Don't Miss!
- News Bengaluru-Tumkur Metro: 52.41 ಕಿ.ಮೀ. ಮಾರ್ಗ, 19 ನಿಲ್ದಾಣಗಳು; ತುಮಕೂರು-ಬೆಂಗಳೂರು ಮೆಟ್ರೋ ಅಪ್ಡೇಟ್
- Lifestyle ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಗಳಿಗಾಗಿ ಕಾರು ಮಾರಾಟಕ್ಕಿಟ್ಟ ನಟಿ ರಾಗಿಣಿ ಪೋಷಕರು
ನಟಿ ರಾಗಿಣಿ ದ್ವಿವೇದಿ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರಿಂದ ಬಂಧಿತರಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಸೆಪ್ಟೆಂಬರ್ 4 ರಂದು ನಟಿ ರಾಗಿಣಿ ಮನೆ ಮೇಲೆ ದಾಳಿ ನಡೆಸಿದ್ದ ಸಿಸಿಬಿ ಪೊಲೀಸರು ನಂತರ ರಾಗಿಣಿಯನ್ನು ವಿಚಾರಣೆಗೆ ಕರೆಸಿ ಬಂಧಿಸಿದ್ದರು. ಜಾಮೀನಿಗಾಗಿ ನಟಿ ರಾಗಿಣಿ ಸತತ ಪ್ರಯತ್ನಗಳನ್ನು ಮಾಡುತ್ತಿದ್ದಾರಾದರೂ ಈ ವರೆಗೆ ಜಾಮೀನು ದೊರೆತಿಲ್ಲ. ಜಾಮೀನು ದೊರೆಯುವುದು ಸುಲಭ ಕಾರ್ಯದಂತಿಲ್ಲ.
ಆದರೆ ರಾಗಿಣಿ ಪೋಷಕರು ಮಗಳನ್ನು ಆದಷ್ಟು ಶೀಘ್ರವಾಗಿ ಜೈಲಿನಿಂದ ಹೊರಗೆ ಕರೆದುಕೊಂಡು ಬರಲು ಹರಸಾಹಸ ಪಡುತ್ತಿದ್ದು, ಕಾನೂನು ಸಮರಕ್ಕೆ ಅವರಿಗೆ ಹಣಕಾಸು ಮುಗ್ಗಟ್ಟು ಎದುರಾಗಿದೆ. ಹಾಗಾಗಿ ಕಾರು ಮಾರಾಟ ಮಾಡುತ್ತಿದ್ದಾರೆ.
ಯಲಹಂಕದಲ್ಲಿರುವ ಫ್ಲ್ಯಾಟ್ ಮಾರಾಟ
ಈ ಮೊದಲು ಯಲಹಂಕದಲ್ಲಿರುವ ಫ್ಲ್ಯಾಟ್ ಅನ್ನು ಮಾರಾಟ ಮಾಡಲು ಯೋಚಿಸಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಹಾಗಾಗಿ ಈಗ ತಮ್ಮ ಎರಡು ಕಾರನ್ನು ಮಾರಾಟ ಮಾಡಿ, ಮುಂದಿನ ಕಾನೂನು ಸಮರಕ್ಕೆ ಹಣಕಾಸು ಹೊಂದಿಸುವ ಯತ್ನದಲ್ಲಿದ್ದಾರೆ.
ಇನ್ನೊವಾ ಹಾಗೂ ಎಸ್ಎಕ್ಸ್ 4 ಕಾರು ಮಾರಾಟ
ರಾಗಿಣಿ ಓಡಾಡಲು ಬಳಸುತ್ತಿದ್ದ ಬಿಳಿ ಬಣ್ಣದ ಇನ್ನೋವಾ ಕಾರು ಹಾಗೂ ಎಸ್ಎಕ್4 ಕಾರನ್ನು ರಾಗಿಣಿ ಪೋಷಕರು ಮಾರಾಟ ಮಾಡಲು ನಿರ್ಧರಿಸಿದ್ದು, ತಮ್ಮ ಪರಿಚಯದವರಿಗೆ ಕಾರಿನ ಫೊಟೊಗಳು, ಬೆಲೆ, ತಮಗಿರುವ ತುರ್ತು ಪರಿಸ್ಥಿತಿಯನ್ನು ವಿವರಿಸಿ ಸಂದೇಶ ಕಳಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ಇನ್ನೊವಾ ಕಾರಿಗೆ 9 ಲಕ್ಷ ಬೆಲೆ ನಿಗದಿ
ರಾಗಿಣಿ ಬಳಸುತ್ತಿದ್ದ ಇನ್ನೊವಾ ಕಾರಿಗೆ 9 ಲಕ್ಷ, ಎಸ್ಎಕ್ಸ್ 4 ಕಾರಿಗೆ 4 ಲಕ್ಷ ಬೆಲೆ ನಿಗದಿ ಪಡಿಸಿದ್ದಾರೆ. ಹಣದ ಅವಶ್ಯಕತೆ ತುರ್ತಾಗಿ ಇರುವ ಕಾರಣ ಕಡಿಮೆ ಬೆಲೆಗೆ ಕಾರನ್ನು ಮಾರಲು ಮುಂದಾಗಿದ್ದಾರೆ ರಾಗಿಣಿ ಪೋಷಕರು.
Recommended Video
ಜಾಮೀನು ಅರ್ಜಿ ವಜಾ ಮಾಡಿರುವ ಹೈಕೋರ್ಟ್
ನಟಿ ರಾಗಿಣಿ, ಸಂಜನಾ ಗಲ್ರಾನಿ ಸೇರಿದಂತೆ ಇನ್ನೂ ಹಲವು ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕೆಲವು ದಿನಗಳ ಹಿಂದಷ್ಟೆ ಹೈಕೋರ್ಟ್ ವಜಾ ಮಾಡಿದೆ. ಜಾಮೀನಿಗಾಗಿ ಸುಪ್ರೀಂ ಕೋರ್ಟ್ಗೆ ಹೋಗುವ ಅವಕಾಶ ಇದೆ.