Don't Miss!
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- News ಸಿಯಾಚಿನ್ ಬಳಿ ಚೀನಾ ಆಕ್ರಮಿತ ಕಾಶ್ಮೀರದಲ್ಲಿ ಹೊಸ ರಸ್ತೆ ನಿರ್ಮಾಣ; ಖಚಿತಪಡಿಸಿದ ಉಪಗ್ರಹ ಚಿತ್ರಗಳು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಜನಿಕಾಂತ್ 'ಲಿಂಗಾ' ಚಿತ್ರದ ರಿಲೀಸ್ ಗೆ ಕಂಟಕ
ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳಿಗಿಲ್ಲಿದೆ ಶಾಕಿಂಗ್ ನ್ಯೂಸ್. ಸೆಟ್ಟೇರಿದಾಗಿನಿಂದಲೂ ದೇಶಾದ್ಯಂತ ಸೆನ್ಸೇಷನ್ ಕ್ರಿಯೇಟ್ ಮಾಡಿ, ಬಿಡುಗಡೆಗೂ ಮುನ್ನ ದಾಖಲೆ ಬರೆದಿರುವ 'ಲಿಂಗಾ' ಚಿತ್ರ ಈಗ ಕೋರ್ಟ್ ಕಟಕಟೆಯಲ್ಲಿದೆ.
ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳು 'ಲಿಂಗಾ' ಚಿತ್ರವನ್ನ ಕುಣ್ತುಂಬಿಕೊಳ್ಳೋಕೆ ತುದಿಗಾಗಲ್ಲಿ ನಿಂತು ಕಾಯ್ತಿದ್ರೆ, ಇತ್ತ ಮದ್ರಾಸ್ ಹೈಕೋರ್ಟ್ 'ಲಿಂಗಾ' ಚಿತ್ರ ಬಿಡುಗಡೆಗೆ ತಡೆಯಾಜ್ಞೆ ನೀಡಿದೆ.
ಯುವ
ನಿರ್ಮಾಪಕ
ಮತ್ತು
ನಿರ್ದೇಶಕ
ಕೆ.ಆರ್.
ರವಿ
ರತ್ನಂ
ಸಲ್ಲಿಸಿರುವ
ಅರ್ಜಿಯ
ಆಧಾರ
ಮೇಲೆ
ಮದ್ರಾಸ್
ಹೈಕೋರ್ಟ್
'ಲಿಂಗಾ'
ಚಿತ್ರದ
ನಿರ್ಮಾಪಕ
ಮತ್ತು
ನಿರ್ದೇಶಕರಿಗೆ
ನೋಟೀಸ್
ಜಾರಿ
ಮಾಡಿದೆ.
ತಮ್ಮ ನಿರ್ದೇಶನ ಮತ್ತು ನಿರ್ಮಾಣದಲ್ಲಿ ಮೂಡಿಬರುತ್ತಿರುವ ''ಮುಲ್ಲೈ ವಾನಂ 999'' ಚಿತ್ರಕಥೆಯನ್ನ ಕದ್ದು 'ಲಿಂಗಾ' ಚಿತ್ರವನ್ನ ರೆಡಿಮಾಡಲಾಗಿದೆ ಅಂತ ಆರೋಪಿಸಿ ಮದ್ರಾಸ್ ಹೈಕೋರ್ಟ್ ನಲ್ಲಿ ಕೆ.ಆರ್. ರವಿ ರತ್ನಂ ದಾವೆ ಹೂಡಿದ್ರು. ಅರ್ಜಿಯನ್ನ ಪುರಸ್ಕರಿಸಿದ ಕೋರ್ಟ್, ಚಿತ್ರಕ್ಕೆ ತಡೆಯಾಜ್ಞೆ ನೀಡಿದೆ.
ಕಳೆದ ಫೆಬ್ರವರಿಯಂದು ''ಮುಲ್ಲೈ ವಾನಂ 999'' ಚಿತ್ರದ ಮುಹೂರ್ತ ನಡೆದದ್ದು, ಚಿತ್ರದ ಕಥಾವಸ್ತು ಬಗ್ಗೆ ಯ್ಯೂಟ್ಯೂಬ್ ಮತ್ತು ಇತರೆ ಅನೇಕ ಸಾಮಾಜಿಕ ಜಾಲತಾಣಗಳಲ್ಲಿ ಕೆ.ಆರ್.ರವಿ ರತ್ನಂ ಪೋಸ್ಟ್ ಮಾಡಿದ್ದರಂತೆ. ಇದನ್ನ ನೋಡಿ, ಲಿಂಗಾ ಚಿತ್ರತಂಡ ತಮ್ಮ ಕೃತಿಚೌರ್ಯ ಮಾಡಿದೆ ಅಂತ ಅರ್ಜಿಯಲ್ಲಿ ಆರೋಪಿಸಿದ್ದಾರೆ.
ಈಗಾಗಲೇ 'ಮುಲ್ಲೈ ವಾನಂ 999'' ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಹೊಸ ವರ್ಷಕ್ಕೆ ತೆರೆಗೆ ಬರ್ಬೇಕಿತ್ತು. ಅಷ್ಟರಲ್ಲಿ, ಲಿಂಗಾ ಚಿತ್ರದ ತುಣುಕಗಳನ್ನ ನೋಡಿ, ಕೆ.ಆರ್. ರವಿರತ್ನಂ ಕೋರ್ಟ್ ಮೆಟ್ಟಿಲೇರಿದ್ದಾರೆ. ವಿಚಾರಣೆಗೆ ಕೋರ್ಟ್ ಅಸ್ತು ಅಂದಿರುವುದರಿಂದ, 'ಲಿಂಗಾ' ಚಿತ್ರಕ್ಕೆ ಕಂಟಕ ಎದುರಾಗಿದೆ. ಮುಂದೇನಾಗುತ್ತೋ ಆ 'ಶಿವ'ನೇ ಬಲ್ಲ. (ಏಜೆನ್ಸೀಸ್)