Don't Miss!
- News
ಮೈಸೂರು-ಬೆಳಗಾವಿ ವಿಶ್ವಮಾನವ ಎಕ್ಸ್ಪ್ರೆಸ್ ರೈಲಿನ ಸಮಯದಲ್ಲಿ ಬದಲಾವಣೆ: ನಿಲುಗಡೆ, ಸಮಯದ ಮಾಹಿತಿ ಇಲ್ಲಿ ಪಡೆಯಿರಿ
- Sports
WIPL Auction 2023: ಫೆ.13ರಂದು ಮುಂಬೈನಲ್ಲಿ ಮಹಿಳಾ ಐಪಿಎಲ್ ಹರಾಜು ನಡೆಯುವ ಸಾಧ್ಯತೆ
- Finance
ಉದ್ಯೋಗಿಗಳಿಗೆ ಟೊಯೋಟಾ ಗ್ಲಾನ್ಜಾ ಗಿಫ್ಟ್ ನೀಡಿದ ರಮೇಶ್ ಮರಂದ್ ಯಾರು?
- Automobiles
ಭಾರತದಲ್ಲಿ ದುಬಾರಿ ಬೆಲೆಯ ಈ ಕಿಯಾ ಕಾರಿಗೆ ಭಾರೀ ಡಿಮ್ಯಾಂಡ್: ಇನೋವಾಗೆ ಹೆಚ್ಚಿದ ಪೈಪೋಟಿ
- Lifestyle
ಸುಖಿ ಸಂಸಾರ ಅಂತ ಇದ್ದರೂ ಗಂಡ ಅನೈತಿಕ ಸಂಬಂಧ ಬೆಳೆಸುವುದೇಕೆ?
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅಪ್ಪು ಸ್ಥಾನವನ್ನು ಯಾರು ತುಂಬ್ತಾರೆ ಎಂಬ ಪ್ರಶ್ನೆಗೆ ಶಿವಣ್ಣ ಕೊಟ್ಟ ಉತ್ತರವಿದು
ಕನ್ನಡ ಚಿತ್ರರಂಗದ ಮೇರುನಟ ಡಾ ರಾಜ್ಕುಮಾರ್ ಅವರ ಕುಟುಂಬ ಈ ಹಿಂದಿನಿಂದಲೂ ಚಿತ್ರರಂಗಕ್ಕೆ ಸಕಲಕಲೆ ಬಲ್ಲಂತಹ ನಟರನ್ನು ನೀಡುತ್ತಾ ಬಂದಿದೆ. ರಾಜ್ ಕುಟುಂಬದ ಕುಡಿಗಳು ಫ್ಯಾಮಿಲಿ ಬ್ಯಾಕ್ಗ್ರೌಂಡ್ನಿಂದ ಚಿತ್ರರಂಗ ಪ್ರವೇಶಿಸಿದರೂ ಸಹ ತಮ್ಮದೇ ಆದ ಸ್ವಂತ ಕಲೆಯಿಂದ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆನಿಂತರು ಹಾಗೂ ಸ್ಟಾರ್ ನಟರಾದರು.
ಇನ್ನು ಶಿವ ರಾಜ್ಕುಮಾರ್ ಹಾಗೂ ಪುನೀತ್ ರಾಜ್ಕುಮಾರ್ ಚಿತ್ರರಂಗವನ್ನು ಸಾಲು ಸಾಲು ಹಿಟ್ ಚಿತ್ರಗಳ ಮೂಲಕ ಆಳಿದ ನಂತರ ಮುಂದೆ ರಾಜ್ ಕುಟುಂಬದ ಯಾವ ನಟ ಚಿತ್ರರಂಗದಲ್ಲಿ ದೊಡ್ಡ ನಟನಾಗಿ ರಾಜ್ ಕುಟುಂಬದ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಬಹುದು ಎಂಬ ಪ್ರಶ್ನೆ ಇದೆ ಹಾಗೂ ಈ ಕುರಿತಾಗಿ ಚರ್ಚೆಗಳೂ ಸಹ ನಡೆಯುತ್ತಾ ಇರುತ್ತವೆ.
