Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಕನ್ನಡಿಗರ ಶಕ್ತಿ ಏನೆಂದು ಅವರಿಗೆ ತೋರಿಸೋಣ'
'ನಮ್ಮ ನೀರಾವರಿ ಯೋಜನೆಗೆ ತಮಿಳುನಾಡಿನವರನ್ನು ಏಕೆ ಕೇಳಬೇಕು?, ಕನ್ನಡಿಗರು ಎಲ್ಲರೂ ಒಂದಾಗಿ ಅವರಿಗೆ ತಕ್ಕ ಪ್ರತ್ಯುತ್ತರ ನೀಡುವ ಅನಿವಾರ್ಯತೆ ಎದುರಾಗಿದೆ' ಇದು ಕರ್ನಾಟಕ ಬಂದ್ ವೇಳೆ ನಟ ಜಗ್ಗೇಶ್ ಹೇಳಿದ ಮಾತುಗಳು.
ಕರ್ನಾಟಕ
ಸರ್ಕಾರದ
ಮೇಕೆದಾಟು
ಯೋಜನೆ
ವಿರೋಧಿಸುತ್ತಿರುವ
ತಮಿಳುನಾಡು
ಕ್ರಮ
ಖಂಡಿಸಿ
ಏ.18ರ
ಶನಿವಾರ
ವಿವಿಧ
ಕನ್ನಡ
ಪರ
ಸಂಘಟನೆಗಳು
ಕರ್ನಾಟಕ
ಬಂದ್ಗೆ
ಕರೆ
ನೀಡಿವೆ.
ತುಮಕೂರಿನಲ್ಲಿ
ಮಾತನಾಡಿದ
ಜಗ್ಗೇಶ್,
'ಕುಡಿಯುವ
ನೀರನ್ನು
ಕಿತ್ತುಕೊಳ್ಳುವ
ತಮಿಳುನಾಡು
ಮನೋಭಾವ
ಅವರಿಗೆ
ಶೋಭೆ
ತರುವುದಿಲ್ಲ'
ಎಂದು
ಕಿಡಿ
ಕಾರಿದರು.
'ನಮ್ಮ ಕಾವೇರಿ ನಮ್ಮ ನೀರನ್ನು ಬಳಸಿಕೊಳ್ಳಲು ತಮಿಳುನಾಡಿನವರನ್ನು ಏಕೆ ಕೇಳಬೇಕು?. ಇಂತಹ ಪರಿಸ್ಥಿತಿ ಎದುರಾದಾಗ ಕನ್ನಡಿಗರೆಲ್ಲರೂ ಒಂದಾಗಿ ಅವರಿಗೆ ಪ್ರತ್ಯುತ್ತರ ನೀಡಬೇಕು. ಅನಿವಾರ್ಯವಾಗಿ ಹಕ್ಕಿಗಾಗಿ ಹೋರಾಟ ಮಾಡಬೇಕಾದ ಪರಿಸ್ಥಿತಿ ಬಂದಿದೆ' ಎಂದು ಬೇಸರ ವ್ಯಕ್ತಪಡಿಸಿದರು.[ಕರ್ನಾಟಕ ಬಂದ್ : ಕ್ಷಣ-ಕ್ಷಣದ ಮಾಹಿತಿ]
'ಹಿಂದೆ ಅಣ್ಣಾವ್ರು ಇದ್ದಾಗ ನೆಲ, ಜಲ, ಭಾಷೆ ವಿಷಯ ಬಂದಾಗ ಹೋರಾಟಕ್ಕೆ ಧುಮುಕುತ್ತಿದ್ದರು. ಅಂತಹ ನಾಯಕತ್ವ ಇಂದು ನಮಗೆ ಸಿಗುತ್ತಿಲ್ಲಾ, ಆದರೆ, ಕನ್ನಡ ಚಿತ್ರರಂಗದ ಕಲಾವಿದರಾದ ನಾವು ನಾಡಿನ ವಿಷಯದಲ್ಲಿ ರಾಜಿ ಮಾಡಿಕೊಳ್ಳದೇ ಎಲ್ಲರೂ ಒಂದಾಗಬೇಕು' ಎಂದು ಕರೆ ನೀಡಿದರು.