twitter
    For Quick Alerts
    ALLOW NOTIFICATIONS  
    For Daily Alerts

    ಕುರುಕ್ಷೇತ್ರದಲ್ಲಿ ನಿಖಿಲ್ ಕುಮಾರ್ ಬಗ್ಗೆ ಈಗಲೂ ಕಾಡ್ತಿದೆ ಗೊಂದಲ.!

    |

    Recommended Video

    Kurukshetra Movie : ಕುರುಕ್ಷೇತ್ರ ಸಿನಿಮಾದಲ್ಲಿ ನಿಖಿಲ್ ಕುಮಾರಸ್ವಾಮಿ ಪಾತ್ರದ ವಿಷ್ಯಕ್ಕೆ ಗೊಂದಲ

    ಕನ್ನಡದ ಮೆಗಾ ಸಿನಿಮಾ ಕುರುಕ್ಷೇತ್ರ ತೆರೆಗೆ ಬರಲು ಸಜ್ಜಾಗಿದ್ದು, ಆಗಸ್ಟ್ 9 ರಂದು ಚಿತ್ರಮಂದಿರಕ್ಕೆ ಬರಲಿದೆ. ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಕುರುಕ್ಷೇತ್ರ ಬರ್ತಿದ್ದು, ದರ್ಶನ್, ನಿಖಿಲ್ ಕುಮಾರ್, ಅರ್ಜುನ್ ಸರ್ಜಾ, ರವಿಚಂದ್ರನ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.

    ಈಗಾಗಲೇ ದರ್ಶನ್ ಅವರದ್ದು ಒಂದು ಟೀಸರ್, ನಿಖಿಲ್ ಕುಮಾರ್ ಅವರದ್ದು ಒಂದು ಟೀಸರ್, ಎರಡು ಟ್ರೈಲರ್ ಮತ್ತು ಆಡಿಯೋ ರಿಲೀಸ್ ಆಗಿದೆ. ಕನ್ನಡ ಮತ್ತು ತೆಲುಗಿನಲ್ಲಿ ಟ್ರೈಲರ್ ಬಂದಿದ್ದು, ಈ ಟ್ರೈಲರ್ ನೋಡಿದ್ಮೇಲೆ ನಿಖಿಲ್ ಕುಮಾರ್ ಪಾತ್ರದ ಬಗ್ಗೆ ಗೊಂದಲ ಹೆಚ್ಚಾಗಿದೆ.

    'ಕುರುಕ್ಷೇತ್ರ' ಚಿತ್ರಕ್ಕೆ ನಿಖಿಲ್ ಕುಮಾರ್ ಡಬ್ಬಿಂಗ್ ಮಾಡಿದ್ರಾ ಇಲ್ವಾ? 'ಕುರುಕ್ಷೇತ್ರ' ಚಿತ್ರಕ್ಕೆ ನಿಖಿಲ್ ಕುಮಾರ್ ಡಬ್ಬಿಂಗ್ ಮಾಡಿದ್ರಾ ಇಲ್ವಾ?

    ಕುರುಕ್ಷೇತ್ರ ಚಿತ್ರೀಕರಣದ ನಂತರ ನಿಖಿಲ್ ಕುಮಾರ್ ಹೆಚ್ಚಾಗಿ ಸಿನಿಮಾ ಪ್ರಚಾರದಲ್ಲಿ ಭಾಗವಹಿಸಿಲ್ಲ. ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲೂ ಕಾಣಿಸಿಕೊಂಡಿಲ್ಲ. ಈ ನಡುವೆ ಅಭಿಮನ್ಯು ಪಾತ್ರಕ್ಕೆ ನಿಖಿಲ್ ಡಬ್ ಮಾಡಿಲ್ಲ ಎಂಬ ಸುದ್ದಿಯೂ ಇತ್ತು. ಇಷ್ಟೆಲ್ಲಾ ಬೆಳವಣಿಗೆಯ ಮಧ್ಯೆ ಈಗ ನಿಖಿಲ್ ಬಗ್ಗೆ ಕಾಡುತ್ತಿರುವ ಗೊಂದಲ ಏನು? ಮುಂದೆ ಓದಿ....

