Don't Miss!
- News Lok Sabha Election 2024: ಟಿಕೆಟ್ ಹಂಚಿಕೆಯ ಬಳಿಕ ಬಿಜೆಪಿಯ ಮುಂದೆ ಹೊಸ-ಹೊಸ ಸವಾಲುಗಳು
- Automobiles ಎಲೆಕ್ಟ್ರಿಕ್ ಲೋಕಕ್ಕೆ ಎಸ್ಯುವಿ ದೈತ್ಯನ ಎಂಟ್ರಿ: ಇನ್ನು ಉಳಿದ ಕಾರುಗಳನ್ನು ದೇವರೇ ಕಾಪಾಡಬೇಕು!
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Finance ಬೆಂಗಳೂರು-ತುಮಕೂರು ನಮ್ಮ ಮೆಟ್ರೋ ಯೋಜನೆ: ಬರಲಿವೆ 19 ಎತ್ತರದ ನಿಲ್ದಾಣಗಳು
- Technology iPhone: ಆಪಲ್ ಅಂತಿಮವಾಗಿ ಐಫೋನ್ 12 ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿಯೇ ಬಿಟ್ಟಿತು! ಏನದು?
- Lifestyle ಗುಡ್ಫ್ರೈಡೆ ಆಚರಣೆ ಹುಟ್ಟಿದ್ದು ಹೇಗೆ? ಇದರ ಮಹತ್ವವೇನು ಗೊತ್ತಾ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಯಶ್ಗೆ ಬೇಸರ ಮಾಡುವ ಉದ್ದೇಶ ನಮಗಿಲ್ಲ: ನಂದ ಕಿಶೋರ್
ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ನಾಯಕನಾಗಿ ನಟಿಸುತ್ತಿರುವ ಹೊಸ ಸಿನಿಮಾದ ಮುಹೂರ್ತ ಇಂದು ನೆರವೇರಿದ್ದು ಸಿನಿಮಾಕ್ಕೆ 'ರಾಣಾ' ಎಂದು ಹೆಸರಿಡಲಾಗಿದೆ. ಈ ಸಿನಿಮಾವನ್ನು ನಂದ ಕಿಶೋರ್ ನಿರ್ದೇಶನ ಮಾಡುತ್ತಿದ್ದಾರೆ.
'ರಾಣಾ' ಹೆಸರಿನಲ್ಲಿ ಯಶ್ ಸಿನಿಮಾ ಮಾಡುತ್ತಾರೆಂದು ಈಗಾಗಲೇ ಘೋಷಣೆ ಆಗಿತ್ತು. ಆ ಸಿನಿಮಾವನ್ನು ಹರ್ಷ ನಿರ್ದೇಶನ ಮಾಡುವುದಾಗಿ ನಿಶ್ಚಯವಾಗಿತ್ತು. ಆದರೆ ಈಗ ಅದೇ ಹೆಸರಿನಲ್ಲಿ ಸಿನಿಮಾ ಸೆಟ್ಟೇರಿದೆ.
ಮುಹೂರ್ತದ ಸಂದರ್ಭದಲ್ಲಿ ಈ ಬಗ್ಗೆ ಮಾತನಾಡಿದ ನಂದ ಕಿಶೋರ್, ''ರಾಣಾ' ಹೆಸರು ನಿರ್ಮಾಪಕ ಕೆ.ಮಂಜು ಅವರ ಬಳಿಯೇ ಇತ್ತು. ಸಿನಿಮಾದ ಕತೆ ಅಂತಿಮವಾದ ಮೇಲೆ ಸೂಕ್ತ ಹೆಸರಿಗಾಗಿ ಹುಡುಕುತ್ತಿದ್ದಾಗ ಕೆ.ಮಂಜು ಅವರ ನಿರ್ಮಾಣ ಸಂಸ್ಥೆಯ ಬಳಿ ಇರುವ ಹೆಸರುಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವುದು ಎಂದಾಯಿತು. ಆಗ ನಮಗೆ ಆಕರ್ಷಕವಾಗಿ ಕಂಡಿದ್ದು 'ರಾಣಾ' ಎಂದರು ನಂದ ಕಿಶೋರ್.
ನಾವು ಮಾಡುತ್ತಿರುವ ಆಕ್ಷನ್ ಥ್ರಿಲ್ಲರ್ ಕತೆಗೆ 'ರಾಣಾ' ಹೆಸರು ಚೆನ್ನಾಗಿ ಒಪ್ಪಿಗೆ ಆಗುತ್ತದೆ ಎಂಬ ಕಾರಣಕ್ಕೆ ನಾವು ಹೆಸರು ಆಯ್ಕೆ ಮಾಡಿದೆವೇ ಹೊರತು ಯಾರಿಗಾದರೂ ಬೇಸರ ಮಾಡಬೇಕು. ಅವರ ಬಳಿಯಿಂದ ಹೆಸರನ್ನು ಎತ್ತಿಕೊಂಡ ಬರಬೇಕು ಎಂಬ ಉದ್ದೇಶ ನಮಗೆ ಇರಲಿಲ್ಲ'' ಎಂದಿದ್ದಾರೆ ನಂದ ಕಿಶೋರ್.
''ಹೊಸ ನಾಯಕರಿಗೆ ಬೇಕಾದಂತಹಾ ಪಬ್ಲಿಸಿಟಿ 'ರಾಣಾ' ಟೈಟಲ್ನಲ್ಲಿ ಇದೆ. 'ರಾಣಾ' ಹೆಸರು ಕೇಳಿದಾಗ ಆ ಹೆಸರು ನಮ್ಮ ನಾಯಕ ಶ್ರೇಯಸ್ಗೆ ಹಾಗೂ ಆತ ಮಾಡುತ್ತಿರುವ ಪಾತ್ರಕ್ಕೆ ಸೂಟ್ ಆಗುತ್ತದೆ ಎನಿಸಿತು ಹಾಗಾಗಿ ಸಿನಿಮಾಕ್ಕೆ ಅದೇ ಹೆಸರಿಟ್ಟಿದ್ದೇವೆ'' ಎಂದಿದ್ದಾರೆ ನಂದ ಕಿಶೋರ್.
Recommended Video
'ರಾಣಾ' ಸಿನಿಮಾದ ಬಗ್ಗೆ ಮಾತನಾಡಿದ ನಂದ ಕಿಶೋರ್, ಇದೊಂದು ಆಕ್ಷನ್ ಥ್ರಿಲ್ಲರ್ ಸಿನಿಮಾ, ದೊಡ್ಡ ಕಥಾ ಹಂದರ ಅಲ್ಲದೇ ಇದ್ದರೂ ಪ್ರಾಮಾಣಿಕ ಪ್ರಯತ್ನ ಮತ್ತು ಒಂದೊಳ್ಳೆ ಮನರಂಜನಾತ್ಮಕ ಸಿನಿಮಾ ಇದಾಗಿರಲಿದೆ'' ಎಂದಿದ್ದಾರೆ.