ್ಕರ್ ಮೇಲೆ ಕಣ್ಣಿಟ್ಟ 'ಕಾಂತಾರ' ಸಿಗುತ್ತದೆಯೇ ಎಂಟ್ರಿ?
'ಕಾಂತಾರ' ಸಿನಿಮಾ ಬಹುದೊಡ್ಡ ಹಿಟ್ ಎನಿಸಿಕೊಂಡಿದೆ ಮಾತ್ರವಲ್ಲ ಹಲವು ಸಿನಿಮಾ ವಿಮರ್ಶಕರಿಂದಲೂ ಭೇಷ್ ಎನಿಸಿಕೊಂಡಿದೆ. ಹಲವು ದಾಖಲೆಗಳನ್ನು ಬರೆದಿರುವ 'ಕಾಂತಾರ' ಸಿನಿಮಾ ಈಗ ಮತ್ತೊಂದು ದಾಖಲೆ ಬರೆಯಲು ಸಜ್ಜಾಗಿದೆ.
'ಕಾಂತಾರ' ಸಿನಿಮಾವು ಆಸ್ಕರ್ ಮೇಲೆ ಕಣ್ಣಿಟ್ಟಿದ್ದು, ಆಸ್ಕರ್ ರೇಸ್ ಅನ್ನು ಶೀಘ್ರವೇ ಪ್ರಾರಂಭಿಸಲಿದೆ. 'RRR' ಹಾಗೂ ಬಾಲಿವುಡ್ನ 'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾಗಳು ಈಗಾಗಲೇ ಆಸ್ಕರ್ ಕ್ಯಾಂಪೇನ್ ಪ್ರಾರಂಭೀಸಿದ್ದು ಈಗ ಈ ಪಟ್ಟಿಗೆ 'ಕಾಂತಾರ' ಸಹ ಸೇರಿಕೊಂಡಿದೆ.
'ಕಾಂತಾರ' ಸಿನಿಮಾದ ನಿರ್ಮಾಪಕ ವಿಜಯ್ ಕಿರಗಂದೂರು ಈ ಬಗ್ಗೆ ಇಂಗ್ಲೀಷ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, 'ಕಾಂತಾರ' ಸಿನಿಮಾದ ಆಸ್ಕರ್ ನಾಮಿನೇಷನ್ಗಾಗಿ ನಾವು ಅಪ್ಲಿಕೇಶನ್ ಸಲ್ಲಿಸಿದ್ದೇವೆ ಎಂದಿದ್ದಾರೆ. ನಮ್ಮ ಸಿನಿಮಾಕ್ಕೆ ನಾಮಿನೇಶನ್ ದೊರಕಿಸಿಕೊಡಲು ಕಾತರರಾಗಿದ್ದೇವೆ, ನಾಮಿನೇಶನ್ಸ್ ಇನ್ನಷ್ಟೆ ಘೋಷನೆ ಆಗಬೇಕಿದೆ. ನಾವು ಕುತೂಹಲದಿಂದ ಕಾಯುತ್ತಿದ್ದೇವೆ'' ಎಂದಿದ್ದಾರೆ ವಿಜಯ್ ಕಿರಗಂದೂರು.
ಈ ಬಾರಿಯ ಆಸ್ಕರ್ಗೆ ಭಾರತದಿಂದ ಕೆಲವು ಉತ್ತಮ ಸಿನಿಮಾಗಳು ನಾಮಿನೇಶನ್ಸ್ಗೆ ಯತ್ನಿಸುತ್ತಿವೆ. ಭಾರತದಿಂದ ಅಧಿಕೃತವಾಗಿ ಗುಜರಾತಿ ಸಿನಿಮಾ 'ಚೆಲ್ಲಾ ಶೋ' ಅನ್ನು ಆಸ್ಕರ್ಗೆ ಕಳಿಸಲಾಗಿದೆ. ಈಗಾಗಲೇ ಹಲವು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡಿರುವ RRR ಸಿನಿಮಾ ಸಹ ಆಸ್ಕರ್ಗಾಗಿ ಗಟ್ಟಿಯಾಗಿ ಯತ್ನಿಸುತ್ತಿದ್ದು, ಕ್ಯಾಂಪೇನ್ ಅನ್ನು ಪ್ರಾರಂಭಿಸಿದೆ.
ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ ಮಾಡಿ ಆಲಿಯಾ ಭಟ್ ನಟಿಸಿರುವ ಹಿಂದಿ ಸಿನಿಮಾ 'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾ ಸಹ ಆಸ್ಕರ್ಗೆ ಯತ್ನಿಸುತ್ತಿದ್ದು, ಆ ಸಿನಿಮಾ ಸಹ ಸಿನಿಮಾವನ್ನು ಸಬ್ಮಿಶನ್ಗೆ ಕಳಿಸಿದೆ. ಇದೀಗ 'ಕಾಂತಾರ' ಸಹ ರೇಸ್ನಲ್ಲಿ ಯಾವ ಸಿನಿಮಾಕ್ಕೆ ನಾಮಿನೇಶನ್ ದೊರಕುತ್ತದೆ. ಯಾವ ಸಿನಿಮಾ ಗೆಲ್ಲುತ್ತದೆ ಎಂಬುದು ಕುತೂಹಲ ಕೆರಳಿಸಿದೆ.