Just In
- 23 min ago
ಅಕ್ಷಯ್ ಕುಮಾರ್ ನಟನೆಯ 'ಬಚ್ಚನ್ ಪಾಂಡೆ' ಸಿನಿಮಾದ ರಿಲೀಸ್ ಡೇಟ್ ಅನೌನ್ಸ್
- 2 hrs ago
ಕೊರೊನಾ ಸೋಂಕಿನಿಂದ ಬದಲಾಗಿದ್ದ ತಮನ್ನಾ ಈಗ ಮತ್ತೆ ಸಹಜ ಸ್ಥಿತಿಗೆ
- 3 hrs ago
ದುಬಾರಿ ವಿವಾಹ; ವರುಣ್ ಧವನ್ ಮದುವೆ ನಡೆಯುತ್ತಿರುವ ಐಷಾರಾಮಿ ಹೋಟೆಲ್ ಗೆ ಇಷ್ಟೊಂದು ಖರ್ಚು ಮಾಡುತ್ತಿದ್ದಾರಾ?
- 4 hrs ago
ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ ಬಗ್ಗೆ 'ಬಿಗ್ ಬಾಸ್' ಅಕ್ಷತಾ ಪಾಂಡವಪುರ ಹೇಳಿದ್ದೇನು?
Don't Miss!
- Sports
ಐಪಿಎಲ್ 2021: ಮತ್ತೆ ಕಣಕ್ಕಿಳಿಯಲು ವೇಗಿ ಎಸ್ ಶ್ರೀಶಾಂತ್ ಸಜ್ಜು
- News
ನೇತಾಜಿ 125ನೇ ಜನ್ಮದಿನ; ಪರಾಕ್ರಮ ಸ್ಮರಿಸಿ ಗೌರವ ಸಲ್ಲಿಸಿದ ಪ್ರಧಾನಿ ಮೋದಿ
- Finance
ರಿಲಯನ್ಸ್ ಜಿಯೋ ತ್ರೈಮಾಸಿಕ ನಿವ್ವಳ ಲಾಭ ಶೇ. 15.5ರಷ್ಟು ಏರಿಕೆ
- Automobiles
ಟಾಟಾ ಬಹುನೀರಿಕ್ಷಿತ ಆಲ್ಟ್ರೊಜ್ ಐ-ಟರ್ಬೊ ವರ್ಷನ್ ಬಿಡುಗಡೆ
- Lifestyle
ಕೊಲೆಸ್ಟ್ರಾಲ್ ಹೆಚ್ಚಾಗಿದೆಯೇ? ಈ ಆಹಾರ ಸೇವಿಸಿ
- Education
RITES Limited Recruitment 2021: ವಿವಿಧ 9 ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮುಪ್ಪಿನಲ್ಲಿ ಮಹೇಶ್ ಬಾಬು ಜೊತೆ ನಟಿಸೋ ಅವಕಾಶ : ಭಾವುಕರಾದ ಅಜ್ಜ
ಕನ್ನಡದಲ್ಲಿ ಸೆಂಚುರಿ ಗೌಡ ಹಾಗೂ ಗಡ್ಡಪ್ಪ ತಮ್ಮ ಇಳಿ ವಯಸ್ಸಿನಲ್ಲಿ ಸಿನಿಮಾದಲ್ಲಿ ನಟಿಸಿ ಕರ್ನಾಟಕದ ತುಂಬ ಜನಪ್ರಿಯತೆ ಪಡೆದುಕೊಂಡಿದ್ದರು. ಈಗ ಅದೇ ರೀತಿ ಟಾಲಿವುಡ್ ನಲ್ಲಿ ಗುರುಸ್ವಾಮಿ ಎಂಬ ತಾತ ಸಾಕಷ್ಟು ಫೇಮಸ್ ಆಗಿದ್ದಾರೆ.
ಮಹೇಶ್ ಬಾಬು ನಟನೆಯ 'ಮಹರ್ಷಿ' ಸಿನಿಮಾದಲ್ಲಿ ಗುರುಸ್ವಾಮಿ ಎಂಬ ತಾತ ನಟಿಸಿದ್ದಾರೆ. ಸಿನಿಮಾದ ಸೆಂಕೆಂಡ್ ಹಾಫ್ ನಲ್ಲಿ ಆ ತಾತ ಪಾತ್ರ ಬರುತ್ತದೆ. ಕೆಲವೇ ದೃಶ್ಯಗಳು ಇದ್ದರೂ, ಸಿನಿಮಾ ಮುಗಿದ ಮೇಲೆಯೂ ಆ ಪಾತ್ರ ಪ್ರೇಕ್ಷಕರ ಮನಸ್ಸಿನಲ್ಲಿ ಇರುತ್ತದೆ.
