Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಾಲಿವುಡ್ ನಲ್ಲಿ ಅರಳಲಿದೆ ಕನ್ನಡದ 'ಕೆಂಡಸಂಪಿಗೆ'
Recommended Video
ಕೆಂಡ ಸಂಪಿಗೆ ಸಿನಿಮಾ ಮೂಲಕ ಚಂದನವನದಲ್ಲಿ ಭರವಸೆ ಮೂಡಿಸಿದ ನಟಿ ಮಾನ್ವಿತಾ ಹರೀಶ್. ಅಭಿನಯ ಮಾಡಿದ ಮೊದಲ ಚಿತ್ರದಲ್ಲಿ ಕನ್ನಡಿಗ ಮನಸ್ಸು ಗೆದ್ದ ನಟಿ. ಅದಾದ ನಂತರ ಹಲವಾರು ಚಿತ್ರಗಳಲ್ಲಿ ನಟಿಸಿದರೂ ಕೂಡ ಮಾನ್ವಿತಾ ಅಭಿನಯಕ್ಕೆ ತಕ್ಕ ಸಿನಿಮಾ ಎನ್ನಿಸಿದ್ದು ಟಗರು. ಟಗರು ಚಿತ್ರದ ಅಭಿನಯಕ್ಕೆ ಕನ್ನಡ ಚಿತ್ರರಂಗ ಮಾತ್ರವಲ್ಲದೆ ಅಕ್ಕ ಪಕ್ಕದ ಇಂಡಷ್ಟ್ರಿಯವರು ಮನಸೋತ್ತಿದ್ದಾರೆ.
ಕಳೆದವಾರದಲ್ಲಿ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮ ಸಿನಿಮಾ ನೋಡಿ ಮಾನ್ವಿತಾ ಅಭಿನಯವನ್ನ ಮೆಚ್ಚಿಕೊಂಡಿದ್ದರು. ಅದಷ್ಟೇ ಅಲ್ಲದೆ ಮುಂದಿನ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಲು ಅವಕಾಶ ನೀಡಿ ಎರಡು ಸಾವಿರದ ನೋಟಿನ ಮೇಲೆ ಸಹಿ ಹಾಕಿ ಮಾನ್ವಿತಾ ಅವರಿಗೆ ಕೊಟ್ಟಿದ್ದರು. ಈ ಸುದ್ದಿ ಇನ್ನು ಚಾಲ್ತಿಯಲ್ಲಿರುವಾಗಲೇ ಮಾನ್ವಿತಾ ಅಭಿಮಾನಿಗಳಿಗೆ ಸಿಹಿಯಾದ ಸುದ್ದಿ ಸಿಕ್ಕಿದೆ.
ಆರ್.ಜಿ.ವಿ ಚಿತ್ರದಲ್ಲಿ ಮಾನ್ವಿತಾ ನಾಯಕಿ: ಸಂಭಾವನೆ ಎಷ್ಟು ಅಂತ ಗೊತ್ತಾದ್ರೆ ಸುಸ್ತಾಗ್ತೀರಾ!
ಟಗರು ಪುಟ್ಟಿ ಇನ್ನು ಕೆಲವೇ ದಿನಗಳಲ್ಲಿ ಕಾಲಿವುಡ್ ಅಂಗಳಕ್ಕೆ ಕಾಲಿಡುತ್ತಿದ್ದಾರೆ. ಈಗಾಗಲೇ ತಮಿಳು ಚಿತ್ರರಂಗದಿಂದ ಮಾನ್ವಿತಾ ಅವರಿಗೆ ಆಫರ್ ಗಳು ಬರಲಾರಂಭಿಸಿದ್ದು ಟ್ವಿಟ್ಟರ್ ಫೇಸ್ ಬುಕ್ ನಲ್ಲಿ ಮಾನ್ವಿತಾಗೆ ಕಾಲಿವುಡ್ ಮಂದಿ ಸಂಭ್ರಮದಿಂದ ಬರಮಾಡಿಕೊಳ್ಳುತ್ತಿದ್ದಾರೆ.
ಆದರೆ ಮಾನ್ವಿತಾ ಯಾವ ಚಿತ್ರದಲ್ಲಿ ಅಭಿನಯ ಮಾಡುತ್ತಿದ್ದಾರೆ ಎನ್ನುವುದರ ಬಗ್ಗೆ ಮಾತ್ರ ಇನ್ನು ಸುಳಿವು ನೀಡಿಲ್ಲ. ಈಗಾಗಲೇ ಸಾಕಷ್ಟು ಕನ್ನಡ ಕಲಾವಿದರು ಕಾಲಿವುಡ್ ನಲ್ಲಿ ಗುರುತಿಸಿಕೊಂಡಿದ್ದು ಮಾನ್ವಿತಾ ಕೂಡ ತಮಿಳು ಚಿತ್ರರಂಗದಲ್ಲಿ ಮಿಂಚು ಹರಿಸಲಿದ್ದಾರೆ ಎನ್ನುವ ಸೂಚನೆಯಂತೂ ಕನ್ನಡಿಗರಿಗೆ ಸಿಕ್ಕಿದೆ.
ಟಾಲಿವುಡ್ ಅಂಗಳದಲ್ಲಿ ಶುರುವಾಗಲಿದೆ 'ಸುಕ್ಕಾ ಸುರಿ' ದರ್ಬಾರ್