ಅದರಲ್ಲೂ ಚಿತ್ರರಂಗದ ಅತಿ ಯಶಸ್ವಿ ನಟ ಪುನೀತ್ ರಾಜ್ಕುಮಾರ್ ಅಕಾಲಿಕ ಮರಣದ ನಂತರ ರಾಘವೇಂದ್ರ ರಾಜ್ಕುಮಾರ್ ಅಪ್ಪು ಸ್ಥಾನವನ್ನು ತುಂಬಬಲ್ಲ ನಟ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಪ್ಪು ರೀತಿಯೇ ಹೆಜ್ಜೆ ಹಾಕುವ, ಸ್ಟಂಟ್ ಮಾಡುವ ಕಲೆಯನ್ನು ಈಗಾಗಲೇ ಕರಗತ ಮಾಡಿಕೊಂಡಿರುವ ಯುವ ರಾಜ್ಕುಮಾರ್ ಮೇಲೆ ರಾಜ್ವಂಶದ ಅಭಿಮಾನಿಗಳಿಗೆ ಅಪಾರವಾದ ನಂಬಿಕೆ ಇದೆ. ಇನ್ನು ಈ ವಿಚಾರದ ಬಗ್ಗೆ ಫಿಲ್ಮಿಬೀಟ್ ಕನ್ನಡ ಸಂದರ್ಶನದಲ್ಲಿ ಮಾತನಾಡಿದ ಶಿವ ರಾಜ್ಕುಮಾರ್ ಸಹ ಮನಬಿಚ್ಚಿ ಮಾತನಾಡಿದ್ದು, ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಎಲ್ಲರೂ ನಮ್ಮ ಮಕ್ಕಳೇ
ಯುವ ರಾಜ್ಕುಮಾರ್ ಪುನೀತ್ ರಾಜ್ಕುಮಾರ್ ಸ್ಥಾನ ತುಂಬಬಲ್ಲರೇ ಎಂಬ ಪ್ರಶ್ನೆಗೆ ಉತ್ತರಿಸಿದ ಶಿವ ರಾಜ್ಕುಮಾರ್ "ಯುವ ರಾಜ್ಕುಮಾರ್ ಮಾತ್ರ ಅಲ್ಲ, ಅವನ ಅಣ್ಣ ವಿನಯ್ ರಾಜ್ಕುಮಾರ್ ಇದಾನೆ, ಪೂರ್ಣಿಮಾ ಮಗ ಧೀರೆನ್ ಇದಾನೆ, ಮಗಳು ಧನ್ಯಾ ಇದಾಳೆ. ಎಲ್ಲರೂ ನಮ್ಮ ಮಕ್ಕಳೇ. ಎಲ್ಲರೂ ರಾಜ್ ಕುಟುಂಬದ ಕುಡಿಗಳೇ. ಯಾರು ಬೆಳೆದರೂ ಖುಷಿನೇ" ಎಂದು ಹೇಳಿಕೆ ನೀಡಿದರು.

ವಿನಯತೆ ಇದ್ದರೆ ಸಾಕು
ಇನ್ನೂ ಮುಂದುವರಿದು ಮಾತನಾಡಿದ ಶಿವ ರಾಜ್ಕುಮಾರ್ ಯಾರು ಸಹ ಯಾರ ಸ್ಥಾನವನ್ನು ತುಂಬುವ ಅಗತ್ಯವಿಲ್ಲ, ಇವರು ವಿನಯತೆಯಿಂದ ವಿಧೇಯರಾಗಿ ನಡೆದುಕೊಂಡು ಹೋಗಿಬಿಟ್ರೆ ಸಾಕು, ಅಪ್ಪು ಸ್ಥಾನ ಅಪ್ಪುಗೆ, ರಾಜ್ಕುಮಾರ್ ಸ್ಥಾನ ರಾಜ್ಕುಮಾರ್ ಅವರಿಗೆ ಎಂದರು. ಹಾಗೂ ಇಲ್ಲಿ ಸ್ಥಾನ ತುಂಬಲು ಇದು ಕಿಂಗ್ಡಮ್ ಅಲ್ಲ, ಇಡೀ ಚಿತ್ರರಂಗ ಒಂದು ಕುಟುಂಬ ಇಲ್ಲಿ ಯಾರು ಬೇಕಾದ್ರೂ ಸ್ಟಾರ್ ಆಗಬಹುದು ಎಂದು ಸ್ವತಃ ಅಪ್ಪಾಜಿಯೇ ಹೇಳುತ್ತಿದ್ದರು ಎಂದು ಶಿವ ರಾಜ್ಕುಮಾರ್ ತಿಳಿಸಿದರು.

ಸುದೀಪ್ ಇದ್ದಾರೆ, ದರ್ಶನ್ ಇದ್ದಾರೆ
ಇನ್ನು ಕನ್ನಡ ಚಿತ್ರರಂಗವೆಂದರೆ ಕೇವಲ ರಾಜ್ಕುಮಾರ್ ಕುಟುಂಬದ ನಟರಲ್ಲ ಎಂದ ಶಿವ ರಾಜ್ಕುಮಾರ್ "ಇದರಲ್ಲಿ ಸುದೀಪ್ ಇದಾರೆ, ದರ್ಶನ್ ಇದಾರೆ, ಯಶ್ ಇದಾರೆ, ಉಪೇಂದ್ರ ಇದಾರೆ, ರಿಷಬ್ ಶೆಟ್ಟಿ ಇದಾರೆ, ಗಣೇಶ್ ಇದಾರೆ, ಧೃವ ಸರ್ಜಾ ಇದಾರೆ, ನಾವೆಲ್ಲಾ ಒಂದು ಫ್ಯಾಮಿಲಿ. ಇಲ್ಲಿಗೆ ಹೊಸಬರು ಬರ್ತಾರೆ, ಅವರಿಗೆಲ್ಲಾ ನಾನು ಒಳ್ಳೆ ರೀತಿಯಲ್ಲಿ ನಡೆದುಕೊಂಡು ಬೆಳೆಯಿರಿ ಎಂದು ಹೇಳಲು ಇಚ್ಛಿಸುತ್ತೇನೆ" ಎಂದರು.