    ನಿಖಿಲ್ ಕುಮಾರ್ ಡಬ್ ಮಾಡಿಲ್ಲ.!

    ನಿಖಿಲ್ ಕುಮಾರ್ ಡಬ್ ಮಾಡಿಲ್ಲ.!

    ಕುರುಕ್ಷೇತ್ರ ಚಿತ್ರದ ಟ್ರೈಲರ್ ನೋಡಿದ್ಮೇಲೆ ಒಂದಂತೂ ಪಕ್ಕಾ ಆಯ್ತು. ಅಭಿಮನ್ಯು ಪಾತ್ರದಲ್ಲಿ ನಟಿಸಿರುವ ನಿಖಿಲ್ ತಮ್ಮ ಪಾತ್ರಕ್ಕೆ ಡಬ್ ಮಾಡಿಲ್ಲ. ನಿಖಿಲ್ ಡಬ್ಬಿಂಗ್ ಮಾಡ್ತಾರಾ ಅಥವಾ ಮಾಡಲ್ವಾ ಎಂಬುದು ಭಾರಿ ಗೊಂದಲ ಸೃಷ್ಟಿಸಿತ್ತು. ಅಂತಿಮವಾಗಿ ಡಬ್ಬಿಂಗ್ ಮಾಡದೇ ನಿರಾಸೆ ಮೂಡಿಸಿದ್ದಾರೆ.

    ಟೀಸರ್ ನಲ್ಲಿ ನಿಖಿಲ್ ಧ್ವನಿ ಇತ್ತು

    ಟೀಸರ್ ನಲ್ಲಿ ನಿಖಿಲ್ ಧ್ವನಿ ಇತ್ತು

    ಕುರುಕ್ಷೇತ್ರ ಚಿತ್ರದ ಟ್ರೈಲರ್ ನಲ್ಲಿ ನಿಖಿಲ್ ಕುಮಾರ್ ಅವರ ಧ್ವನಿ ಇಲ್ಲ. ಆದರೆ, ಅದಕ್ಕೂ ಮುಂಚೆ ನಿಖಿಲ್ ಹುಟ್ಟುಹಬ್ಬಕ್ಕೆ ಬಂದಿದ್ದ ಟೀಸರ್ ನಲ್ಲಿ ''ತಾತ.....ಈ ಯುದ್ಧ ಸ್ವಾಭಿಮಾನದ ಸಂಕೇತ'' ಎಂಬ ಡೈಲಾಗ್ ಹೇಳಿದ್ದರು. ಇದರಲ್ಲಿ ನಿಖಿಲ್ ವಾಯ್ಸ್ ಇತ್ತು. ಸೋ, ಆಗ ಡಬ್ ಮಾಡಿದ್ರಾ, ಈಗ ಟ್ರೈಲರ್ ನಲ್ಲಿ ಯಾಕಿಲ್ಲ? ಕುರುಕ್ಷೇತ್ರ ಮತ್ತು ನಿಖಿಲ್ ಕುಮಾರ್ ನಡುವೆ ಏನಾಗಿದೆ ಎಂಬ ಹಲವು ಪ್ರಶ್ನೆಗಳು ಹುಟ್ಟಿಕೊಂಡಿದೆ.

    ಕುರುಕ್ಷೇತ್ರ ಹೊಸ ಟ್ರೈಲರ್ ನೋಡಿದ್ಮೇಲೂ ಫ್ಯಾನ್ಸ್ ನಿರಾಸೆ.!ಕುರುಕ್ಷೇತ್ರ ಹೊಸ ಟ್ರೈಲರ್ ನೋಡಿದ್ಮೇಲೂ ಫ್ಯಾನ್ಸ್ ನಿರಾಸೆ.!

    ನಿಖಿಲ್ ಯಾಕೆ ಡಬ್ ಮಾಡಿಲ್ಲ?

    ನಿಖಿಲ್ ಯಾಕೆ ಡಬ್ ಮಾಡಿಲ್ಲ?

