ಸಂಪಿಗೆ ಚಿತ್ರಮಂದಿರದಲ್ಲಿ ತಮಿಳು ನಟ ವಿಜಯ್ ಸಿನಿಮಾ ಪ್ರದರ್ಶನ ರದ್ದು.!
ಬೆಂಗಳೂರಿನ ಸಂಪಿಗೆ ಚಿತ್ರಮಂದಿರದ ಬಳಿ ಕನ್ನಡಿಗರ ಮೇಲೆ ತಮಿಳು ನಟ ವಿಜಯ್ ಅಭಿಮಾನಿಗಳಿಂದ ಹಲ್ಲೆಗೆ ಸಂಬಂಧಿಸಿದಂತೆ ಈಗ 'ಮೆರ್ಸಲ್' ಚಿತ್ರದ ಪ್ರದರ್ಶನ ರದ್ದುಗೊಳಿಸಲಾಗಿದೆ.
ನಿನ್ನೆ (ಅಕ್ಟೋಬರ್ 17) ರಂದು ವಿಜಯ್ ಸಿನಿಮಾ ಬಿಡುಗಡೆ ಹಿನ್ನೆಲೆ ಚಿತ್ರಮಂದಿರದ ಎದುರು ಕಟೌಟ್ ಹಾಕಲಾಗುತ್ತಿದ್ದ ವೇಳೆ, ರಸ್ತೆಯಲ್ಲಿ ಚಲಿಸುತ್ತಿದ್ದ ಇಬ್ಬರು ಕನ್ನಡಿಗರು ಕಟೌಟ್ ನ ನೋಡಿದ್ದಾರೆ. ಈ ಕಾರಣಕ್ಕೆ ''ನಮ್ಮ ಬಾಸ್ ಕಟೌಟ್''ನ ತಲೆಎತ್ತಿ ನೋಡ್ತೀರಾ ಎಂದು ಹೇಳಿ ತಮಿಳಿಗರು ದೈಹಿಕ ಹಲ್ಲೆ ಮಾಡಿದ್ದರು.

ಇದಾದ ಬಳಿಕ ಇಂದು ಬೆಳಿಗ್ಗೆ ಸಾರಾ ಗೋವಿಂದು, ಪ್ರವೀಣ್ ಶೆಟ್ಟಿ, ಶಿವರಾಮೇ ಗೌಡ ಸೇರಿದಂತೆ ಹಲವು ಕನ್ನಡ ಪರ ಸಂಘಟನೆ ಕಾರ್ಯಕರ್ತರು ಚಿತ್ರಮಂದಿರದ ಎದುರು ಪ್ರತಿಭಟನೆ ನಡೆಸಿದ್ದರು. ಬೆಳಿಗ್ಗೆ ಶೋ ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಂಡಿತ್ತಾದರೂ, ಮಧ್ಯಾಹ್ನದ ನಂತರ 'ಮೆರ್ಸಲ್' ಪ್ರದರ್ಶನ ರದ್ದುಗೊಳಿಸಲಾಗಿದೆ.

ತದ ನಂತರ ಚಿತ್ರಮಂದಿರಕ್ಕೆ ವಾಟಳ್ ನಾಗರಾಜ್ ಕೂಡ ಭೇಟಿ ಕೊಟ್ಟು ಈ ಹಲ್ಲೆ ಮಾಡಿದವರು ವಿರುದ್ಧ ಕಿಡಿಕಾರಿದ್ದಾರೆ. ಅಷ್ಟೇ ಅಲ್ಲದೇ ಆರೋಪಿಗಳನ್ನ ಬಂಧಿಸಿದೇ ಇದಲ್ಲಿ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ.


Click it and Unblock the Notifications