ಸ್ಫೂರ್ತಿಯಾಯ್ತು 'ಮಹರ್ಷಿ' ಚಿತ್ರದ 'ವಾರಾಂತ್ಯದ ವ್ಯವಸಾಯ' ಕಾನ್ಸೆಪ್ಟ್
ಇಂತಹ ಪಾತ್ರದ ಮೂಲಕ ಗುರುಸ್ವಾಮಿ ತಾತ ತೆಲುಗು ಪ್ರೇಕ್ಷಕರ ಪ್ರೀತಿ ಪಡೆದಿದ್ದಾರೆ. ತಮ್ಮ ಮುಪ್ಪಿನ ವಯಸ್ಸಿನಲ್ಲಿ ಮಹೇಶ್ ಬಾಬು ಸಿನಿಮಾದಲ್ಲಿ ನಟಿಸುವ ಅವಕಾಶ ನೆನೆದು ಭಾವುಕರಾಗಿದ್ದಾರೆ.
'ಮಹರ್ಷಿ' ಸಿನಿಮಾದ ಸಕ್ಸಸ್ ಮೀಟ್ ನಲ್ಲಿ ಗುರುಸ್ವಾಮಿ ತಾತ ಕೂಡ ಮಾತನಾಡಿದರು. ಅವರ ಭಾವುಕ ಮಾತುಗಳು ನಟ ಮಹೇಶ್ ಬಾಬು ಹಾಗೂ ಇಡೀ ತಂಡದವರ ಮನಸ್ಸು ಮುಟ್ಟಿದವು.
''ನಾನು ಎಲ್ಲಿಂದ ಎಲ್ಲಿಗೆ ಬಂದಿದ್ದೇನೆ. ನನಗೆ
ಕ್ಯಾಮರಾ ಏನು ತಿಳಿಯದು. ಅದರ ಮುಂದೆ ಹೇಗೆ ನಿಂತು ಕೊಳ್ಳಬೇಕು ಎಂಬುದು ತಿಳಿಯದು. ಹೀಗಿದ್ದ ನನಗೆ ಈ ಸಿನಿಮಾದಲ್ಲಿ ನಟಿಸಲು ಹೇಳಿ ಕೊಟ್ಟ ನಿರ್ದೇಶಕರಿಗೆ ಧನ್ಯವಾದ ಎಂದರು.
ಗುರುಸ್ವಾಮಿ ತಾತನ ತಂದೆ ಕೂಲಿ ಮಾಡುತ್ತಿದ್ದರಂತೆ. ಕಷ್ಟ ಪಟ್ಟು ಓದಿ ಒಂದು ಉದ್ಯೋಗ ಪಡೆದರೂ, ಕುಟುಂಬ ಹಣಕಾಸಿನ ಕಷ್ಟ ಅವರಿಗೆ ಬೇಜಾರು ಉಂಟು ಮಾಡಿತ್ತಂತೆ. ಮನೆಯಲ್ಲಿ ಸಮಯ ಕಳೆದರೆ ಮನಸ್ಸಿಗೆ ಆಗುವ ನೋವನ್ನು ದೂರ ಮಾಡಲು ನಾಟಕ, ವೇದಿಕೆ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡರು.
ಹೀಗೆ ಉದ್ಯೋಗ ಮಾಡುತ್ತಲೇ ತನ್ನ ಹವ್ಯಾಸವನ್ನು ಗುರುಸ್ವಾಮಿ ತಾತ ಶುರು ಮಾಡಿದರು. ಯುವಕರ ಜೊತೆ ಸೇರಿ ಒಂದು ಕಿರುಚಿತ್ರದಲ್ಲಿ ನಟಿಸಿದರು. ಇದೇ ಕಿರುಚಿತ್ರ ನೋಡಿದ ನಿರ್ದೇಶಕ ವಂಶಿ 'ಮಹರ್ಷಿ' ಸಿನಿಮಾದ ಒಂದು ಪಾತ್ರಕ್ಕೆ ಅವಕಾಶ ನೀಡಿದರು.
ಹೀಗೆ ಸಿಕ್ಕ ಅವಕಾಶವನ್ನು ತುಂಬ ಚೆನ್ನಾಗಿ ಬಳಸಿಕೊಂಡ ಗುರುಸ್ವಾಮಿ ತಾತ ತಮ್ಮ ಪಾತ್ರದ ಮೂಲಕ ಟಾಲಿವುಡ್ ಜನರ ಮೆಚ್ಚುಗೆ ಪಡೆದಿದ್ದಾರೆ.