ಶ್ರೀಗಳಿಗೆ 'ಭಾರತ ರತ್ನ' ಕೊಡಿಸುವ ಯೋಗ್ಯತೆ ಯಾರಿಗೂ ಇಲ್ಲ: ಲೀಲಾವತಿ
Recommended Video

'ನಡೆದಾಡುವ ದೇವರು' ಡಾ ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತ ರತ್ನ ನೀಡಬೇಕು ಎಂಬುದು ಇಡೀ ಕನ್ನಡ ನಾಡಿನ ಜನರ ಆಸೆ ಮತ್ತು ಬೇಡಿಕೆಯಾಗಿದೆ. ಬಡವರು, ಮಕ್ಕಳ ಕಲ್ಯಾಣಕ್ಕಾಗಿ ದಶಕಗಳ ಕಾಲ ಶ್ರೀಗಳು ಮಾಡಿದ ಕೆಲಸಗಳು, ಅವರು ನೀಡಿದ ಕೊಡುಗೆಯನ್ನ ಕೇಂದ್ರ ಸರ್ಕಾರಕ್ಕೆ ಗೌರವಿಸಿ ಖುದ್ದು ಘೋಷಣೆ ಮಾಡಬೇಕಿತ್ತು.
ಬಟ್, ಇದುವರೆಗೂ ಆ ರೀತಿಯಾದ ಯಾವುದೇ ಬೆಳವಣಿಗೆ ಕಂಡು ಬಂದಿಲ್ಲ. ಸಹಜವಾಗಿ ಇದು ಸಾರ್ವಜನಿಕರಿಗೆ ಬೇಸರಕ್ಕೆ ಕಾರಣವಾಗಿದೆ.
ಈ ಬಗ್ಗೆ ಮಾತನಾಡಿದ ಹಿರಿಯ ನಟಿ ಲೀಲಾವತಿ ಅವರು ''ಶ್ರೀಗಳು ಏನೂ ಎಂಬುದು ಇಡೀ ಜಗತ್ತಿಗೆ ಗೊತ್ತಿದೆ, ಅವರೇ ಒಂದು ರತ್ನ, ಶ್ರೀಗಳಿಗೆ 'ಭಾರತ ರತ್ನ' ಕೊಡಿಸುವ ಯೋಗ್ಯತೆ ಯಾರಿಗೂ ಇಲ್ಲ'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಲೀಲಾವತಿ ಏನಂದ್ರು ಎಂದು ಪೂರ್ತಿ ತಿಳಿಯಲು ಮುಂದೆ ಓದಿ.....

ಅವರಿಗೇಕೆ ಬೇಕು ಭಾರತ ರತ್ನ?
''ಶ್ರೀ ಶಿವಕುಮಾರ ಸ್ವಾಮೀಜಿಗಳಿಗೆ ಯಾಕೆ ಕೊಡಬೇಕು ಭಾರತ ರತ್ನ. ಅವರು ಜಗತ್ತಿನ ಪಾಲಿಗೆ ಒಂದು ಅಮೂಲ್ಯವಾದ ರತ್ನ. 'ಭಾರತ ರತ್ನ' ಕೊಡೋದು ದೊಡ್ಡ ವಿಷ್ಯನಾ. ಭಾರತ ರತ್ನಕ್ಕಿಂತ ದೊಡ್ಡ ರತ್ನ ಇದ್ರೆ ಕೊಡೋಕು ಸಾಧ್ಯ'' - ಲೀಲಾವತಿ

ಮತ್ತೆ ಹುಟ್ಟಿ ಬಂದಿರ್ತಾರೆ
''ಕೋಟ್ಯಾಂತರ ಮಕ್ಕಳಿಗೆ ವಿದ್ಯೆ ನೀಡಿದವರು. ಅನೇಕ ಬಡವರ ಹೊಟ್ಟೆಗೆ ಊಟ ಹಾಕಿದವರು. ಇಂತಹ ವ್ಯಕ್ತಿಗಳು ಮತ್ತೆ ಹುಟ್ಟಬೇಕು. ಬಹುಶಃ ಈಗಾಗಲೇ ಮತ್ತೆ ಎಲ್ಲಿಯಾದರೂ ಹುಟ್ಟಿರ್ತಾರೆ. ಅವರೇ ದೇವರು. ಭಾರತ ರತ್ನಕ್ಕಿಂತ ದೊಡ್ಡ ರತ್ನ ಅವರು'' ಎಂದು ಲೀಲಾವತಿ ನುಡಿದಿದ್ದಾರೆ.

ಬೆಲೆ ಕಟ್ಟಲಾಗದ ರತ್ನ
''ಭಾರತ ರತ್ನಕ್ಕಿಂತ ಶ್ರೇಷ್ಠ ರತ್ನ ಶ್ರೀಗಳು. ಅವರೊಂದು ಅಮೂಲ್ಯವಾದ ರತ್ನ. ಅವರಿಗೆ ಬೆಲೆ ಕಟ್ಟಲಾಗದು. ಬೆಲೆ ಕಟ್ಟೋಕೆ ಆಗೋರಿಗೆ ಮಾತ್ರ ನಾಮಕರಣ ಮಾಡೋಕೆ ಸಾಧ್ಯ. ಇವರಿಗೆ ಯಾರೂ ನಾಮಕರಣ ಮಾಡಲು ಸಾಧ್ಯವಿಲ್ಲ'' ಎಂದು ವಿನೋದ್ ರಾಜ್ ಅಭಿಪ್ರಾಯ ಪಟ್ಟಿದ್ದಾರೆ.

ದೇವರಿಗೆ ಸನ್ಮಾನ ಮಾಡುವ ಯೋಗ್ಯತೆ ಮನುಷ್ಯನಿಗಿಲ್ಲ
''ನಡೆದಾಡುವ ದೇವರು ಅವರು ಅಂದ್ಮೇಲೆ ದೇವರಿಗೆ ಸನ್ಮಾನ ಮಾಡುವ ಯೋಗ್ಯತೆ ಮನುಷ್ಯನಿಗಿಲ್ಲ. ಆ ದೇವರೇ ಬರಬೇಕು ಅಥವಾ ಅವರೇ ದೇವರು. ಅದಕ್ಕೆ ಅವರು ಭಾರತ ರತ್ನ ತೆಗೆದುಕೊಳ್ಳದೇ ಹೋದರು'' ಎಂದು ವಿನೋದ್ ರಾಜ್ ಹೇಳಿದ್ದಾರೆ.
ಲೀಲಾವತಿ ಮತ್ತು ವಿನೋದ್ ರಾಜ್ ಮಾತನಾಡಿರುವ ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ


Click it and Unblock the Notifications











