Don't Miss!
- News Lok Sabha Election: ಚಾಮರಾಜನಗರ ಕ್ಷೇತ್ರ ಸಿಎಂಗೆ ಪ್ರತಿಷ್ಠೆಯ ಕಣ
- Finance ಬೆಂಗಳೂರು, ನೋಯ್ಡಾ, ಪುಣೆಯಲ್ಲಿ ಶೀಘ್ರದಲ್ಲೇ ಹೊಸ ಆಪಲ್ ಸ್ಟೋರ್ ಪ್ರಾರಂಭ
- Technology ಈ ಹೊಸ 5G ಫೋನ್ ಖರೀದಿಸಿದರೆ, ವಿವೋ ಕಂಪನಿಯ ಇಯರ್ಫೋನ್ ಉಚಿತ!
- Automobiles ನಟಿ ಶಿಲ್ಪಾ ಶೆಟ್ಟಿಗೆ ಮತ್ತೊಂದು ಸಮಸ್ಯೆ ತಂದಿಟ್ಟ ಪತಿ: ಐಷಾರಾಮಿ ಕಾರುಗಳು ಸೀಜ್!
- Lifestyle ವೋಟರ್ ಐಡಿ ಇಲ್ಲದೆಯೂ ಮತ ಚಲಾಯಿಸಬಹುದು.! ಹೇಗೆ ಗೊತ್ತಾ?
- Sports 2025ರ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸಲಿದೆಯೇ?; ಬಿಸಿಸಿಐ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸೆನ್ಸಾರ್ ಮಂಡಳಿಗೆ ಹೊಸ ಬಾಸ್ ನಾಗೇಂದ್ರ ಸ್ವಾಮಿ
ಕರ್ನಾಟಕ ಪ್ರಾದೇಶಿಕ ಚಲನಚಿತ್ರ ಸೆನ್ಸಾರ್ ಮಂಡಳಿಗೆ ಹೊಸ ಬಾಸ್ ಬಂದಿದ್ದಾರೆ. ಇಷ್ಟು ದಿನ ಖಡಕ್ ಆಫೀಸರ್ ಎಂದೇ ಹೆಸರಾಗಿದ್ದ ನಾಗರಾಜ್ ಅವರ ಸ್ಥಾನಕ್ಕೆ ಹೊಸದಾಗಿ ಎಂ ನಾಗೇಂದ್ರ ಸ್ವಾಮಿ (54) ಅವರನ್ನು ಅಧ್ಯಕ್ಷ ಹುದ್ದೆಗೆ ಸರ್ಕಾರ ನೇಮಕ ಮಾಡಿದೆ. ಎಂ.ನಾಗೇಂದ್ರಸ್ವಾಮಿ ಅವರು ಕ್ಷೇತ್ರ ಪ್ರಚಾರ ನಿರ್ದೇಶನಾಲಯದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಈಗಿನ ಅಧ್ಯಕ್ಷರಾಗಿರುವ ನಾಗರಾಜ್ ಅವರು ನಾಲ್ಕು ವರ್ಷಗಳ ಅವಧಿಯನ್ನು ಪೂರೈಸಿದ್ದು ದೆಹಲಿಗೆ ವರ್ಗಾವಣೆ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ತೆರವಾಗಿರುವ ಅವರ ಸ್ಥಾನಕ್ಕೆ ನಾಗೇಂದ್ರ ಸ್ವಾಮಿ ನೇಮಕವಾಗಿದ್ದಾರೆ. ನಾಗೇಂದ್ರ ಸ್ವಾಮಿ ಅವರಿಗೆ ಇದು ಹೆಚ್ಚುವರಿ ಜವಾಬ್ದಾರಿ. ಈ ಹಿಂದೆ ಇವರು ಮುಂಬೈ, ಕರ್ನಾಟಕ ಆಕಾಶವಾಣಿಯಲ್ಲಿ ಸುದ್ದಿ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
ನಾಗೇಂದ್ರ ಸ್ವಾಮಿ ಅವರ ಮುಂದೆ ಸೆನ್ಸಾರ್ ಪ್ರಮಾಣಪತ್ರಕ್ಕಾಗಿ ಮೊದಲು ಬರುತ್ತಿರುವ ಚಿತ್ರವೇ ಬಿಗ್ ಬಜೆಟ್ ನ ಬಹುನಿರೀಕ್ಷಿತ ಚಿತ್ರ 'ನಿನ್ನಿಂದಲೇ'. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಈ ಚಿತ್ರ ಶೀಘ್ರದಲ್ಲೇ ಸೆನ್ಸಾರ್ ಗೆ ರೆಡಿಯಾಗಲಿದೆ.
ಸೆನ್ಸಾರ್ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನೇಮಕ ಎಲ್ಲಿ ತಡವಾಗುತ್ತದೋ ಎಂಬ ಆತಂಕ ನಿರ್ಮಾಪಕರಲ್ಲಿ ಮನೆಮಾಡಿತ್ತು. ಉಗ್ರಂ, ಕ್ವಾಟ್ಲೆ ಚಿತ್ರಗಳು ಸೆನ್ಸಾರ್ ಗಾಗಿ ಕಾಯುತ್ತಿವೆ. ಈಗ ನಾಗೇಂದ್ರ ಸ್ವಾಮಿ ಬಂದಿರುವುದು ಎಲ್ಲರ ಆತಂಕವೂ ನಿವಾರಣೆಯಾಗಿದೆ. (ಏಜೆನ್ಸೀಸ್)