ನನಗೆ ಅವಳಿ ಮಕ್ಕಳಾಗಬೇಕು ಎನ್ನುವ ಆಸೆಯಿತ್ತು; ನಟಿ ಮೇಘನಾ ರಾಜ್
ಮೇಘನಾ ರಾಜ್ ಮುದ್ದು ಪುತ್ರನಿಗೆ ಇಂದು ತೊಟ್ಟಿಲು ಶಾಸ್ತ್ರ ಮಾಡಲಾಗಿದೆ. ಶಾಸ್ತ್ರೋಕ್ತವಾಗಿ ಹಿರಿಯರ, ಗುರುಗಳ ಸಮ್ಮುಖದಲ್ಲಿ ಈ ಕಾರ್ಯವನ್ನು ನೆರವೇರಿಸಲಾಗಿದೆ.
Recommended Video
ಮೇಘನಾ ರಾಜ್ ಕಳೆದ ತಿಂಗಳು ಅಕ್ಟೋಬರ್ 22ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇದೀಗ 20 ದಿನಗಳ ಬಳಿಕ ಮೇಘನಾ ಮನೆಯಲ್ಲಿ ತೊಟ್ಟಿಲ ಶಾಸ್ತ್ರದ ಕಾರ್ಯಕ್ರಮವನ್ನು ಮಾಡಲಾಗಿದೆ. ಬೆಂಗಳೂರಿನ ಜೆಪಿ ನಗರದ ನಿವಾಸದಲ್ಲಿ ಮೇಘನಾ ರಾಜ್ ಮುದ್ದಾದ ಮಗುವಿಗೆ ತೊಟ್ಟಿಲ ಶಾಸ್ತ್ರ ಸಮಾರಂಭ ನಡೆಸಲಾಗಿದೆ.
ಇದೆ ಸಮಯದಲ್ಲಿ ಮೇಘನಾ ರಾಜ್ ಮಾಧ್ಯಮದವರ ಜೊತೆ ಮಾತನಾಡಿದ್ದಾರೆ. ಚಿರಂಜೀವಿ ನಿಧನದ ಬಳಿಕ ಮೇಘನಾ ಮೊದಲ ಬಾರಿಗೆ ಮನಬಿಚ್ಚಿ ಮಾತನಾಡಿದ್ದಾರೆ. ಅವಳಿ ಮಕ್ಕಳಾಗಬೇಕು ಎನ್ನುವ ಆಸೆ ಇತ್ತು ಎಂದು ಹೇಳಿದ್ದಾರೆ. ಮೇಘನಾ ರಾಜ್ ಗೆ ಅವಳಿ ಮಕ್ಕಳು ಎನ್ನುವ ಸುದ್ದಿ ವೈರಲ್ ಆಗಿತ್ತು. ಎಲ್ಲರೂ ಮೇಘನಾಗೆ ಅವಳಿ ಮಕ್ಕಳು ಅಂತನೆ ಅಂದುಕೊಂಡಿದ್ದರು. ಈ ಬಗ್ಗೆ ಮೇಘನಾ ಮಾತನಾಡಿದ್ದಾರೆ.

'ಅವಳಿ ಮಕ್ಕಳಾಗುತ್ತೆ ಎಂದು ಅನೇಕರು ಫೋಟೋಗಳನ್ನು ಎಡಿಟ್ ಮಾಡಿ ವೈರಲ್ ಮಾಡಿದ್ದರು. ನನಗೆ ಎಲ್ಲೋ ಭರವಸೆ ಇತ್ತು. ಯಾಕೆಂದರೆ ಸಿಂಗಲ್ ಮಗು ಎಂದು ಹೇಳಿ, ಬಳಿಕ ಹೆರಿಗೆ ಸಮಯದಲ್ಲಿ ಅವಳಿ ಮಕ್ಕಳಾಗಿತ್ತು ಎನ್ನುವ ಸುದ್ದಿ ಕೇಳಿದ್ದೆ. ಹಾಗಾಗಿ ನನಗೂ ಎಲ್ಲೋ ಒಂದು ಕಡೆ ಬರವಸೆ ಇತ್ತು.'
'ನಾನು ಡಾಕ್ಟರ್ ನ ಮೊದಲು ಕೇಳಿದ್ದು, ಅವಳಿ ಮಕ್ಕಳಾಗುತ್ತಾ ಅಂತ. ನನಗೆ ಅವಳಿ ಮಕ್ಕಳಾಗಬೇಕು ಎನ್ನುವ ಆಸೆ ಇತ್ತು. ಡಾಕ್ಟರ್ ನ ಕೇಳುತ್ತಿದ್ದೆ, ಮಿರಾಕಲಿ ಅವಳಿ ಮಕ್ಕಳು ಆಗಿಬಿಟ್ಟಿದ್ದರೆ ಚೆನ್ನಾಗಿರುತ್ತಿತ್ತು. ಆದರೆ ಅವಳಿ ಮಕ್ಕಳಿಗಿಂತ ಹೆಚ್ಚಾಗಿ ಅವನೊಬ್ಬನೆ ಬಂದಿದ್ದಾನೆ' ಎಂದು ಖುಷಿ ಪಟ್ಟರು.


Click it and Unblock the Notifications











