Don't Miss!
- Technology ಬಹುನಿರೀಕ್ಷಿತ ರಿಯಲ್ಮಿ ನಾರ್ಜೋ 70 ಪ್ರೊ 5G ಲಾಂಚ್!..ಇಯರ್ಬಡ್ಸ್ ಉಚಿತ!
- News ಜಗದೀಶ್ ಶೆಟ್ಟರ್ಗೆ ಬೆಳಗಾವಿ ಸ್ಪರ್ಧೆ ಮತ್ತಷ್ಟು ಜಟೀಲ: ಗೋಬ್ಯಾಕ್ ಅಭಿಯಾನ ಯಶಸ್ವಿ ಆಯ್ತಾ?
- Automobiles ನಟ ವಿಜಯ್ ನೋಡಲು ಬಂದ ಜನಸಾಗರ: ಅಭಿಮಾನಿಗಳಿಂದ ನಟನ ಕಾರಿಗೆ ಹಾನಿ!
- Sports IPL ಬಿಡಿ, WPLನಲ್ಲಿ ಆರ್ಸಿಬಿಗೆ ಗೆದ್ದ ಮೊತ್ತಕ್ಕೂ ಸಮವಿಲ್ಲ PSL ವಿಜೇತರಿಗೆ ಸಿಕ್ಕ ಬಹುಮಾನ
- Lifestyle ಕೆಜಿಎಫ್ ಎಲ್ ಡೊರಾಡೊ ಕಥೆ ಕೇಳಿದ್ದೀರಾ? ಇದು ಸಮುದ್ರದಲ್ಲಿ ಮುಳುಗಿದ ಎಲ್ ಡೊರಾಡೊ ಹಡಗಿನ ಕಥೆ..!
- Finance ಬೆಂಗಳೂರಿನ ಮೇಘನಾ ಫುಡ್ಸ್ ಹೋಟೆಲ್ ಮಳಿಗೆಗಳ ಮೇಲೆ ಐಟಿ ದಾಳಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕುರುಕ್ಷೇತ್ರನೂ ಇಲ್ಲ, ಪೈಲ್ವಾನೂ ಇಲ್ಲ: ವರಮಹಾಲಕ್ಷ್ಮಿ ಹಬ್ಬಕ್ಕೆ ಮತ್ತೊಂದು ನಿರೀಕ್ಷೆಯ ಚಿತ್ರ
ವರಮಹಾಲಕ್ಷ್ಮಿ ಹಬ್ಬಕ್ಕೆ ನಮ್ಮ ಸಿನಿಮಾ ಬರುತ್ತೆ, ನಮ್ಮ ಚಿತ್ರ ಬರುತ್ತೆ ಅಂತ ತಿಂಗಳುಗಳ ಮೊದಲೇ ಟವಲ್ ಹಾಕಿ ಕೂತಿದ್ದರು. ಹಬ್ಬದ ದಿನ ಹತ್ತಿರ ಬರುತ್ತಿದ್ದಂತೆ ಟವಲೂ ಇಲ್ಲ, ಟವಲ್ ಹಾಕಿದವರೂ ಇಲ್ಲ ಎನ್ನುವಂತಾಯಿತು.
ದರ್ಶನ್ ಅಭಿನಯದ ಕುರುಕ್ಷೇತ್ರ ಮತ್ತು ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾಗಳು ಒಂದೇ ದಿನ, ಆಗಸ್ಟ್ 8 ರಂದು ತೆರೆಗೆ ಬರಲು ಸಜ್ಜಾಗಿತ್ತು. ಆದ್ರೆ, ಬೆಳವಣಿಗೆಗಳು ಸಾಗಿದಂತೆ ವರಮಹಾಲಕ್ಷ್ಮಿ ಹಬ್ಬಕ್ಕೆ ಇಬ್ಬರು ಬರಲ್ಲ ಎಂದು ನಿರ್ಧರಿಸಿ, ಹಿಂದಕ್ಕೆ ಮುಂದಕ್ಕೆ ಹೋದರು.
ಕುರುಕ್ಷೇತ್ರ ಹಿಂದಕ್ಕೆ ಪೈಲ್ವಾನ್ ಮುಂದಕ್ಕೆ ಹೋಗಲು ಅಸಲಿ ಕಾರಣ ಬೇರೆ.!
ಇದರಿಂದ ಸಹಜವಾಗಿ ಸ್ಯಾಂಡಲ್ ವುಡ್ ಅಭಿಮಾನಿಗಳು ನಿರಾಸೆಯಾದರು. ವರಮಹಾಲಕ್ಷ್ಮಿ ಹಬ್ಬಕ್ಕೆ ಯಾವುದೇ ಸಿನಿಮಾ ಇಲ್ಲದ ಎಂದು ಬೇಸರ ಮಾಡಿಕೊಂಡಿದ್ದರು. ಇದೀಗ, ಪೈಲ್ವಾನ್ ಮತ್ತು ಕುರುಕ್ಷೇತ್ರದ ಜಗಳದಲ್ಲಿ ಮೂರನೇಯವರಿಗೆ ಈ ದಿನಾಂಕ ಸಿಕ್ಕಿದೆ.
ಕಪಾಳಕ್ಕೆ ಹೊಡೆದರು, ಕೀಳಾಗಿ ನೋಡಿದರು, ಆಡಿಕೊಂಡರು ಆದರೂ ಎದ್ದು ಬಂದ್ರು
ಹೌದು, ಕೋಮಲ್ ಕುಮಾರ್ ಅಭಿನಯದ 'ಕೆಂಪೇಗೌಡ-2' ಸಿನಿಮಾ ವರಮಹಾಲಕ್ಷ್ಮಿ ಹಬ್ಬದ ವಿಶೇಷವಾಗಿ ಆಗಸ್ಟ್ 9 ರಂದು ಚಿತ್ರಮಂದಿರಕ್ಕೆ ಬರ್ತಿದೆ. ಹೀಗಾಗಿ, ಬಹಳ ವರ್ಷದ ನಂತರ ಕೋಮಲ್ ಗಾಂಧಿನಗರಕ್ಕೆ ಎಂಟ್ರಿ ಕೊಡ್ತಿದ್ದಾರೆ.
ಅಂದ್ಹಾಗೆ, ಇದು ಸುದೀಪ್ ಅಭಿನಯಿಸಿದ್ದ ಕೆಂಪೇಗೌಡ ಚಿತ್ರದ ಮುಂದುವರೆದ ಭಾಗವಲ್ಲ. ಸ್ವಮೇಕ್ ಸಿನಿಮಾ ಎಂದು ಹೇಳಲಾಗ್ತಿದೆ. ಶಂಕರ್ ಗೌಡ ಕಥೆ ಬರೆದು, ನಿರ್ದೇಶನ ಮಾಡಿದ್ದು, ವಿನೋದ್ ಎಂಬುವವರು ನಿರ್ಮಾಣ ಮಾಡಿದ್ದಾರೆ.