Don't Miss!
- News Namma Metro: 2023-24ರಲ್ಲಿ ಮೆಟ್ರೋ ವಾರ್ಷಿಕ ಆದಾಯದಲ್ಲಿ ಭಾರೀ ಏರಿಕೆ: ಖರ್ಚು-ಆದಾಯದ ಮಾಹಿತಿ?
- Automobiles Kia Carens: ಗ್ಲೋಬಲ್ ಎನ್ಸಿಎಪಿ ಸುರಕ್ಷತಾ ಪರೀಕ್ಷೆ.. 3-ಸ್ಟಾರ್ ಪಡೆದ ಕಿಯಾ ಕ್ಯಾರೆನ್ಸ್
- Sports IPL 2024: ಮುಂಬೈ ಇಂಡಿಯನ್ಸ್ ವಿರುದ್ಧ ಶತಕ; ರೋಹಿತ್, ಕೊಹ್ಲಿಗೆ ಕ್ರೆಡಿಟ್ ನೀಡಿದ ಯಶಸ್ವಿ ಜೈಸ್ವಾಲ್!
- Technology Itel: ಭಾರತದಲ್ಲಿ ಐಟೆಲ್ S24 ಲಾಂಚ್! 108MP ಕ್ಯಾಮೆರಾ.. ಬೆಲೆ ಇಷ್ಟೇ
- Lifestyle ಪ್ರವಾಹಕ್ಕೆ ಕಾರಣವಾಗೋದು ಮಳೆಯಲ್ಲ ಬೇಸಿಗೆಯ ಬಿಸಿಲು..! ನಂಬಲು ಸಾಧ್ಯವಿಲ್ಲ ಅಂದ್ರೆ ಈ ವಿಡಿಯೋ ನೋಡಿ..!
- Finance ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 10 ಹಳದಿ ಅನಕೊಂಡ ಸಹಿತ ವ್ಯಕ್ತಿ ಬಂಧನ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚೆನ್ನೈ ರೂಪದರ್ಶಿ ಬಿದುಶಿ ಮುಂಬೈನಲ್ಲಿ ಹತ್ಯೆ
ಕೊಲೆಯಾದ ದಿನ ಆಕೆ ತನ್ನ ಅಪಾರ್ಟ್ಮೆಂಟ್ನಲ್ಲಿ ಒಬ್ಬಂಟಿಯಾಗಿದ್ದುಯಾವುದೇ ಮೊಬೈಲ್ ಕರೆಗಳನ್ನು ಸ್ವೀಕರಿಸುತ್ತಿರಲಿಲ್ಲ ಎಂದು ಆಕೆಯ ಪತಿ ಕೇದಾರ್ ಬರ್ಡೆ ಹೇಳಿದ್ದಾರೆ.
ಪತಿ ಕೇದಾರ್ ಅನೇಕ ಬಾರಿ ಫೋನ್ ಮಾಡಿದಾಗಲೂ ಆ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಕೆಲಸದಾಕೆ ಬಾಗಿಲು ಬಡಿದಾಗಲೂ ಬಾಗಿಲು ತೆಗೆಯಲಿಲ್ಲ. ಪತಿ ಕಚೇರಿಯಿಂದ ಸಂಜೆ ಹಿಂದಿರುಗಿದಾಗ ಮನೆಯಲ್ಲಿ ಬಿದುಶಿ ಶವವಾಗಿ ಬಿದ್ದಿರುವುದು ಕಂಡುಬಂದಿದೆ.
ಆದರೆ, ಕೊಲೆಗೂ ಮುನ್ನ ಆಕೆಗೆ ನೂರಾರು ಮಿಸ್ ಕಾಲ್ ಗಳು ಬಂದಿದೆ. ಈ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.
ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ಕೇದಾರ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದ ಬಿದುಶಿ ಅವರು ಪತಿಯೊಂದಿಗೆ ಈ ಅಪಾರ್ಟ್ಮೆಂಟ್ಗೆ ಕಳೆದ 18 ತಿಂಗಳಿನಿಂದ ವಾಸವಿದ್ದರು.
ಬಿದುಶಿ
ಸಕ್ಕರೆ
ಕಾಯಿಲೆಯಿಂದ
ನರಳುತ್ತಿದ್ದರು.
ಲೋ
ಶುಗರ್
ಆಗಿ
ತಲೆ
ಸುತ್ತಿ
ಬಿದ್ದು
ಗಾಜಿನ
ಮೇಲೆ
ಬಿದ್ದಿರುವ
ಸಾಧ್ಯತೆಯಿದೆ
ಎಂದು
ಪೊಲೀಸರು
ಆರಂಭ
ದಲ್ಲಿ
ಶಂಕೆ
ವ್ಯಕ್ತಪಡಿಸಿದ್ದರು.
ಆದರೆ,
ಆಕೆ
ದೇಹದ
ಮೇಲಾಗಿರುವ
ಗಾಯಗಳಿಂದ
ಹತ್ಯೆ
ನಡೆದಿರುವುದು
ಮರಣೋತ್ತರ
ಪರೀಕ್ಷೆಯ
ವರದಿಯಲ್ಲಿ
ಸಾಬೀತಾಗಿದೆ.
ಘಟನೆ ನಡೆದಾಗ ಮನೆಯ ಲೈಟ್ಗಳು ಸ್ವಿಚ್ ಆಫ್ ಆಗಿದ್ದವು. ಆದರೆ ಟೆಲಿವಿಷನ್ ಮಾತ್ರ ಆನ್ ಆಗಿತ್ತು. ಬಾತ್ರೂಂನಿಂದ ಬೆಡ್ರೂಂಗೆ ಹೋಗುವ ದಾರಿಯಲ್ಲಿಬಿದುಶಿ ರಕ್ತದ ಮಡುವಿನಲ್ಲಿ ಶವವಾಗಿ ಬಿದ್ದಿರುವುದು ಕಂಡುಬಂತು. ಆಕೆಯ ಸನಿಹದಲ್ಲಿ ಇದ್ದ ಗಾಜಿನ ಬೀರು ಒಡೆದಿತ್ತು. ಮುಖ ಹಾಗೂ ಕತ್ತಿನ ಮೇಲೆ ಗಾಜಿನಿಂದಸೀಳಿದ ಗುರುತುಗಳಿದ್ದವು ಎಂದು ಪೊಲೀಸರು ಹೇಳಿದ್ದಾರೆ. ಹಲವು ತಮಿಳು ಚಲನಚಿತ್ರಗಳಲ್ಲಿ ನಟಿಸಿದ್ದ ಬಿದುಶಿ ಸದ್ಯ ಮುಂಬಯಿಯಲ್ಲಿ ರೂಪದರ್ಶಿಯಾಗಿದ್ದರು.