TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಚಾಮುಂಡೇಶ್ವರಿ ದೇವಿ ಮುಂದೆ ಚೇತನ್ ಬರೆದ ಸಾಹಿತ್ಯ ಹೀಗಿದೆ
ರೋರಿಂಗ್ ಸ್ಟಾರ್ ಶ್ರೀ ಮುರಳಿ ಅಭಿನಯದ 'ಮದಗಜ' ಸಿನಿಮಾದ ಸ್ಕ್ರಿಪ್ಟ್ ಪೂಜೆ ಹಾಗೂ ಲಿರಿಕ್ಸ್ ಪೂಜೆ ಇಂದು ನಡೆದಿದೆ. ಮೈಸೂರಿನಲ್ಲಿ ತಾಯಿ ಚಾಮುಂಡೇಶ್ವರಿ ಅಮ್ಮನ ದೇವಸ್ಥಾನದಲ್ಲಿ ಚಿತ್ರದ ಪೂಜೆ ಕಾರ್ಯಕ್ರಮ ಜರುಗಿದೆ.
ಇಂದು ಬೆಳಗ್ಗೆ 7.30ಕ್ಕೆ ಚಿತ್ರದ ಕಾರ್ಯಕ್ರಮ ನಡೆದಿದೆ. ಕಾರ್ಯಕ್ರಮದಲ್ಲಿ ನಟ ಶ್ರೀಮುರಳಿ, ಚೇತನ್ ಕುಮಾರ್ (ಭರಾಟೆ) , ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ , ಸುಪ್ರೀತ್, ನಿರ್ದೇಶಕ ಮಹೇಶ್ ಕುಮಾರ್ ಭಾಗಿಯಾಗಿದ್ದರು.
ಸ್ಕ್ರಿಪ್ಟ್ ಪೂಜೆ ಮುಗಿಸಿದ 'ಭರಾಟೆ' ಟೀಂ
ವಿಶೇಷ ಅಂದರೆ, ತಾಯಿ ಚಾಮುಂಡೇಶ್ವರಿ ಮುಂದೆಯೇ ಚೇತನ್ ಕುಮಾರ್ ಸಿನಿಮಾದ ಹಾಡನ್ನು ಬರೆದಿದ್ದಾರೆ. ದೇವರ ಮುಂದೆ ಚೇತನ್ ಬರದ ಸಾಹಿತ್ಯ ಈ ಮುಂದಿನಂತಿದೆ.
''ಶತ್ರು ದಮನವನ್ನು ಮಾಡೋ ಸೈನ್ಯವನೇ ಇಳಿಸೋ ವೈರತ್ವ ದರ್ಪ ಹೊರೆ
ಸೂರ್ಯ ಇರೋವರೆಗೂ ಭೂಮಿ ನೆನೆಯಲಿ ಮೊಳಗಲಿ ಕೀರ್ತಿ ಜಯಿಸೊ ದೊರೆ
ಗಜಗಳ ಪಳಗಿಸೊ ನಿನ್ನಯ ಭುಜಬಲಮದವನ್ನು ಕರಗಿಸೋ ನಿನ್ನೆಯ ಮನೋಬಲ
ಛಲದಂಕ ಮಲ್ಲ ನೀನೇ ಮದಗಜ''
ಶ್ರೀಮುರಳಿಯ ಈ ಚಿತ್ರ ನೋಡಿ ದರ್ಶನ್ ಹೊಟ್ಟೆ ಉರಿದುಕೊಂಡಿದ್ರಂತೆ
'ಮದಗಜ' ಸಿನಿಮಾ ಟೈಟಲ್ ಸಾಂಗ್ ಇದಾಗಿದೆ. ಅರ್ಜುನ್ ಜನ್ಯ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. 'ಅಯೋಗ್ಯ' ನಂತರ ಮತ್ತೆ ಅದೇ ಕಾಂಬಿನೇಶನ್ ನಲ್ಲಿ ಈ ಚಿತ್ರದ ಹಾಡುಗಳು ಸಿದ್ಧವಾಗಲಿವೆ.