Don't Miss!
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- News ಮಂಡ್ಯದ ‘ಹಲವು ಸುಮಲತಾ’ ತಂತ್ರ ಬೆಂಗಳೂರು ಗ್ರಾಮಾಂತದಲ್ಲೂ ಬಂತಾ? ಮತ್ತೊಬ್ಬ ಡಾ ಸಿಎನ್ ಮಂಜುನಾಥ್ ಕಣಕ್ಕೆ!
- Sports IPL 2024: ರಾಜಸ್ಥಾನ್ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ರೋಚಕ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Lifestyle ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಕರುನಾಡ ಕಲಾರತ್ನ'ನಾದ ಚಾಲೆಂಜಿಂಗ್ ಸ್ಟಾರ್ ದರ್ಶನ್
'ಮೆಜೆಸ್ಟಿಕ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ನಟ ದರ್ಶನ್. ಅಲ್ಲಿಂದ ಅಭಿಮಾನಿಗಳ ಪ್ರೀತಿಯ 'ದಾಸ'ನಾಗಿ, ಬೇರೆಲ್ಲಾ ನಟರ ಮುಂದೆ 'ಚಾಲೆಂಜಿಂಗ್ ಸ್ಟಾರ್' ಆಗಿ ಬೆಳೆದ ದರ್ಶನ್ ಗೆ ಇದೀಗ ಹೊಸ ನಾಮಕರಣವಾಗಿದೆ.
ತಮ್ಮ ಹೆಸರನ್ನ ದರ್ಶನ್ ಬದಲಾಯಿಸಿಕೊಂಡಿದ್ದಾರಾ? ಅಂತ ಅಚ್ಚರಿ ಪಡಬೇಡಿ. ಹೊಸ ನಾಮಕರಣ ಅಂದ್ರೆ, ಅಭಿಮಾನಿ ಬಳಗ ದರ್ಶನ್ ಗೆ ಹೊಸ ಬಿರುದು ಕೊಟ್ಟಿದ್ದಾರೆ. ಅದು 'ಕರುನಾಡ ಕಲಾರತ್ನ' ಅಂತ.
ಹೌದು, ಕರುನಾಡಿನ ಹೊಸ ಕಲಾರತ್ನ ಈಗ 'ಚಾಲೆಂಜಿಂಗ್ ಸ್ಟಾರ್' ದರ್ಶನ್. ಕೆಲ ವರ್ಷಗಳ ಹಿಂದೆಯಷ್ಟೇ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗೆ ಅಭಿಮಾನಿಗಳೆಲ್ಲಾ ಸೇರಿ 'ಕರುನಾಡ ಚಕ್ರವರ್ತಿ' ಅಂತ ಬಿರುದು ಕೊಟ್ಟಿದ್ದರು.
'ಭಜರಂಗಿ' ಚಿತ್ರದ ಎಲ್ಲಾ ಪೋಸ್ಟರ್ ಗಳಲ್ಲೂ ಶಿವಣ್ಣ 'ಕರುನಾಡ ಚಕ್ರವರ್ತಿ'ಯಾಗಿ ಮಿಂಚಿದ್ದರು. ಇದೀಗ ಅದಕ್ಕೆ ಚಾಲೆಂಜ್ ಮಾಡಿರುವ ದರ್ಶನ್ ಫ್ಯಾನ್ಸ್, ಎಲ್ಲೇ ಹೋದರೂ ದರ್ಶನ್ ಗೆ 'ಕರುನಾಡ ಕಲಾರತ್ನ' ಅಂತ ಜೈಕಾರ ಹಾಕುತ್ತಿದ್ದಾರೆ. ['ಫೇಸ್ ಬುಕ್'ನಲ್ಲಿ ಅಪ್ಪು-ದಚ್ಚು ಅಭಿಮಾನಿಗಳ ಅಚ್ಚು-ರಚ್ಚು]
ದರ್ಶನ್ ಹುಟ್ಟುಹಬ್ಬದ ದಿನವೂ ಕೂಡ, ಚಾಲೆಂಜಿಂಗ್ ಸ್ಟಾರ್ ಮನೆ ಮುಂದೆ 'ಕರುನಾಡ ಕಲಾರತ್ನ' ಅನ್ನುವ ಜಯಘೋಷ ಕೇಳಿಬಂದಿತ್ತು. ಇದೀಗ ಅದು ಅಧಿಕೃತವಾಗಿದೆ. (ಫಿಲ್ಮಿಬೀಟ್ ಕನ್ನಡ)