Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟ ಮುಖ್ಯಮಂತ್ರಿ ಚಂದ್ರು ಮಗ ಹೀರೋ ಆಗಿ ಬಂದ್ರು
Recommended Video
ಇತ್ತೀಚಿಗಷ್ಟೆ ಪೋಷಕ ನಟಿ ಮಾರಿಮುತ್ತು ಖ್ಯಾತಿಯ ಸರೋಜಮ್ಮ ಅವರ ಮೊಮ್ಮಗಳು ಜಯಶ್ರೀ ಆರಾಧ್ಯ ಚಿತ್ರರಂಗಕ್ಕೆ ಬಂದಿದ್ದರು. ಅದರ ಹಿಂದೆಯೇ ಈಗ ಕನ್ನಡದ ಖ್ಯಾತ ಪೋಷಕ ನಟರಾದ ಮುಖ್ಯಮಂತ್ರಿ ಚಂದ್ರು ಅವರ ಕುಟುಂಬ ಕುಡಿ ಸಿನಿಮಾರಂಗಕ್ಕೆ ಬರಲು ಸಜ್ಜಾಗಿ ನಿಂತಿದೆ.
ನಟ ಮುಖ್ಯಮಂತ್ರಿ ಚಂದ್ರು ಅವರ ಮಗನ ಹೆಸರು ಶರತ್. ಶರತ್ ಅವರನ್ನು ಕೂಡ ಒಬ್ಬ ನಟ ಮಾಡಬೇಕು ಎಂಬುದು ಮುಖ್ಯಮಂತ್ರಿ ಚಂದ್ರು ಅವರ ಬಹು ವರ್ಷದ ಕನಸಾಗಿತ್ತು. ಅದೇ ರೀತಿ ಅವರ ಕನಸು ಈಗ ನನಸಾಗುವ ಸಮಯ ಬಂದಿದೆ. ಯಾಕಂದ್ರೆ ಈ ಹಿಂದೆ ಕೆಲವು ಸಿನಿಮಾದಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿದ್ದ ಮುಖ್ಯಮಂತ್ರಿ ಚಂದ್ರು ಪುತ್ರ ಶರತ್ ಈಗ ಮೊದಲ ಬಾರಿಗೆ ಹೀರೋ ಆಗಿದ್ದಾರೆ. ಅಪ್ಪನ ರೀತಿ ಹೆಸರು ಮಾಡುವ ಕನಸು ಹೊತ್ತು ಶರತ್ ಈಗ ಸ್ಯಾಂಡಲ್ ವುಡ್ ಕೋಟೆ ಒಳಗೆ ಬಂದಿದ್ದಾರೆ. ಮುಂದೆ ಓದಿ...
ಹೀರೋ ಆದ ಶರತ್
ಮುಖ್ಯ ಮಂತ್ರಿ ಚಂದ್ರು ಅವರ ಮಗ ಶರತ್ ಈಗ ಹೀರೋ ಆಗಿ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದಾರೆ. ನೋಡುವುದಕ್ಕೆ ತುಂಬ ಸುಂದರವಾಗಿರುವ ಈ ಹುಡುಗ ಹೀರೋ ಆಗುವುದಕ್ಕೆ ಹೇಳಿ ಮಾಡಿಸಿದ ಹಾಗೆ ಇದ್ದಾರೆ.
ಸುದೀಪ್ ಸಿನಿಮಾದಲ್ಲಿ ನಟನೆ
ಶರತ್ ಈ ಹಿಂದೆ ನಟ ಕಿಚ್ಚ ಸುದೀಪ್ ಅವರ 'ರನ್ನ' ಸಿನಿಮಾದಲ್ಲಿ ಒಂದು ಪಾತ್ರ ಮಾಡಿದ್ದರು. ಅಷ್ಟೆ ಅಲ್ಲದೆ ಬಹುನಿರೀಕ್ಷಿತ 'ದಿ ವಿಲನ್' ಸಿನಿಮಾದಲ್ಲಿಯೂ ಒಂದು ಮುಖ್ಯ ಪಾತ್ರದಲ್ಲಿ ಶರತ್ ಕಾಣಿಸಿಕೊಂಡಿದ್ದಾರೆ.
ನಿರ್ದೇಶನ
ವಿನಯ್ ಭಾರಧ್ವಜ್ ತಮ್ಮ ಮೊದಲ ನಿರ್ದೇಶಕದ ಸಿನಿಮಾಗೆ ಹೀರೋ ಆಗಿ ಶರತ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ವಿನಯ್ ಈ ಹಿಂದೆ ಶಾರ್ಟ್ ಫಿಲ್ಮ್ ಗಳನ್ನು ಮಾಡಿದ್ದು, ಕೆಲವು ಜನಪ್ರಿಯ ಸಿನಿಮಾ ಕಾರ್ಯಕ್ರಮಗಳನ್ನು ಹೊಸ್ಟ್ ಮಾಡಿದ್ದರು.
'ಚಂದ್ರು' ಮಕ್ಕಳು
ಮುಖ್ಯಮಂತ್ರಿ ಚಂದ್ರು ಅವರ ಮಗ ಶರತ್ ಸಿನಿಮಾದಲ್ಲಿ ಇಬ್ಬರು ನಾಯಕಿಯರು ಅವರಿಗೆ ಜೊತೆಯಾಗಲಿದ್ದಾರೆ. ಅದರ ಪೈಕಿ ಸಿಹಿ ಕಹಿ ಚಂದ್ರು ಮಗಳು ಹಿತಾ ಚಂದ್ರಶೇಖರ್ ಕೂಡ ಒಬ್ಬರಾಗಿದ್ದಾರೆ.
ರೊಮ್ಯಾಂಟಿಕ್ ಕಾಮಿಡಿ ಸಿನಿಮಾ
ಶರತ್ ಅವರ ಈ ಹೊಸ ಸಿನಿಮಾ ಒಂದು ರೊಮ್ಯಾಂಟಿಕ್ ಕಾಮಿಡಿ ಚಿತ್ರವಾಗಿದೆ. ಇನ್ನು ಸಿನಿಮಾಗೆ ಟೈಟಲ್ ಫಿಕ್ಸ್ ಆಗಿಲ್ಲ. ಮಾರ್ಚ್ 20 ರಿಂದ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸಗಳು ಶುರುವಾಗಲಿದೆಯಂತೆ.
ಅಕ್ಕ ಮಹಾದೇವಿ ಅವರ ವಚನ
ವಿಶೇಷ ಅಂದರೆ ಈ ಹಿಂದೆ ಅಕ್ಕ ಮಹಾದೇವಿ ಅವರ 'ಕನಸ ಕಂಡೆ..' ವಚನದ ವಿಡಿಯೋವನ್ನು ವಿನಯ್ ಭಾರಧ್ವಜ್ ಮಾಡಿದ್ದರು. ಆ ವಿಡಿಯೋದಲ್ಲಿಯೂ ನಟ ಶರತ್ ಮತ್ತು ನಟಿ ಹಿತಾ ಚಂದ್ರಶೇಖರ್ ನಟಿಸಿದ್ದರು.