Don't Miss!
- News Toilet Photo Viral: ಕಡಿಮೆ ಖರ್ಚಿನಲ್ಲಿ 'ಲೀಕೆಜ್ ಟ್ಯಾಂಕರ್'ನಿಂದ ಟಾಯ್ಲೆಟ್ ನಿರ್ಮಾಣ: ನೀವೂ ಟ್ರೈ ಮಾಡಿ
- Sports IPL 2024: ಹೈದರಾಬಾದ್-ಡೆಲ್ಲಿ ನಡುವೆ ಮೆಗಾ ಫೈಟ್; ಟಾಸ್, ಆಡುವ 11ರ ಬಳಗದ ವರದಿ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಈ ವಾರ 'ನಟರಾಜ ಸರ್ವೀಸ್' ಜೊತೆಗೆ 'ಬದ್ಮಾಶ್' ಚಿತ್ರವನ್ನ ನೋಡಿ
500, 1000 ನೋಟುಗಳಿಲ್ಲದೇ ಜನರ ಪರದಾಟವಿದ್ರೂ, ಸ್ಯಾಂಡಲ್ ವುಡ್ ನಲ್ಲಿ ಎರಡು ಚಿತ್ರಗಳು ಈ ವಾರ ಬಿಗ್ ಸ್ಕ್ರೀನ್ ಗೆ ಲಗ್ಗೆಯಿಡುತ್ತಿದೆ. ನಿಮ್ಮ ಆಯ್ಕೆ ಯಾವುದು?
ಕಳೆದ ವಾರ ಸಿನಿಮಾಗಳಿಲ್ಲದೇ ಮಂಕಾಗಿದ್ದ ಸ್ಯಾಂಡಲ್ ವುಡ್ ನಲ್ಲಿ ಈ ವಾರ ಡಬಲ್ ಧಮಾಕ. ಎರಡು ನಿರೀಕ್ಷೆಯ ಚಿತ್ರಗಳು ಈ ವಾರ ತೆರೆಗೆ ಬರ್ತಿದ್ದು, ಚಿತ್ರಪ್ರೇಮಿಗಳು ಖುಷಿ ಖುಷಿಯಾಗಿ ಸಿನಿಮಾ ನೋಡಬಹುದು.
ಶರಣ್ ಹಾಗೂ ಮಯೂರಿ ಅಭಿನಯದ 'ನಟರಾಜ ಸರ್ವೀಸ್' ಹಾಗೂ ಸ್ಪೆಷಲ್ ಸ್ಟಾರ್ ಧನಂಜಯ್ ಅಭಿನಯದ 'ಬದ್ಮಾಶ್' ಚಿತ್ರಗಳು ಈ ವಾರ ಪ್ರೇಕ್ಷಕರೆದುರು ಬರುತ್ತಿದೆ.['ಮುಕುಂದ ಮುರಾರಿ'ಯಿಂದ 'ನಟರಾಜ'ನಿಗೆ ಕಷ್ಟ-ಕಷ್ಟ]
ಎಲ್ಲ ಅಂದುಕೊಂಡಂತೆ ಆಗಿದ್ದರೇ, 'ನಟರಾಜ ಸರ್ವೀಸ್' ಚಿತ್ರ ಅಕ್ಟೋಬರ್ 21ರಂದು ಬಿಡುಗಡೆಯಾಗಬೇಕಿತ್ತು. ಆದ್ರೆ, ಚಿತ್ರಮಂದಿರಗಳ ಅಭಾವದಿಂದ ನಾಳೆ ಅಂದ್ರೆ, ನವೆಂಬರ್ 17 ರಂದು ತೆರೆಕಾಣುತ್ತಿದೆ.[ಸೆನ್ಸಾರ್ ಪಾಸ್ ಆದ ನಟರಾಜ' ಅಕ್ಟೋಬರ್ 20ಕ್ಕೆ ಬರ್ತಾವ್ನೆ ! ]
'ನಟರಾಜ್ ಸರ್ವೀಸ್', ಈ ಚಿತ್ರವನ್ನ ಪವನ್ ಒಡೆಯರ್ ನಿರ್ದೇಶನ ಮಾಡಿದ್ದಾರೆ. ಇದು ಪಕ್ಕಾ ಕಾಮಿಡಿ ಎಂಟರ್ಟೈನರ್ ಚಿತ್ರವಾಗಿದ್ದು, ಸಾಮಾನ್ಯ ಮನುಷ್ಯನ ಸಣ್ಣ ಸಣ್ಣ ಅಂಶಗಳನ್ನಿಟ್ಟು ಕಥೆ ಎಣೆಯಲಾಗಿದೆ.