    ಅಭಿಮನ್ಯು ಪಾತ್ರಕ್ಕೆ ಡಬ್ ಮಾಡಿರುವ ಧ್ವನಿ ನಿಖಿಲ್ ಕುಮಾರ್ ಗೆ ಸೂಕ್ತವಾಗಿ ಹೊಂದಿಕೆಯಾಗಿಲ್ಲ ಎನ್ನುವುದು ಪ್ರೇಕ್ಷಕರ ಅಭಿಪ್ರಾಯ. ಅದರ ಬದಲು ನಿಖಿಲ್ ಅವರೇ ಡಬ್ ಮಾಡಬಹುದಿತ್ತು ಎಂಬ ವಾದ ಇದೆ. ಬಟ್, ನಿಖಿಲ್ ಯಾಕೆ ಡಬ್ ಮಾಡಿಲ್ಲ ಎಂಬುದು ಈ ಉತ್ತರ ಸಿಗದ ಪ್ರಶ್ನೆಯಾಗಿದೆ.

    ದರ್ಶನ್ ಗೆ 'ಕುರುಕ್ಷೇತ್ರ' ಯಾಕೆ ಅಷ್ಟೊಂದು ಮುಖ್ಯ?ದರ್ಶನ್ ಗೆ 'ಕುರುಕ್ಷೇತ್ರ' ಯಾಕೆ ಅಷ್ಟೊಂದು ಮುಖ್ಯ?

    ಅಂದು ಮುನಿರತ್ನ ಹೇಳಿದ್ದು ಸುಳ್ಳಾ?

    ಅಂದು ಮುನಿರತ್ನ ಹೇಳಿದ್ದು ಸುಳ್ಳಾ?

    ಪೌರಾಣಿಕ ಸಿನಿಮಾದಲ್ಲಿ ಸಂಭಾಷಣೆ ಸ್ವಲ್ಪ ಚಾಲೆಂಜಿಂಗ್ ಆಗಿರುವ ಕಾರಣ ನಿಖಿಲ್ ಅವರಿಂದ ಡಬ್ ಮಾಡಿಸದೆ ಇರಬಹುದು ಎಂದು ನೋಡಿದ್ರೆ, ಅಂದು ಮುನಿರತ್ನ ಹೇಳಿದ್ದು ಸುಳ್ಳಾ ಎಂದು ಎನಿಸಿದೇ ಇರಲ್ಲ. ''ರಾ ರಾಜ್ ಕುಮಾರ್ ಅವರಷ್ಟೇ ಕನ್ನಡ ಭಾಷೆಯ ಮೇಲೆ ನಿಖಿಲ್ ಹಿಡಿತ ಹೊಂದಿದ್ದಾರೆ'' ಎಂದು ಹೇಳಿದ್ದರು. ರಾಜ್ ಅವರಷ್ಟು ಭಾಷೆಯ ಮೇಲೆ ಹಿಡಿತ ಹೊಂದಿದ್ದಾರೆ ಎಂದು ಗೊತ್ತಿದ್ದರೂ ಅವರಿಂದ ಯಾಕೆ ಡಬ್ ಮಾಡಿಸಿಲ್ಲ?

    ಕನ್ನಡ ಭಾಷೆ ಮೇಲೆ ಡಾ.ರಾಜ್ ರಷ್ಟೇ ಹಿಡಿತ ಹೊಂದಿರುವ ನಟ ನಿಖಿಲ್ ಎಂದ ಮುನಿರತ್ನ.!ಕನ್ನಡ ಭಾಷೆ ಮೇಲೆ ಡಾ.ರಾಜ್ ರಷ್ಟೇ ಹಿಡಿತ ಹೊಂದಿರುವ ನಟ ನಿಖಿಲ್ ಎಂದ ಮುನಿರತ್ನ.!

    English summary
    Kannada Actor Nikhil Kumar not dubbed voice for abhimanyu role in Kurukshetra movie. the movie directed by naganna and produced by munirathna.
    Friday, July 26, 2019, 10:37
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X