ದಸರಾ ಚಿತ್ರೋತ್ಸವ: ಸದಭಿರುಚಿಯ ಚಿತ್ರಗಳಿಗೆ ಮನಸೋತ ಪ್ರೇಕ್ಷಕರು
ಮೈಸೂರು ದಸರಾ ಮಹೋತ್ಸವದ ಅಂಗವಾಗಿ ದಸರಾ ಚಲನಚಿತ್ರೋತ್ಸವವನ್ನ ಆಯೋಜಿಸಲಾಗಿದ್ದು, ಚಿತ್ರೋತ್ಸವಕ್ಕೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಸೆಪ್ಟಂಬರ್ 22 ರಿಂದ ದಸರಾ ಚಲನಚಿತ್ರೋತ್ಸವ ಆರಂಭವಾಗಿದ್ದು, ನಗರದ ಡಿ.ಆರ್.ಸಿ. ಮತ್ತು ಐನಾಕ್ಸ್ ನಲ್ಲಿ ಚಿತ್ರಮಂದಿರದಲ್ಲಿ ಕನ್ನಡ ಹಾಗೂ ವಿದೇಶಿ ಸಿನಿಮಾಗಳು ಪ್ರದರ್ಶನವಾಗುತ್ತಿದೆ.
ಈ ಬಗ್ಗೆ ಮೈಸೂರು ದಸರಾ ಚಲನಚಿತ್ರೋತ್ಸವ ಉಪಸಮಿತಿ ವಿಶೇಷಾಧಿಕಾರಿಗಳು ಹಾಗೂ ಅಪರ ಜಿಲ್ಲಾಧಿಕಾರಿ ಟಿ. ಯೋಗೇಶ್ ಸಂತಸ ವ್ಯಕ್ತಪಡಿಸಿದ್ದಾರೆ. ದಸರಾ ಚಿತ್ರೋತ್ಸವದ ಅನುಭವವನ್ನ ಹಂಚಿಕೊಂಡಿದ್ದಾರೆ.

22 ರಂದು ಡಿ.ಆರ್.ಸಿ. ಚಿತ್ರಮಂದಿರದಲ್ಲಿ 'ಆಕೆ' ಚಿತ್ರ ಉತ್ತಮ ಪ್ರದರ್ಶನ ಕಂಡಿತು. ಹಿರಿಯ ಚಿತ್ರ ನಟ ಸುಂದರ್ ರಾಜ್ ನಟಿಸಿರುವ 'ಲಿಫ್ಟ್ ಮ್ಯಾನ್' ಚಿತ್ರ ಪ್ರದರ್ಶನ ವೇಳೆ ಚಿತ್ರಮಂದಿರಕ್ಕೆ ಭೇಟಿ ನೀಡಿ ಪ್ರೇಕ್ಷಕರೊಡನೆ ಚಿತ್ರದ ಬಗೆಗೆ ಚರ್ಚೆ ಮಾಡಿದರು. ಶನಿವಾರ ಯುವ ಮನಸ್ಸುಗಳ ಪ್ರಶಂಸೆಗೆ ಪಾತ್ರವಾದ 'ಕಿರಿಕ್ ಪಾರ್ಟಿ' ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಯಿತು.
ಭಾನುವಾರ 'ಅಮರಾವತಿ' ಚಿತ್ರದ ನಿರ್ದೇಶಕರಾದ ಬಿ.ಎಂ. ಗಿರಿರಾಜ್ ಅವರು ಪಾಲ್ಗೊಂಡಿದ್ದು ಪ್ರೇಕ್ಷರಿಗೆ ವಿಶೇಷ ಅನುಭವ ನೀಡಿತು. ಐನಾಕ್ಸ್ ನಲ್ಲಿ ಹಿರಿಯ ನಿರ್ದೇಶಕ ಸುರೇಶ್ ಹೆಬ್ಬಿಕರ್ ಅವರ 'ಮನ ಮಂಥನ' ಶುಕ್ರವಾರ ತುಂಬಿದ ಪ್ರದರ್ಶನ ಕಂಡಿತು. ಭಾನುವಾರ ಸಂಜೆ 4 ಗಂಟೆಗೆ ಮೈಸೂರು ಕೇಂದ್ರ ಕಾರಾಗೃಹದಲ್ಲಿ 'ರಾಮಾ ರಾಮಾ ರೇ' ಚಿತ್ರ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು ಎಂದು ಯೋಗೇಶ್ ಹರ್ಷ ವ್ಯಕ್ತಪಡಿಸಿದರು.
ಇನ್ನು ಡಿ.ಆರ್.ಸಿ. ಚಿತ್ರಮಂದಿರದ ಮಾಲಿಕರಾದ ವೈಶಾಲಿ ಅವರು ಮಾತನಾಡಿ ಮೈಸೂರು ದಸರಾ ಚಿತ್ರೋತ್ಸವ ಯಶಸ್ವಿಯಾಗಿ ನಡೆದಿದೆ. ಕನ್ನಡದ ಸದಾಭಿರುಚಿಯ ಚಿತ್ರಗಳನ್ನು ಪ್ರೇಕ್ಷಕರು ಇಷ್ಟ ಪಟ್ಟು ನೋಡುತ್ತಿದ್ದಾರೆ. ಯಶಸ್ವಿ ಚಿತ್ರ ಕಿರಿಕ್ ಪಾರ್ಟಿ ತುಂಬಿದೆ ಪ್ರದರ್ಶನ ಕಂಡಿದೆ ಹಾಗೂ ಚಿತ್ರೋತ್ಸವ ಇನ್ನಷ್ಟು ನಿರೀಕ್ಷೆ ಹುಟ್ಟಿಸಿದೆ ಎಂದರು.
ಮೈಸೂರು ದಸರಾ ಚಲನಚಿತ್ರೋತ್ಸವ ಸೆಪ್ಟೆಂಬರ್ 28 ರವರೆಗೂ ನಡೆಯಲಿದ್ದು ಸಿನಿಮಾಸಕ್ತರಿಗೆ ಚಿತ್ರೋತ್ಸವ ಸಮಿತಿ ಐನಾಕ್ಸ್ ಗೆ ನೊಂದಣಿ ಅವಕಾಶವನ್ನು ಮಾಡಿಕೊಟ್ಟಿದೆ, ಆಸಕ್ತರು ನೋಂದಾಯಿಸಿಕೊಳ್ಳಬಹುದಾಗಿದೆ.


Click it and Unblock the Notifications











