ಕಾಂಗ್ರೆಸ್ ಪ್ರಚಾರಕ್ಕಾಗಿ ರಸ್ತೆಗಿಳಿದರು ಸ್ಟಾರ್ ಕಲಾವಿದರು
ಚುನಾವಣೆ ಹತ್ತಿರ ಬರುತ್ತಿದೆ. ರಾಜಕೀಯ ಪಕ್ಷಗಳು ತಮ್ಮದೇ ರೀತಿಯಲ್ಲಿ ಪ್ರಚಾರ ಕಾರ್ಯಗಳನ್ನ ಶುರು ಮಾಡುತ್ತಿವೆ. ಜನರನ್ನ ಯಾವ ರೀತಿಯಲ್ಲಿ ಆಕರ್ಷಣೆ ಮಾಡಲು ಸಾಧ್ಯ ಎನ್ನುವ ಅಂಶಗಳನ್ನ ಹುಡುಕಿ ಸಿನಿಮಾರಂಗದತ್ತ ರಾಜಕೀಯ ವ್ಯಕ್ತಿಗಳು ಮುಖ ಮಾಡಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಸ್ಟಾರ್ ಕಲಾವಿದರು ಪ್ರಚಾರಕ್ಕಾಗಿ ರಸ್ತೆಗಿಳಿಯುತ್ತಿದ್ದಾರೆ. ಇಂದಿನಿಂದ(ಜ.31) ಕಲಾವಿದರು ಪ್ರಚಾರದಲ್ಲಿ ಭಾಗಿ ಆಗಲಿದ್ದಾರೆ. ಚಂದನವನದ ಕನಸಿನ ರಾಣಿ ಮಾಲಾಶ್ರೀ , ಉಮಾಶ್ರೀ ಹಾಗೂ ಹಾಸ್ಯ ಕಲಾವಿದ ಸಾಧುಕೋಕಿಲ ಸದ್ಯ ಕಾಂಗ್ರೇಸ್ ಪಕ್ಷದಿಂದ ಪ್ರಚಾರಕ್ಕೆ ಇಳಿಯುವುದು ಕನ್ಫರ್ಮ್ ಆಗಿದೆ.

ನಟಿ ಮಾಲಾಶ್ರೀ ಅವರಿಗೆ ಕ್ಲಾಸ್ ಮತ್ತು ಮಾಸ್ ಎರಡು ರೀತಿಯ ಅಭಿಮಾನಿಗಳು ಇದ್ದಾರೆ. ಇನ್ನು ಸಾಧುಕೋಕಿಲ ತೆರೆ ಮೇಲೆ ಬಂದರೆ ಸಾಕು ಖುಷಿ ಪಡುವ ಜನರು ಸಾಕಷ್ಟಿದ್ದಾರೆ. ಅದೇ ಕಾರಣದಿಂದ ಇವರಿಬ್ಬರನ್ನ ಸ್ಟಾರ್ ಪ್ರಚಾರಕರನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ.

ಡಿ ಕೆ ಶಿವಕುಮಾರ್ ಈ ಮೂರು ಕಲಾವಿದರನ್ನ ತಮ್ಮ ಪಕ್ಷದ ಪ್ರಚಾರದ ಕೆಲಸಕ್ಕಾಗಿ ಆಹ್ವಾನ ಮಾಡಿದ್ದಾರೆ. ಇವರುಗಳನ್ನ ಬಿಟ್ಟು ಇನ್ನು ಅನೇಕರು ಕಾಂಗ್ರೆಸ್ ಪಕ್ಷದ ಪರವಾಗಿ ಓಟು ಕೇಳಲು ನಿಮ್ಮ ಮನೆಯ ಬಾಗಿಲಿಗೆ ಬರಲಿದ್ದಾರೆ.


Click it and Unblock the Notifications