ಶರಣ್ ಗೆ ಕೃಷ್ಣಲೀಲಾ ಖ್ಯಾತಿಯ ಮಯೂರಿ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಮೊದಲ ಬಾರಿಗೆ ಇವರಿಬ್ಬರು ತೆರೆ ಹಂಚಿಕೊಂಡಿದ್ದಾರೆ. ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಮಾಡಿದ್ದು, ಈಗಾಗಲೇ ಹಾಡುಗಳು ಸೂಪರ್ಹಿಟ್ ಎನಿಸಿಕೊಂಡಿದೆ.
ಇನ್ನೂ ಸ್ಪೆಷಲ್ ಹೀರೋ 'ಧನಂಜಯ್ ಬಹು ನಿರೀಕ್ಷಿತ ಚಿತ್ರ 'ಬದ್ಮಾಶ್', ಇದೇ ವಾರ ಅಂದ್ರೆ, ನವೆಂಬರ್ 18 ರಂದು ಚಿತ್ರಮಂದಿರಕ್ಕೆ ಲಗ್ಗೆಯಿಡುತ್ತಿದೆ.[ಸ್ಪೆಷಲ್ ವ್ಯಕ್ತಿಯಿಂದ 'ಬದ್ಮಾಶ್' ಸ್ಪೆಷಲ್ ಟ್ರೈಲರ್ ಬಿಡುಗಡೆ ]
ಧನಂಜಯ್ ಗೆ ಸಂಚಿತಾ ಶೆಟ್ಟಿ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಈಗಾಗಲೇ 'ಬದ್ಮಾಶ್' ಚಿತ್ರದ ಟ್ರೈಲರ್ ಗೆ ಉತ್ತಮ ಪ್ರಶಂಸೆ ಸಿಕ್ಕಿದ್ದು, ಸಲ್ಮಾನ್ ಖಾನ್, ಶಿವರಾಜ್ ಕುಮಾರ್, ಟಾಲಿವುಡ್ ನಿರ್ಮಾಪಕರು ಸೇರಿದಂತೆ ಹಲವರು ಮೆಚ್ಚುಗೆ ವ್ತಕ್ತಪಡಿಸಿದ್ದಾರೆ. ಆಕಾಶ್ ಶ್ರೀವತ್ಸ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ರವಿ ಕಶ್ಯಪ್ ಅವರು ಬಂಡವಾಳ ಹೂಡಿದ್ದಾರೆ.[ತೆಲುಗಿನಲ್ಲಿ 'ಬದ್ಮಾಶ್' ಆಗ್ತಾರಾ ಅಲ್ಲು ಅರ್ಜುನ್.? ]
ಸದ್ಯ, ದೇಶಾದ್ಯಂತ 500 ಹಾಗೂ 1000 ಸಾವಿರ ರೂಪಾಯಿ ನೋಟುಗಳನ್ನ ಬ್ಯಾನ್ ಮಾಡಿದ್ದು, ದಿನನಿತ್ಯದ ಖರ್ಚಿಗಾಗಿ ಜನರ ಪರದಾಡುತ್ತಿದ್ದಾರೆ. ಹೀಗಿರುವಾಗ ಜನರ ಸಿನಿಮಾ ನೋಡಲು ಬರುತ್ತಾರ ಎಂಬ ಅನುಮಾನದ ನಡುವೆ ಇವೆರೆಡು ಚಿತ್ರಗಳು ರಿಲೀಸ್ ಆಗುತ್ತಿವೆ. ಈ ಸಮಸ್ಯೆಯ ನಡುವೆಯೂ ನೀವು ಸಿನಿಮಾ ನೋಡುವುದಾದರೇ, ಯಾವ ಚಿತ್ರಕ್ಕೆ ಹೋಗಬೇಕು ಅಂತ ಈಗಲೇ ಡಿಸೈಡ್ ಮಾಡಿ.